ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

☀"ಮಾದರಿ ಪ್ರಶ್ನೆ ಪತ್ರಿಕೆ 2-2015 ಸಾಮಾನ್ಯ ಜ್ಞಾನ. (ಎಸ್ ಡಿ ಎ (SDA) ಮತ್ತು ಎಫ್ ಡಿ ಎ (FDA) ಪರೀಕ್ಷಾ ವಿಶೇಷಾಂಕ) ●ಸಾಮಾನ್ಯ ಜ್ಞಾನ (GENERAL KNOWLEDGE)

ಪ್ರಶ್ನೆ ನಂ: 1) ಫುಟ್ಬಾಲ್ ಮತ್ತು ಕ್ರಿಕೆಟ್ ಕ್ರೀಡೆಗಳ ವಿಶ್ವಕಪ್ ಪಂದ್ಯಾವಳಿಗಳನ್ನು ಆಡಿದ ವಿಶ್ವದ ಏಕೈಕ ಆಟಗಾರ ಯಾರು ?


1. ಎ.ಬಿ.ಡಿವಿಲಿಯರ್ಸ್
2. ಗ್ಯಾರಿ ಸೋಬರ್ಸ್
3. ವಿವಿಯನ್ ರಿಚರ್ಡ್ಸ್√
4. ರೋಜರ್ ಮಿಲ್ಲಾ


ಪ್ರಶ್ನೆ ನಂ: 2) ಇತ್ತೀಚೆಗೆ ನಿಧನರಾದ 'ದೇವನ್ ವರ್ಮಾ'ರವರಿಗೆ 3ನೇ ಬಾರಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಂದುಕೊಟ್ಟ ಚಿತ್ರ ಯಾವುದು?


A] ಅಂಗೂರ್√
B] ಧರ್ಮಪುತ್ರ
C] ಅನುಪಮಾ
D] ಭಾಮೋಶಿ


ಪ್ರಶ್ನೆ ನಂ: 3) 2014 ರ FIFA ಫುಟ್ಬಾಲ್ ವಿಶ್ವಕಪ್ ನಲ್ಲಿ ಫೈನಲ್ ಪಂದ್ಯವನ್ನು ಆಡಿದ ರಾಷ್ಟ್ರಗಳು ಯಾವುವು?


A] ಬ್ರೆಜಿಲ್ ಮತ್ತು ಜರ್ಮನಿ
B] ಜರ್ಮನಿ ಮತ್ತು ಇಟಲಿ
C] ಅರ್ಜೆಂಟೈನ ಮತ್ತು ನೆದರ್‌ಲ್ಯಾಂಡ್
D] ಅರ್ಜೆಂಟೈನ ಮತ್ತು ಜರ್ಮನಿ √


ಪ್ರಶ್ನೆ ನಂ: 4) ಇತ್ತೀಚೆಗೆ ಆಂಧ್ರ ಪ್ರದೇಶದ ನೂತನ ರಾಜಧಾನಿಯಾಗಿ ಘೋಸಿಸಲ್ಪಟ್ಡ ಐತಿಹಾಸಿಕ ಪಟ್ಟಣ ಯಾವುದು?


A] ಅಮರಾವತಿ √
B] ಚಿದಂಬರಂ
C] ವೈಜಯಂತಿ
D] ಅಮರೇಶ್ವರ್


ಪ್ರಶ್ನೆ ನಂ: 5) 2015 ರ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ (Captain) ಯಾರು?


A] ಅಲ್ಲನ್ ಬಾರ್ಡರ್
B] ಸ್ವಿಟ್ ವಾಘ್
C] ತಿಕೋಟದಲ್ಲಿ ಪಾಂಟಿಂಗ್
D] ಮೈಕೆಲ್ ಕ್ಲಾರ್ಕ್ √

ಪ್ರಶ್ನೆ ನಂ: 6) ಸೂರ್ಯ ಮತ್ತು ನಕ್ಷತ್ರಗಲ್ಲಿ ಶಕ್ತಿಯು ಈ ಕೆಳಕಂಡ ಪ್ರಕ್ರಿಯೆಯಿಂದ ಬಿಡುಗಡೆಯಾಗುತ್ತದೆ?


A] ಹಗುರ ನ್ಯೂಕ್ಲಿಯಸ್ ಗಳ ಸಮ್ಮಿಲನದಿಂದ ಭಾರವಾದ ನ್ಯೂಕ್ಲಿಯಸ್ ಗಳು ರೂಪುಗೊಳ್ಳುವುದು.√  
B] ಭಾರವಾದ ನ್ಯೂಕ್ಲಿಯಸ್ ಗಳು ವಿದಳನಗೊಂಡು ಹಗುರ ನ್ಯೂಕ್ಲಿಯಸ್ ಗಳಾಗುವುದು.
C] ಅನಿಲಗಳ ದಹನ ಕ್ರಿಯೆ
D] ರೇಡಿಯೋ ವಿಕಿರಣ ಕ್ರಿಯೆ


ಪ್ರಶ್ನೆ ನಂ: 7) ಅಂಕೋಲಾದ ಉಪ್ಪಿನ ಸತ್ಯಾಗ್ರಹ ನೇತೃತ್ವವನ್ನು ವಹಿಸಿದವರು ಯಾರು?


A] ಎಂ.ಪಿ.ನಾಡಕರ್ಣಿ√
B] ಆರ್.ಆರ್.ದಿವಾಕರ್
C] ಮಂಜಪ್ಪ ಹರ್ಡಿಕರ್
D] ಪಂಡಿತ ತಾರಾನಾಥ


ಪ್ರಶ್ನೆ ನಂ: 8) 'ಸಾರ್ಕ್ ವಿಕೋಪ ನಿರ್ವಹಣಾ ಕೇಂದ್ರ' ಯಾವ ಸ್ಥಳದಲ್ಲಿ ಪ್ರಾರಂಭಿಸಲ್ಪಟ್ಟಿದೆ?


A] ಮುಂಬಯಿ
B] ಬೆಂಗಳೂರು
C] ನವ ದೆಹಲಿ√
D] ನೊಯಿಡಾ


ಪ್ರಶ್ನೆ ನಂ: 9) ಭೂಮಿಯ ವಿಮೋಚನೆ ವೇಗ ಎಷ್ಟು?


A] 11.2 ಕಿ.ಮೀ / ಸೆಕೆಂಡ್√
B] 11.0 ಕಿ.ಮೀ / ಸೆಕೆಂಡ್
C] 12.2 ಕಿ.ಮೀ / ಸೆಕೆಂಡ್
D] 11.6 ಕಿ.ಮೀ / ಸೆಕೆಂಡ್


ಪ್ರಶ್ನೆ ನಂ: 10) ಈ ಕೆಳಗಿನ ಯಾವ ಹೇಳಿಕೆ ಯಾವುದು ತಪ್ಪಾಗಿದೆ?


1.ರಾಜ್ಯದಲ್ಲಿ 6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಲಿಂಗಾನುಪಾತ: 943.
2.ರಾಜ್ಯದಲ್ಲಿ ಜನ ಸಾಂದ್ರತೆ ಪ್ರಮಾಣ ಪ್ರತಿ ಚದುರ ಕಿ.ಮೀ.ಗೆ: 319.
3.ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ 2011ರಲ್ಲಿ ಶೇ.75.60ಕ್ಕೆ ಏರಿಕೆಯಾಗಿದೆ.
-ಸಂಕೇತಗಳು


A] 1 ಮತ್ತು 2 ಮಾತ್ರ
B] 2 ಮತ್ತು 3 ಮಾತ್ರ
C] 1 ಮತ್ತು 3 ಮಾತ್ರ
D] ಎಲ್ಲವೂ ಸರಿ.√


ಪ್ರಶ್ನೆ ನಂ: 11) ಹೊಂದಿಸಿ ಬರೆಯಿರಿ.

   ಮರುಭೂಮಿಗಳು            ದೇಶ
ಎ) ತಾಕ್ಲಾ ಮಾಕಾನ್       1) ಆಸ್ಟ್ರೇಲಿಯಾ                                
ಬಿ) ಕಲಹರಿ                      2) ಚಿಲಿ
ಸಿ) ಗ್ರೇಟ್ ವಿಕ್ಟೋರಿಯಾ    3) ಚೀನಾ
ಡಿ) ಪಟಗೋನಿಯನ್          4) ದಕ್ಷಿಣ ಆಪ್ರಿಕಾ
ಇ) ಅಟಕಾಮಾ                 5) ಅರ್ಜೆಂಟೈನಾ
-ಸಂಕೇತಗಳು


ಎ)ಎ-1. ಬಿ-2. ಸಿ -3. ಡಿ-5. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -3. ಬಿ-4. ಸಿ -1. ಡಿ-5. ಇ-2√
ಡಿ)ಎ-1. ಬಿ-5. ಸಿ -2. ಡಿ-4. ಇ-3


ಪ್ರಶ್ನೆ ನಂ: 12) 'New India and Common Wheel' ಎಂಬ ಪತ್ರಿಕೆಗಳನ್ನು ಹೊರಡಿಸಿದವರು?


A] ಅನಿಬೆಸಂಟ್√
B] ದಾದಾಬಾಯಿ ನೌರೋಜಿ
C] ರಾಜಾರಾಮ್ ಮೋಹನ್ ರಾಯ್
D] ದೇವೇಂದ್ರನಾಥ ಠಾಗೋರ್


ಪ್ರಶ್ನೆ ನಂ: 13) ಹೊಂದಿಸಿ ಬರೆಯಿರಿ.

2014 ನೇ ಸಾಲಿನ ನೊಬೆಲ್‌ ಪ್ರಶಸ್ತಿಗಳು ಪುರಸ್ಕೃತರು


ಎ) ಸಾಹಿತ್ಯ ವಿಭಾಗ 1) ಕೈಲಾಶ್‌ ಸತ್ಯಾರ್ಥಿ ಮತ್ತು ಮಲಾಲ ಬಿ) ಶಾಂತಿ ವಿಭಾಗ 2) ಜಿನ್‌ ಟಿರೋಲ್‌
ಸಿ) ಅರ್ಥಶಾಸ್ತ್ರ ವಿಭಾಗ 3) ಜಾನ್ ಓ ಕೀಫೆ, ಬ್ರಿಟ್‌ ಮೋಸರ್‌ ಮತ್ತು ಎಡ್ವರ್ಡ್‌ ಐ
ಡಿ) ಸೈಕಲಾಜಿ ಅಥವಾ ಔಷಧಿ 4) ಪ್ಯಾಟ್ರಿಕ್‌ ಮೊಡಿಯಾನೊ
ಸಂಕೇತಗಳು
A] ಎ-1. ಬಿ-2. ಸಿ -3. ಡಿ-4.
B] ಎ-4. ಬಿ-1. ಸಿ-2. ಡಿ-3.√
C] ಎ -2. ಬಿ-1. ಸಿ -4. ಡಿ-3.
D] ಎ-1. ಬಿ-4. ಸಿ -3. ಡಿ-4.


ಪ್ರಶ್ನೆ ನಂ: 14) ಮಂಜುಗಡ್ಡೆಯು ನೀರಿನಲ್ಲಿ ತೇಲುತ್ತದೆ ಆದರೆ ಆಲ್ಕೋಹಾಲ್ ನಲ್ಲಿ ಮುಳುಗುತ್ತದೆ. ಏಕೆಂದರೆ,


A] ಇದು ನೀರಿನ ಶೀತಘನಿಕೃತ ರೂಪವಾಗಿದೆ.
B] ನೀರು ಆಲ್ಕೋಹಾಲ್ ಗಿಂತ ಪಾರದರ್ಶಕವಾಗಿದೆ.
C] ಮಂಜುಗಡ್ಡೆಯು ಘನವಸ್ತು, ಆದರೆ ಆಲ್ಕೋಹಾಲ್ ದ್ರವ ಪದಾರ್ಥ
D] ಮಂಜುಗಡ್ಡೆಯು ನೀರಿಗಿಂತ ಹಗುರ ಮತ್ತು ಆಲ್ಕೋಹಾಲ್ ಗಿಂತ ಭಾರ √


ಪ್ರಶ್ನೆ ನಂ: 15) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?


A] ದಕ್ಷಿಣ ಕನ್ನಡ
B] ಬಳ್ಳಾರಿ √
C] ಮಂಡ್ಯ
D] ಶಿವಮೊಗ್ಗ


ಪ್ರಶ್ನೆ ನಂ: 16) ನೀರು ಯಾವ ಉಷ್ಣಾಂಶದಲ್ಲಿ ಕುಗ್ಗುತ್ತದೆ ಮತ್ತು ಅಧಿಕ ಸಾಂದ್ರತೆ ಹೊಂದಿರುತ್ತದೆ?


A] 4°C√
B] 3°C
C] -4°C
D] 0°C


ಪ್ರಶ್ನೆ ನಂ: 17) ಲಿಥುವೇನಿಯಾ ಯೂರೋ ವಲಯಕ್ಕೆ ಸೇರಿದ ಎಷ್ಟನೆಯ ಸದಸ್ಯ ರಾಷ್ಟ್ರ?


A] 17 ನೇ ರಾಷ್ಟ್ರ
B] 18 ನೇ ರಾಷ್ಟ್ರ
C] 19 ನೇ ರಾಷ್ಟ್ರ
D] 20 ನೇ ರಾಷ್ಟ್ರ √.


ಪ್ರಶ್ನೆ ನಂ: 18) ರಾಷ್ಟ್ರೀಯ ಹ್ಯಾಂಡ್‌ಲೂಮ್‌ ದಿನಾಚರಣೆಯನ್ನು ಯಾವ ವರ್ಷದಿಂದ ಆಚರಣೆ ಮಾಡಲಾಗುತ್ತಿದೆ?


a) 7, ಆಗಸ್ಟ್  1984      
b) 7, ಆಗಸ್ಟ್  2015√
c) 7, ಆಗಸ್ಟ್  1999      
d) 7, ಆಗಸ್ಟ್  1989


ಪ್ರಶ್ನೆ ನಂ: 19) 'ಮುದ್ರಾ ಬ್ಯಾಂಕ' ಎಷ್ಟು ಮುಖ ಬಂಡವಾಳದೊಂದಿಗೆ ಆರಂಭಿಸಲ್ಪಟ್ಟಿದೆ?


A] 20,000 ಕೋ.ರೂ√
B] 25,000 ಕೋ.ರೂ
C] 50,000 ಕೋ.ರೂ
D] 1,00,000 ಕೋ.ರೂ


ಪ್ರಶ್ನೆ ನಂ: 20) 'ಮಿಷನ್ ಇಂದ್ರ ಧನುಷ್ 201' ಯಾವುದಕ್ಕೆ ಸಂಬಂಧಿಸಿದೆ?


A] ಸೌರ ಇಂಧನಕ್ಕೆ
B] ಬಾಲಕಿಯರ ಶಿಕ್ಷಣಕ್ಕೆ
C] ಮಕ್ಕಳ 7 ಮಾರಣಾಂತಿಕ ರೋಗಗಳಿಗೆ √
D] ಮೋಡ ಬಿತ್ತನೆಗೆ


ಪ್ರಶ್ನೆ ನಂ: 21) ಭಾರತೀಯ ರೇಲ್ವೆಯ ಸುಧಾರಣೆಗಾಗಿ ರಚಿಸಲಾದ 'ಕಾಯಕಲ್ಪ' ಮಂಡಳಿಯ ಮುಖ್ಯಸ್ಥರು ಯಾರು?


A] ರತನ್ ಟಾಟಾ √
B] ಎ.ಕೆ.ಮಿತ್ತಲ್
C] ಅಜಾಯಿ ಶಂಕರ್
D] ಅಶೋಕ ಚಾವ್ಲಾ


ಪ್ರಶ್ನೆ ನಂ: 22) ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ " ಡಿಜಿಟಲ್ ಇಂಡಿಯಾ " ಕ್ಕೆ ರಾಯಬಾರಿಯಾಗಿ ಆಯ್ಕೆಗೊಂಡವರು ಯಾರು ?


1. ಕತ್ರೀನಾ ಕೈಪ್
2. ಮಾಧುರಿ ದಿಕ್ಷಿತ್
3. ಕೃತ ಬಂದು
4. ಕೃತಿ ತಿವಾರಿ✅


ಪ್ರಶ್ನೆ ನಂ: 23) ಪ್ರಸ್ತುತ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡವರು ಯಾರು ?


A] ಜಾವೇದ್ ಉಸ್ಮಾನಿ
B] ಜಯಪ್ರಕಾಶ್ ಪಾಂಡೆ
C] ಪಿ.ಎನ್‌. ಶ್ರೀನಿವಾಸಾಚಾರಿ
D] ನಸೀಮ್ ಜೈಯ್ಧಿ √


ಪ್ರಶ್ನೆ ನಂ: 24) ಹೊಂದಿಸಿ ಬರೆಯಿರಿ.

ನಾಯಕರು ಸಮಾಧಿ ಸ್ಥಳ    
ಎ) ಮೊರಾರ್ಜಿ ದೇಸಾಯಿ 1) ವಿಜಯ್ ಘಾಟ್.                                
ಬಿ) ಜಗಜೀವನ ರಾಂ 2) ನಾರಾಯಣ್ ಘಾಟ್.
ಸಿ) ಲಾಲ್ ಬಹದ್ದೂರ್ ಶಾಸ್ತ್ರಿ 3) ಅಭಯಘಾಟ್
ಡಿ) ಜವಾಹರಲಾಲ ನೆಹರು 4) ಸಮತಾಸ್ಥಳ
ಇ) ಗುಲ್ಜಾರಿ ಲಾಲ್ ನಂದಾ 5) ಶಾಂತಿವನ
ಸಂಕೇತಗಳು
ಎ)ಎ-3. ಬಿ-4. ಸಿ -1. ಡಿ-5. ಇ-2√
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3


ಪ್ರಶ್ನೆ ನಂ: 25) ಭಾರತದಲ್ಲಿ ಸಂವಿಧಾನದ ಮೊದಲನೇ ತಿದ್ದುಪಡಿ ಈ ಕೆಳಕಂಡ ಯಾವ ದಿನಾಂಕದಂದು ಜಾರಿಗೆ ಬಂದಿತು
A. ಜೂನ್ 18, 1951 √
B. ಜನವರಿ 26, 1950
C. ನವೆಂಬರ್ 26, 1952
D. ಜುಲೈ 1, 1951


ಪ್ರಶ್ನೆ ನಂ: 26) ಭಾರತದ ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸಿದ ಸಂವಿಧಾನದ ತಿದ್ದುಪಡಿ ಯಾವುದು?
A. ಸಂವಿಧಾನದ ತಿದ್ದುಪಡಿ 72, 1990
B. ಸಂವಿಧಾನದ ತಿದ್ದುಪಡಿ 61, 1989√
C. ಸಂವಿಧಾನದ ತಿದ್ದುಪಡಿ 81, 1985
D. ಸಂವಿಧಾನದ ತಿದ್ದುಪಡಿ 75, 1991


ಪ್ರಶ್ನೆ ನಂ: 27) ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರ ಸ್ಮರಣಾರ್ಥ ‘ಅಬ್ದುಲ್‌ ಕಲಾಂ ಯುವ ಪ್ರಶಸ್ತಿ’ ನೀಡಲು ಯಾವ ರಾಜ್ಯ ನಿರ್ಧರಿಸಿದೆ.
a) ತಮಿಳುನಾಡು √
b)ಕರ್ನಾಟಕ
c) ಕೇರಳ        
d) ಆಂಧ್ರಪ್ರದೇಶ


ಪ್ರಶ್ನೆ ನಂ: 28) ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಇತ್ತೀಚೆಗೆ ‘ಸಮನ್ವಯ್‌’ ಯೋಜನೆಯನ್ನು ಪ್ರಕಟಿಸಿತು. ಈ ಯೋಜನೆ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a) ತಾಲ್ಲೂಕು ಪಂಚಾಯ್ತಿ    
b) ಜಿಲ್ಲಾ ಪಂಚಾಯ್ತಿ
c) ಕಾಪ್‌ ಪಂಚಾಯ್ತಿ      
d) ಗ್ರಾಮ ಪಂಚಾಯ್ತಿ √


ಪ್ರಶ್ನೆ ನಂ: 29) ಹೊಂದಿಸಿ ಬರೆಯಿರಿ.

   ನದಿ ದೇಶ
ಎ)ಹ್ವಾಂಗ್ ಹೋ 1) ಯುರೋಪ್                                
ಬಿ)ವೋಲ್ಗಾ 2) ಚೀನಾ
ಸಿ)ಡ್ಯಾನ್ಯೂಬ್ 3) ಆಫ್ರಿಕಾ
ಡಿ)ನೈಲ್ 4) ಯುಎಸ್ಎಸ್ಆರ್
ಇ)ಮುರ್ರೆ ಡಾರ್ಲಿಂಗ್ 5) ಆಸ್ಟ್ರೇಲಿಯಾ
— ಸಂಕೇತಗಳು
ಎ)ಎ-1. ಬಿ-2. ಸಿ -3. ಡಿ-5. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5 √
ಡಿ)ಎ-1. ಬಿ-5. ಸಿ -2. ಡಿ-4. ಇ-3


ಪ್ರಶ್ನೆ ನಂ: 30) ಕೆಳಕಂಡ ದೇಶಗಳಲ್ಲಿ ಯಾವುದು 'ಜಾತ್ಯತೀತ ರಾಷ್ಟ್ರ' ಎಂದು ತನ್ನ ಸಂವಿಧಾನದಲ್ಲಿ ಸೇರಿಸಿಕೊಂಡಿತು?
A. ಶ್ರೀಲಂಕಾ
B. ಪಾಕಿಸ್ತಾನ
C. ನೇಪಾಳ√
D. ಬಾಂಗ್ಲಾದೇಶ


ಪ್ರಶ್ನೆ ನಂ: 31) ವಿಶ್ವಸಂಸ್ಥೆಯ ಅಂಗಸಂಸ್ಥೆಗಳಲ್ಲಿ ಕೆಳಕಂಡವುಗಳಲ್ಲಿ ಸರಿ ಹೊಂದದ ಜೋಡಿಯನ್ನು ಗುರುತಿಸಿ.
A. ಆಹಾರ ಮತ್ತು ಕೃಷಿ ಸಂಘಟನೆ - ರೋಮ್
B. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ - ಜಿನೇವಾ
C. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ - ಲಂಡನ್√
D. ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ - ವಿಯೆನ್ನಾ


ಪ್ರಶ್ನೆ ನಂ: 32) ಹೊಂದಿಸಿ ಬರೆಯಿರಿ.

   ಜಲಪಾತಗಳು ದೇಶ
ಎ) ಏಂಜೆಲ್ 1) ವೆನೆಜುವೆಲಾ                                
ಬಿ) ರಿಬ್ಬನ್ 2) ದಕ್ಷಿಣ ಆಫ್ರಿಕಾ
ಸಿ) ಟುಗೆಲಾ 3) ಜಿಂಬಾಬ್ವೆ
ಡಿ) ನಯಾಗರಾ 4) ಕೆನಡಾ
ಇ) ವಿಕ್ಟೋರಿಯಾ 5) ಅಮೇರಿಕಾ
ಸಂಕೇತಗಳು
ಎ)ಎ-1. ಬಿ-2. ಸಿ -3. ಡಿ-5. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3 √


ಪ್ರಶ್ನೆ ನಂ: 33) ಯಾವ ದೇಶದಿಂದ "ಸಂವಿಧಾನ ತಿದ್ದುಪಡಿ ವಿಧಾನ"ವನ್ನು ಎರವಲು ಪಡೆದು ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ ?
A. ರಷ್ಯಾ
B. ದಕ್ಷಿಣ ಆಪ್ರೀಕಾ √
C. ಬ್ರಿಟನ್
D. ಅಮೆರಿಕಾ


ಪ್ರಶ್ನೆ ನಂ: 34) ಹೊಂದಿಸಿ ಬರೆಯಿರಿ.

  ರೈಲ್ವೆ ವಲಯಗಳು ಸ್ಥಳ
ಎ) ಈಶಾನ್ಯ ರೈಲ್ವೆ 1) ಕೋಲ್ಕತಾ                                
ಬಿ) ಆಗ್ನೇಯ ರೈಲ್ವೆ 2) ಹುಬ್ಬಳ್ಳಿ
ಸಿ) ನೈಋತ್ಯ ರೈಲ್ವೆ 3) ಗೋರಕ್ ಪುರ
ಡಿ) ವಾಯವ್ಯ ರೈಲ್ವೆ 4) ಚೆನೈ
ಇ) ದಕ್ಷಿಣ ರೈಲ್ವೆ 5) ಜೈಪುರ
ಸಂಕೇತಗಳು
ಎ)ಎ-3. ಬಿ-1. ಸಿ -2. ಡಿ-5. ಇ-4√
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3


ಪ್ರಶ್ನೆ ನಂ: 35) ಹೊಂದಿಸಿ ಬರೆಯಿರಿ.

   ಕವಿ ಆತ್ಮಕಥೆಗಳು
ಎ) ಪಿ.ಲಂಕೇಶ್ 1) ಭಾವ                                
ಬಿ) ಮಾಸ್ತಿ 2) ಹುಚ್ಚು ಮನಸಿನ ಹತ್ತು ಮುಖಗಳು
ಸಿ) ಕುವೆಂಪು 3) ಭಿತ್ತ
ಡಿ) ಎಸ್.ಎಲ್.ಭೈರಪ್ಪ 4) ಹುಳಿ ಮಾವಿನ ಮರ
ಇ) ಶಿವರಾಮ ಕಾರಂತ 5) ನೆನಪಿನ ದೋಣಿಯಲ್ಲಿ
ಸಂಕೇತಗಳು
ಎ)ಎ-1. ಬಿ-5. ಸಿ -3. ಡಿ-2. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2√
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3


ಪ್ರಶ್ನೆ ನಂ: 36) ಶ್ರವಣಬೆಳಗೋಳದ ಮಹಾಮಸ್ತಾಭಿಷೇಕವು ಎಷ್ಟು ವರ್ಷಗಳಿಗೊಂದು ಸಲ ಜರುಗುತ್ತದೆ?
A] 6 ವರ್ಷ
B] 8 ವರ್ಷ
C]10 ವರ್ಷ
D]12 ವರ್ಷ√


ಪ್ರಶ್ನೆ ನಂ: 37) FM ರೇಡಿಯೋದ ತರಂಗಾಂತರ ವ್ಯಾಪ್ತಿ?
A] 200-300 MHz
B] 88-108 MHz √
C] 600-800 MHz
D] 100-200 MHz


ಪ್ರಶ್ನೆ ನಂ: 38) ಇತ್ತೀಚೆಗೆ ಸುಪ್ರೀಂ ಕೋರ್ಟ್ ರದ್ದು ಪಡಿಸಿದ ವಿವಾದಿತ ಸೆಕ್ಷನ್ 66ಅ ಯಾವ ಕಾಯ್ದೆಯ ಭಾಗವಾಗಿತ್ತು?
A] ಭಯೋತ್ಪಾದನೆ ಪ್ರತಿಬಂಧ ಕಾಯಿದೆ
B] ಮಾಹಿತಿ ತಂತ್ರಜ್ಞಾನ ಕಾಯಿದೆ √
C] ಬೌದ್ಧಿಕ ಆಸ್ತಿ ಕಾಯಿದೆ
D] ಮಹಿಳಾ ರಕ್ಷಣಾ ಕಾಯಿದೆ


ಪ್ರಶ್ನೆ ನಂ: 39) ನ್ಯಾನೊ ಪದಾರ್ಥಗಳು ಎಂತಹ ಕಣಗಳಿಂದ ಆಗಿರುತ್ತವೆ ಎಂದರೆ ಕಣಗಳ ಗಾತ್ರವು ಸುಮಾರು,
A] 10-⁹ ನ್ಯಾನೋಮಿಟರ್ ಇರುತ್ತದೆ
B] 10⁹ ನ್ಯಾನೋಮಿಟರ್ ಇರುತ್ತದೆ
C] 10-⁹ ಮಿಟರ್ ಇರುತ್ತದೆ √
D] 9 ಮಿಟರ್ ಇರುತ್ತದೆ


ಪ್ರಶ್ನೆ ನಂ: 40) ಶ್ರೀಲಂಕಾದ ನೂತನ ಪ್ರಧಾನಮಂತ್ರಿ ಯಾರು?
a) ಆರ್‌. ವಿಕ್ರಮಸಿಂಘೆ √
b) ಎಂ. ರಾಜಪಕ್ಸೆ
c) ಸಿ. ಕೆ. ತುಂಗಾ        
d) ಮೇಲಿನ ಯಾರು ಅಲ್ಲ


ಪ್ರಶ್ನೆ ನಂ: 41) ಪ್ರೆಶರ್ ಕುಕ್ಕರ್‌ನಲ್ಲಿ ಬೇಗ ಅಡುಗೆಯಾಗುತ್ತದೆ. ಏಕೆಂದರೆ,
A] ಆಹಾರವು ಬೇಯುವುದಕ್ಕೆ ಇಲ್ಲಿ ಅಧಿಕ ಹಬೆ (ಉಗಿ) ಲಭ್ಯ.
B] ಒತ್ತಡವು ನೀರಿನ ಕುದಿಯುವ ಬಿಂದುವನ್ನು ಹೆಚ್ಚಿಸುತ್ತದೆ. √
C] ಒತ್ತಡವು ನೀರಿನ ಕುದಿಯುವ ಬಿಂದುವನ್ನು ಕಡಿಮೆಮಾಡುತ್ತದೆ.
D] ಕುಕ್ಕರ್‌ ಅನ್ನು ವಿಶೇಷ ವಸ್ತುವಿನಿಂದ ಮಾಡಲಾಗಿದೆ.


ಪ್ರಶ್ನೆ ನಂ: 42) ಈ ಕೆಳಗಿನ ಯಾವ ಮುಖ್ಯಮಂತ್ರಿಯ ಕಾಲದಲ್ಲಿ ಮೈಸೂರು ರಾಜ್ಯಕ್ಕೆ 'ಕರ್ನಾಟಕ' ಎಂದು ನಾಮಕರಣ ಮಾಡಲಾಯಿತು?
A] ಕೆ.ಸಿ.ರೆಡ್ಡಿ
B] ಚಿಕ್ಕ ದೇವರಾಜ ಒಡೆಯರ್
C] ಟಿ.ಸಿದ್ಧಲಿಂಗಯ್ಯ
D] ದೇವರಾಜ್ ಅರಸು √


ಪ್ರಶ್ನೆ ನಂ: 43) ಎಷ್ಟು ವರ್ಷಗಳಿಗೊಮ್ಮೆ ಹಣಕಾಸು ಆಯೋಗ ರಚಿಸಲಾಗುತ್ತದೆ.
A] ಪ್ರತೀ ವರ್ಷ
B] 07 ವರ್ಷ
C] 05 ವರ್ಷ√
D] 04 ವರ್ಷ


ಪ್ರಶ್ನೆ ನಂ: 44) ಜಾಗತಿಕ ಅರ್ಥವ್ಯವಸ್ಥೆಯು ಕೆಳಮುಖವಾಗಿರುವ ಈ ಸಂದರ್ಭದಲ್ಲಿ ಸರ್ಕಾರಗಳು ...
A] ಸಾಧ್ಯವಾದಷ್ಟು ಕಡಿಮೆ ಖರ್ಚು ಮಾಡಿ ಹೆಚ್ಚೆಚ್ಚು ಹಣವನ್ನು ಉಳಿತಾಯ ಮಾಡಬೇಕು.
B] ಚಿನ್ನವನ್ನು ಖರೀದಿಸಿ ದಾಸ್ತಾನು ಮಾಡಬೇಕು.
C] ಆರೋಗ್ಯ ವ್ಯವಸ್ಥೆಯನ್ನು ಖಾಸಗೀಕರಣ ಮಾಡಬೇಕು.
D] ಸಾರ್ವಜನಿಕ ಮೂಲಸೌಕರ್ಯ ವ್ಯವಸ್ಥೆಗಳಿಗಾಗಿ ಹೆಚ್ಚು ಹಣ ವಿನಿಯೋಗಿಸಬೇಕು √


ಪ್ರಶ್ನೆ ನಂ: 45) ಒಣ ಕೂದಲನ್ನು ಬಾಚಿದ ಬಾಚಣಿಕೆಯು ಕಾಗದದ ಚೂರುಗಳನ್ನು ಆಕರ್ಷಿಸುತ್ತದೆ. ಏಕೆಂದರೆ...
A] ಸ್ಫುರಣಗೊಂಡ ಬಾಚಣಿಕೆಯಿಂದಾಗಿ ಕಾಗದದಲ್ಲಿರುವ ಪರಮಾಣುಗಳು ಧ್ರುವೀಕರಣಗೊಳ್ಳುತ್ತವೆ. √
B] ಬಾಚಣಿಕೆಯು ಕಾಂತೀಯ ಗುಣಧರ್ಮಗಳನ್ನು ಹೊಂದಿದೆ.
C] ಬಾಚಣಿಕೆಯು ಉತ್ತಮ ವಾಹಕವಾಗಿದೆ.
D] ಕಾಗದವು ಉತ್ತಮ ವಾಹಕವಾಗಿದೆ.


ಪ್ರಶ್ನೆ ನಂ: 46) ಹೊಂದಿಸಿ ಬರೆಯಿರಿ.

   ಕಣಿವೆ ಮಾರ್ಗಗಳು ರಾಜ್ಯ
ಎ) ಹಲ್ದಿಘಾಟಿ ಪಾಸ್ 1) ಜಮ್ಮು ಮತ್ತು ಕಾಶ್ಮೀರ
ಬಿ) ರೋಹ್ ಟಂಗ್ ಪಾಸ್ 2) ಮಧ್ಯಪ್ರದೇಶ
ಸಿ) ಜಿಲೇಪ ಲಾ ಪಾಸ್ 3) ಹಿಮಾಚಲ ಪ್ರದೇಶ
ಡಿ) ಬಾರಾ-ಲಾಚಾ-ಲಾ ಪಾಸ್ 4) ರಾಜಸ್ಥಾನ
ಇ) ಅಸಿರ್ ಘರ್ ಪಾಸ್ 5) ಸಿಕ್ಕಿಂ
ಸಂಕೇತಗಳು
ಎ)ಎ-1. ಬಿ-4. ಸಿ -3. ಡಿ-5. ಇ-2
ಬಿ)ಎ-4. ಬಿ-3. ಸಿ-5. ಡಿ-1. ಇ-2√
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3


ಪ್ರಶ್ನೆ ನಂ: 47) ಹಾಲನ್ನು ಕಡೆದಾಗ ಕೆನೆಯು ಹಾಲಿನಿಂದ ಬೇರೆಯಾಗುವುದು ಈ ಪರಿಣಾಮದಿಂದಾಗಿ..
a.ಘರ್ಷಣೆಯ ಬಲ
b.ಕೇಂದ್ರಾಪಗಾಮಿ ಬಲ√
c.ಕೇಂದ್ರಾಪಗಾಮಿ ಪ್ರತಿಕ್ರಿಯೆ
d.ಗುರುತ್ವಾಕರ್ಷಣ ಬಲ


ಪ್ರಶ್ನೆ ನಂ: 48) ಪಶ್ಚಿಮ ಘಟ್ಟಗಳಲ್ಲಿರುವ ಅರಣ್ಯಗಳು ಯಾವ ವಿಧಕ್ಕೆ ಸೇರಿವೆ?
A] ಮ್ಯಾನ್ ಗ್ರೋವ್ ಕಾಡುಗಳು
B] ನಿತ್ಯಹರಿದ್ವರ್ಣ ಕಾಡುಗಳು√
C] ಎಲೆ ಉದುರುವ ಕಾಡುಗಳು
D] ಸಾಲ್


ಪ್ರಶ್ನೆ ನಂ: 49) ಗಣಿತ ಶಾಸ್ತ್ರದಲ್ಲಿ ಸಾಧನೆಗೈದ ಸಾಧಕರಿಗೆ ನೀಡಲಾಗುವ ರಾಮಾನುಜಂ ರಾಷ್ಟ್ರೀಯ ಪ್ರಶಸ್ತಿ 2015ನೇ ಸಾಲಿನಲ್ಲಿ ಯಾರಿಗೆ ಬಂದಿದೆ.
a) ಸಚ್ಚಿದೇವಾ ಬನ್ಸಾಲಿ
b) ಮೊಹಮ್ಮದ್‌ ಫಕೀರ್‌ ಖಾನ್‌
c) ಅಲಮೆಂದು ಕೃಷ್ಣ √
d) ಕರಣ್‌ ಶಂಕರ ದೇವಾ


ಪ್ರಶ್ನೆ ನಂ: 50) ಇತ್ತೀಚೆಗೆ ಭೂಕಂಪದಲ್ಲಿ ಧರೆಗುರುಳಿದ 'ಐತಿಹಾಸಿಕ ಧರಹರ ಟವರ್' ಯಾವ ದೇಶಕ್ಕೆ ಸಂಬಂಧಿಸಿದ್ದು?
A. ಭಾರತ
B. ನೇಪಾಳ √
C. ಮಲೇಶಿಯಾ
D. ಶ್ರೀಲಂಕಾ


ಪ್ರಶ್ನೆ ನಂ: 51) ಹೊಂದಿಸಿ ಬರೆಯಿರಿ.

   ಪುಸ್ತಕಗಳು ಲೇಖಕರು
ಎ) ಎಲೆಕ್ಷನ್ ಡಟ್ ಚೇಂಜ್ಡ್ ಇಂಡಿಯಾ 1) ಅರವಿಂದ್ ಅಡಿಗ                        
ಬಿ) ಟ್ರೈನ್ ಟು ಪಾಕಿಸ್ತಾನ್ 2) ವಿಕ್ರಮ್ ಚಂದ್
ಸಿ) ಸೇಕ್ರೆಡ್ ಗೇಮ್ಸ್ 3) ಅಮಿತ್ ಚೌಧರಿ
ಡಿ) ದಿ ವೈಟ್ ಟೈಗರ್ 4) ರಾಜ್ ದೀಪ್ ಸರ್ದೇಸಾಯ
ಇ) ದಿ ಇಮ್ಮಾರ್ಟಲ್ಸ್ 5) ಖುಷ್ವಂತ್ ಸಿಂಗ್
ಸಂಕೇತಗಳು
ಎ)ಎ-1. ಬಿ-2. ಸಿ -3. ಡಿ-5. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-4. ಬಿ-5. ಸಿ -2. ಡಿ-1. ಇ-3√


ಪ್ರಶ್ನೆ ನಂ: 52) ಹಿಂದಿ ಸಾಹಿತ್ಯದ ಸಮಗ್ರ ಸೇವೆಗೆ ನೀಡುವ 2014ನೇ ಸಾಲಿನ ‘ಭಾರತ್‌ ಭಾರತಿ’ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಯಾರಿಗೆ ಸಂದಿದೆ.
a) ಖುಷ್ವಂತ್‌ ಸಿಂಗ್‌        
b) ಕಿಶನ್‌ ಸಿಂಗ್‌ ಅಮ್ರಪಾಲಿ
c) ಸೀತಾರಾಮ್‌ ಶಾಸ್ತ್ರಿ
d) ಕಾಶಿನಾಥ್‌ ಸಿಂಗ್√‌


ಪ್ರಶ್ನೆ ನಂ: 53) ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಇತ್ತೀಚೆಗೆ ‘ಸಮನ್ವಯ್‌’ ಯೋಜನೆಯನ್ನು ಪ್ರಕಟಿಸಿತು. ಈ ಯೋಜನೆ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a) ತಾಲ್ಲೂಕು ಪಂಚಾಯ್ತಿ    
b) ಜಿಲ್ಲಾ ಪಂಚಾಯ್ತಿ
c) ಕಾಪ್‌ ಪಂಚಾಯ್ತಿ      
d) ಗ್ರಾಮ ಪಂಚಾಯ್ತಿ √


ಪ್ರಶ್ನೆ ನಂ: 54) ಹೊಂದಿಸಿ ಬರೆಯಿರಿ.

       ಕವಿ/ಸಾಹಿತಿ ಕಾವ್ಯನಾಮ
ಎ) ಕಯ್ಯಾರ ಕಿಞ್ಞಣ್ಣರೈ 1) ಚಂಪಾ                                
ಬಿ) ಪಂಜೆ ಮಂಗೇಶರಾಯ 2) ದುರ್ಗಾದಾಸ
ಸಿ) ಚಂದ್ರಶೇಖರ ಪಾಟೀಲ 3) ನಿರಂಜನ
ಡಿ) ಕುಳಕುಂದ ಶಿವರಾಯ 4) ಕವಿಶಿಷ್ಯ
ಇ) ದೇವುಡು ನರಸಿಂಹ ಶಾಸ್ತ್ರಿ 5) ಕುಮಾರ ಕಾಳಿದಾಸ
ಸಂಕೇತಗಳು
ಎ)ಎ-1. ಬಿ-4. ಸಿ -3. ಡಿ-5. ಇ-2
ಬಿ)ಎ-2. ಬಿ-1. ಸಿ-5. ಡಿ-3. ಇ-4
ಸಿ)ಎ -2. ಬಿ-4. ಸಿ -1. ಡಿ-3. ಇ-5 √
ಡಿ)ಎ-1. ಬಿ-5. ಸಿ -2. ಡಿ-4. ಇ-3


ಪ್ರಶ್ನೆ ನಂ: 55) ಕೇದಾರನಾಥ ಮತ್ತು ಬದ್ರಿನಾಥ ಯಾವ ಹಿಮಾಲಯದಲ್ಲಿದೆ?
A. ಕುಮಾನ್ ಹಿಮಾಲಯ√
B. ಪಂಜಾಬ್ ಹಿಮಾಲಯ
C. ಆಸ್ಸಾಂ ಹಿಮಾಲಯ
D. ನೇಪಾಳ ಹಿಮಾಲಯ


ಪ್ರಶ್ನೆ ನಂ: 56) ಕುಶಾಣರ ಕಾಲದಲ್ಲಿ ಅಸ್ಥಿತ್ವಕ್ಕೆ ಬಂದ ಕಲೆ ಯಾವುದು?
a) ಗಾಂಧಾರ ಕಲೆ√
b) ವೇಸರ ಕಲೆ
c) ಇಂಡೋಸಾರ್ಸಾನಿಕ್
d) ಯಾವುದು ಅಲ್ಲ


ಪ್ರಶ್ನೆ ನಂ: 57) ಭಾರತ ಸರ್ಕಾರದ "ನಳಂದಾ ಪ್ರಾಜೆಕ್ಟ್" ಯಾವ ಸಚಿವಾಲಯದ ಕಾರ್ಯಕ್ರಮವಾಗಿದೆ ?
೧. ಕೃಷಿ ಸಚಿವಾಲಯ
೨. ಮಾನವ ಸಂಪನ್ಮೂಲ ಸಚಿವಾಲಯ
೩. ಅಲ್ಪಸಂಖ್ಯಾತ ಸಚಿವಾಲಯ√
೪. ಹಣಕಾಸು ಸಚಿವಾಲಯ


ಪ್ರಶ್ನೆ ನಂ: 58) ಪಕ್ಷಾಂತರ ವಿರೋಧ (Anti defection) ಕಾನೂನಿನ ಪ್ರಕಾರ, ಸದನದಿಂದ ಸದಸ್ಯರೊಬ್ಬರನ್ನು ಅನರ್ಹಗೊಳಿಸುವುದನ್ನು ನಿರ್ಧರಿಸುವ ಅಂತಿಮ ಅಧಿಕಾರ ಯಾರಿಗೆ ಸೇರಿದೆ ?
A] ಅಟಾರ್ನಿ ಜನರಲ್
B] ಪ್ರಧಾನ ಮಂತ್ರಿ
C] ಸದನದ ಸ್ಪೀಕರ್.√
D] ರಾಷ್ಟ್ರಪತಿ


ಪ್ರಶ್ನೆ ನಂ: 59) ಸಮ ಪ್ರಮಾಣದಲ್ಲಿ ಮಳೆಯನ್ನು ಪಡೆಯುವ ಪ್ರದೇಶಗಳನ್ನು ಜೋಡಿಸುವ ರೇಖೆಯನ್ನು ಏನೆಂದು ಕರೆಯುತ್ತಾರೆ.
ಎ) ಐಸೋ ಹೆಲಾಯನ್ಸ್ ರೇಖೆ
ಬಿ) ಐಸೋಬಾರ್ ರೇಖೆ
ಸಿ) ಪರಿಭ್ರಮಣ ರೇಖೆ
ಡಿ) ಐಸೋಹೈಟ್ಸ್‌ಲೈನ್√


ಪ್ರಶ್ನೆ ನಂ: 60) ಇತ್ತೀಚೆಗೆ ನಿಧನರಾದ ಓಂ ಪ್ರಕಾಶ್‌ ಮುಂಜಲ್‌ ಅವರು ಯಾವ ಪ್ರಸಿದ್ಧ ಕಂಪೆನಿಯನ್ನು ಹುಟ್ಟುಹಾಕಿದ್ದರು?
a) ಟಿವಿಎಸ್‌ ಕಂಪೆನಿ
b) ಅಶೋಕ್‌ ಲೈಲ್ಯಾಂಡ್‌
c) ಹಿರೋ ಸೈಕಲ್‌√
d) ಬಜಾಜ್‌ ಕಂಪೆನಿ


ಪ್ರಶ್ನೆ ನಂ: 61) "ಬರಾಕ್ 8" ಕ್ಷಿಪ್ಪಣಿಯನ್ನು ಯಾವ ಎರಡು ದೇಶಗಳು ಜಂಟಿಯಾಗಿ ನಿರ್ಮಿಸಿವೆ?
A. ಪಾಕಿಸ್ತಾನ ಮತ್ತು ಚೀನಾ
B. ಭಾರತ ಮತ್ತು ಬಾಂಗ್ಲಾದೇಶ
C. ಪಾಕಿಸ್ತಾನ ಮತ್ತು ಅಮೆರಿಕಾ
D. ಭಾರತ ಮತ್ತು ಇಸ್ರೇಲ್ √


ಪ್ರಶ್ನೆ ನಂ: 62) ಇತ್ತೀಚೆಗೆ 7ನೇ ಬ್ರಿಕ್ಸ್ (BRICS) ಶೃಂಗ ಸಭೆ ನಡೆದದ್ದು ಎಲ್ಲಿ?
A. ರಷ್ಯಾ√
B. ದ.ಆಪ್ರೀಕಾ
C. ಬಾಂಗ್ಲಾದೇಶ
D. ಚೀನಾ


ಪ್ರಶ್ನೆ ನಂ: 63) ಮನುಷ್ಯನ ಮೂತ್ರಪಿಂಡದಲ್ಲಿ ಉಂಟಾಗುವ ಹರಳುಗಳು (ಕಿಡ್ನಿ ಕಲ್ಲು) ಮುಖ್ಯವಾಗಿ ಈ ಕೆಳಗಿನ ಯಾವ ರಾಸಾಯನಿಕದ ಸಂಯುಕ್ತವಾಗಿದೆ
1. ಕ್ಯಾಲ್ಸಿಯಂ ಅಕ್ಸಲೇಟ್ √
2. ಕ್ಯಾಲ್ಸಿಯಂ
3. ಯೂರಿಕ್ ಆಮ್ಲ
4. ಕ್ಯಾಲ್ಸಿಯಂ ಕಾರ್ಬೋನೆಟ್


ಪ್ರಶ್ನೆ ನಂ: 64) ಭಾರತೀಯ ಮಹಿಳಾ ಬ್ಯಾಂಕಿನ (BMB) ಪ್ರಸ್ತುತ ಅಧ್ಯಕ್ಷರು ಯಾರು?
A] ತಥಾಗತ್ ರಾಯ್
B] ಮನೋಬಿ ಬಂಧೋಪಾಧ್ಯಾಯ
C] ದ್ರೌಪದಿ ಮುರ್ಮ
D] ಉಷಾ ಅನಂತಸುಬ್ರಮಣ್ಯ√


ಪ್ರಶ್ನೆ ನಂ: 65) ಸೂರ್ಯಾಸ್ತ ಮತ್ತು ಸೂರ್ಯೋದಯಗಳು ಕೆಂಪಾಗಿರುತ್ತವೆ ಹಾಗೂ ಆಕಾಶವು ನೀಲಿಯಾಗಿರುತ್ತದೆ. ಇದನ್ನು ಯಾವ ಆಧಾರದ ಮೇಲೆ ವಿವರಿಸಬಹುದು?
A] ಬೆಳಕಿನ ವಿವರ್ತನ
B] ಬೆಳಕಿನ ಪ್ರತಿಫಲನ
C] ಬೆಳಕಿನ ಬಾಗುವಿಕೆ
D] ಬೆಳಕಿನ ಚದುರುವಿಕೆ√


ಪ್ರಶ್ನೆ ನಂ: 66) ಪಾರ್ಲಿಮೆಂಟ್ ನ ಎರಡು ಅಧಿವೇಶನದ ಮಧ್ಯೆ ಇರಬೇಕಾದ ಅತ್ಯಧಿಕ ಅಂತರ ?
A] 6 ತಿಂಗಳು√
B] 5 ತಿಂಗಳು
C] 4 ತಿಂಗಳು
D] 12 ತಿಂಗಳು .


ಪ್ರಶ್ನೆ ನಂ: 67) ಗಣಿತ ಶಾಸ್ತ್ರದಲ್ಲಿ ಸಾಧನೆಗೈದ ಸಾಧಕರಿಗೆ ನೀಡಲಾಗುವ ರಾಮಾನುಜಂ ರಾಷ್ಟ್ರೀಯ ಪ್ರಶಸ್ತಿ 2015ನೇ ಸಾಲಿನಲ್ಲಿ ಯಾರಿಗೆ ಬಂದಿದೆ.
a) ಸಚ್ಚಿದೇವಾ ಬನ್ಸಾಲಿ
b) ಮೊಹಮ್ಮದ್‌ ಫಕೀರ್‌ ಖಾನ್‌
c) ಅಲಮೆಂದು ಕೃಷ್ಣ √
d) ಕರಣ್‌ ಶಂಕರ ದೇವಾ


ಪ್ರಶ್ನೆ ನಂ: 68) ಭಾರತದ ರಾಷ್ಟ್ರಪತಿಗಳು ಸಂವಿಧಾನದ ಯಾವ ವಿಧಿ ಅನ್ವಯ ಇಬ್ಬರು ಆಂಗ್ಲೋ ಇಂಡಿಯನ್ ರನ್ನು ನೇಮಕಮಾಡಬಹುದು?
a) 332 ನೇ ವಿಧಿ
b) 333 ನೇ ವಿಧಿ
c) 331 ನೇ ವಿಧಿ✅
d) 329 ನೇ ವಿಧಿ


ಪ್ರಶ್ನೆ ನಂ: 69) ಇತ್ತೀಚೆಗೆ ಯೆಮೆನ್ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರನ್ನು ರಕ್ಷಿಸುವ ಸಲುವಾಗಿ ಭಾರತ ಸರ್ಕಾರವು ನಡೆಸಿದ ಸೈನಿಕ ಕಾರ್ಯಾಚರಣೆಯ ಹೆಸರೇನು?
A] `ಆಪರೇಷನ್ ಹಿಮ್ಮತ್ '
B] `ಆಪರೇಷನ್ ರಾಹತ್'√
C] `ಆಪರೇಷನ್ ಆಲ್ ಕ್ಲಿಯರ್'
D] `ಆಪರೇಷನ್ ರಕ್ಷಿತ್ '


ಪ್ರಶ್ನೆ ನಂ: 70) ಈ ಕೆಳಗಿನ ಯಾವ ಹೇಳಿಕೆ ಯಾವುದು ತಪ್ಪಾಗಿದೆ?
1.ರಾಜ್ಯದಲ್ಲಿ 2011ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆ 6.11 ಕೋಟಿಗೆ ತಲುಪಿದ್ದು, ಒಂದು ರಾಜ್ಯದಲ್ಲಿ ದಶಕದಲ್ಲಿ ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದರೂ ಜನಸಂಖ್ಯೆ ಬೆಳವಣಿಗೆ ದರ ಶೇ.15.67ಗೆ ಕುಸಿದಿದೆ.
2.ರಾಜ್ಯದಲ್ಲಿ ಲಿಂಗಾನುಪಾತ ಪ್ರತಿ ಸಾವಿರ ಪುರುಷರಿಗೆ ಸರಾಸರಿ 968 ಮಹಿಳೆಯರು.
A] 1 ಮಾತ್ರ
B] 2 ಮಾತ್ರ
C] ಎರಡೂ ತಪ್ಪು.
D] ಎರಡೂ ಸರಿ.√


ಪ್ರಶ್ನೆ ನಂ: 71) ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ದೇಶದ ಎಷ್ಟು ರಾಜ್ಯಗಳ ರಾಜಧಾನಿ ನಗರಗಳು ಸೇರ್ಪಡೆಗೊಂಡಿವೆ?
a) 48
b) 24 √
c) 32    
d) 13


ಪ್ರಶ್ನೆ ನಂ: 72) ಮೂರು ಭಾಗಗಳಾಗಿ ವಿಭಜಿಸಲ್ಪಟ್ಟ ಹರಪ್ಪ ನಾಗರಿಕತೆಯ ನಗರ ಯಾವುದು?
A] ಲೋಥಾಲ್
B] ಕಾಲಿಬಂಗಾನ್
C] ಧಾಮಲಾವೀರ √
D] ಸುರ್ಕೊಟಾ


ಪ್ರಶ್ನೆ ನಂ: 73) " ದುಡಿತವೆ ನನ್ನ ದೇವರು " ಇದು ಯಾರ ಆತ್ಮ ಕಥೆಯಾಗಿದೆ ?
1. ದೇ.ಜ.ಗೌ
2. ಪಾಪು
3. ಕುಂ.ವಿ
4. ಕಯ್ಯಾರ ಕಿಯ್ಞಣ ರೈ✅


ಪ್ರಶ್ನೆ ನಂ: 74) ಕೆಳಗಿನ ವಿವರಣೆಗಳನ್ನು ಪರಿಶೀಲಿಸಿ.
(i) ವಿಂದ್ಯಾಪರ್ವತವು ಉತ್ತರ ಭಾರತವನ್ನು ದಕ್ಷಿಣ ಭಾರತದಿಂದ ಪ್ರತ್ಯೇಕಿಸುವ ಶ್ರೇಣಿಯಾಗಿದೆ.
(ii) ಮೂರು ಸಮುದ್ರಗಳು ಸಂಗಮವಾಗುವ ರಾಜ್ಯವೆಂದರೆ, ತಮಿಳುನಾಡು.
(iii) ಸೈಬಿರಿಯಾದಿಂದ ಭಾರತದ ಕಡೆಗೆ ಬೀಸುವ ಮಾರುತವೆಂದರೆ ಶೀತಮಾರುತ
ಸಂಕೇತಗಳು
A) (i) ಮತ್ತು (ii) ಮಾತ್ರ.
B) (i) ಮತ್ತು (iii) ಮಾತ್ರ.
C) (ii) ಮತ್ತು (iii) ಮಾತ್ರ.
D) ಮೇಲಿನೆಲ್ಲವೂ.√


ಪ್ರಶ್ನೆ ನಂ: 75) ಇವುಗಳಲ್ಲಿ 'ಪ್ರಾಥಮಿಕ ಬಣ್ಣ(ವರ್ಣ)ಗಳು' ಯಾವವು?
A] ಕೆಂಪು, ಹಸಿರು ಮತ್ತು ನೀಲಿ √
B] ಕೆಂಪು, ಹಳದಿ ಮತ್ತು ನೀಲಿ
C] ಹಳದಿ, ನೀಲಿ ಮತ್ತು ಹಸಿರು
D] ಕೆಂಪು, ಹಳದಿ ಮತ್ತು ಹಸಿರು


ಪ್ರಶ್ನೆ ನಂ: 76) ಹೊಂದಿಸಿ ಬರೆಯಿರಿ.

 ಬೌದ್ಧ ಮಹಾಸಭೆಗಳು ರಾಜರು(ಆಶ್ರಯದಾತರು)
ಎ) ಮೊದಲನೆಯ ಬೌದ್ಧ ಮಹಾಸಭೆ 1) ಅಜಾತಶತ್ರು
ಬಿ) ಎರಡನೆಯ ಬೌದ್ಧ ಮಹಾಸಭೆ 2) ಅಶೋಕ
ಸಿ) ಮೂರನೆಯ ಬೌದ್ಧ ಮಹಾಸಭೆ 3) ಕಾಲಾಸೋಕ
ಡಿ) ನಾಲ್ಕನೆಯ ಬೌದ್ಧ ಮಹಾಸಭೆ 4) ಕಾನಿಷ್ಕ
ಸಂಕೇತಗಳು
ಎ)ಎ-1. ಬಿ-2. ಸಿ -4. ಡಿ-3.
ಬಿ)ಎ-4. ಬಿ-1. ಸಿ-3. ಡಿ-2.
ಸಿ)ಎ -2. ಬಿ-4. ಸಿ -1. ಡಿ-3.
ಡಿ)ಎ-1. ಬಿ-3. ಸಿ -2. ಡಿ-4.√


ಪ್ರಶ್ನೆ ನಂ: 77) 2018 ರ ಕಾಮನ್‌ವೆಲ್ತ್ ಗೇಮ್ ಗಳು ಎಲ್ಲಿ ನಡೆಯುತ್ತವೆ?
A] ವೆಲ್ಲಿಂಗಟನ್
B] ಗೋಲ್ಡ್ ಕೋಸ್ಟ್ √
C] ಕೌಲಾಲಂಪುರ್
D] ಹ್ಯಾಮಿಲ್ಟನ್


ಪ್ರಶ್ನೆ ನಂ: 78) ಈ ವರ್ಷದ ಪ್ರತಿಷ್ಟಿತ ಸ್ಟಾಕ್ ಹೋಂ ಜಲಪ್ರಶಸ್ತಿ (ಜಲ ನೊಬೆಲ್) ಯಾರಿಗೆ ಲಭಿಸಿದೆ?
A] ಮನೋಜ್ ಕುಮಾರ
B] ರಾಜೇಂದ್ರ ಸಿಂಗ್ √
C] ನರೇಶ ಗುಪ್ತ
D] ಸಂಜೀವ ಲಗಾಂಡೆ


ಪ್ರಶ್ನೆ ನಂ: 79) ಈ ಕೆಳಗಿನ ಯಾವ ಸಾರ್ವಜನಿಕ ವಲಯದ ಬ್ಯಾಂಕು "Honor Your Trust" ಎಂಬ ಕೆಳಬರಹವನ್ನು ಹೊಂದಿದೆ?
A. ಪಂಜಾಬ್ ನ್ಯಾಷನಲ್ ಬ್ಯಾಂಕ
B. ಯುಸಿಒ ಬ್ಯಾಂಕು √
C. ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ
D. ಅಲಹಾಬಾದ್ ಬ್ಯಾಂಕ


ಪ್ರಶ್ನೆ ನಂ: 80) 'ರಾಷ್ಟ್ರೀಯ ಕಾನೂನು ಸಾಕ್ಷರತಾ ದಿನ'ವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ?
A. ಅಕ್ಟೋಬರ್ 24
B. ಜೂನ್ 29
C. ಮಾರ್ಚ್ 9
D. ನವಂಬರ್ 9√


ಪ್ರಶ್ನೆ ನಂ: 81) ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ(PTI)ದ ನೂತನ ಅಧ್ಯಕ್ಷರಾಗಿ ಎಚ್.ಎಸ್.ಕಾಮಾ ಆಯ್ಕೆಯಾದರು. ಅವರು ಕೆಳಕಂಡ ಯಾವ ಪತ್ರಿಕೆಗೆ ಸಂಬಂಧಪಟ್ಟಿದ್ದಾರೆ?
A. ಟೈಮ್ಸ್ ಆಫ್ ಇಂಡಿಯಾ
B. ಹಿಂದೂಸ್ತಾನ ಟೈಮ್ಸ್
C. ಬಾಂಬೆ ಸಮಾಚಾರ್√
D. ನವಭಾರತ್ ಟೈಮ್ಸ್


ಪ್ರಶ್ನೆ ನಂ: 82) ಇತ್ತೀಚೆಗೆ ‘ವರ್ಲ್ಡ್ ಹ್ಯಾಪಿನೆಸ್ ಸಂಸ್ಥೆ’ ನಡೆಸಿದ ಸಮೀಕ್ಷೆಯಲ್ಲಿ ಜಾಗತಿಕ ಮಟ್ಟದ 158 ಸುಖೀ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ರಾಷ್ಟ್ರ ಯಾವುದು?
A. ಸ್ವಿಜರ್ಲೆಂಡ್ √
B. ಐಸ್ಲೆಂಡ್
C. ಸೌದಿ ಅರೇಬಿಯಾ
D. ಐಱ್ಲೆಂಡ್


ಪ್ರಶ್ನೆ ನಂ: 83) ‘48ನೇ ಆಸೀನ್‌ ವಿದೇಶಾಂಗ ಸಚಿವರ ಶೃಂಗ ಸಮ್ಮೇಳನ’ ಈ ಕೆಳಕಂಡ ಯಾವ ಸ್ಥಳದಲ್ಲಿ ಜರುಗಿತು.
a) ನವದೆಹಲಿ                
b) ಕೊಲಂಬೊ
c) ಕೌಲಲಾಂಪುರ √        
d) ಇಸ್ಲಾಮಾಬಾದ್


ಪ್ರಶ್ನೆ ನಂ: 84) ಕೇಂದ್ರ ಸರ್ಕಾರದ 'PAHAL' ಸ್ಕಿಮ್ ಯಾವುದಕ್ಕೆ ಸಂಬಂಧಿಸಿದೆ?
A] ಗ್ರಾಹಕರ ಖಾತೆಗೆ LPG ಸಬ್ಸಿಡಿ ವರ್ಗಾವಣೆ √
B] ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣ
C] ಹುಡುಗಿಯರ ಶಿಕ್ಷಣಕ್ಕೆ ಪ್ರೋತ್ಸಾಹ ಧನ  
D] ಹಿರಿಯ ನಾಗರಿಕರಿಗೆ ಆರೋಗ್ಯ ಸೌಲಭ್ಯ


ಪ್ರಶ್ನೆ ನಂ: 85) ಕೇಂದ್ರ ಸರ್ಕಾರದ "ಹೃದಯ" ಯೋಜನೆ ಯಾವ ವಲಯಕ್ಕಾಗಿ ಪ್ರಾರಂಬಿಸಲಾಗಿದೆ
1. ಶಿಕ್ಷಣ
2. ಕೆಲಸಗಾರರ ಆರೋಗ್ಯ
3. ಉದ್ಯೋಗ
4. ಪಾರಂಪರಿಕ ತಾಣಗಳ ಅಭಿವೃದ್ಧಿ √


ಪ್ರಶ್ನೆ ನಂ: 86) 30000 ಕೋಟಿ ರೂಪಾಯಿ ವೆಚ್ಚದ ನಾಗಪುರ–ಮುಂಬೈ ಎಕ್ಸ್‌ಪ್ರೆಸ್‌ ಹೈವೆ ಯೋಜನೆಯನ್ನು ಯಾವ ಸರ್ಕಾರ ಘೋಷಣೆ ಮಾಡಿದೆ?
a) ಮಹಾರಾಷ್ಟ್ರ ಸರ್ಕಾರ√    
b) ಕೇಂದ್ರ ಸರ್ಕಾರ
c) ನಾಗಪುರ ಸರ್ಕಾರ        
d) ವಿಶ್ವಸಂಸ್ಥೆ


ಪ್ರಶ್ನೆ ನಂ: 87) ಯೆಮೆನ್ ದೇಶದ ರಾಜಧಾನಿ ಯಾವುದು?
A] ಡೈರ್ ಅಲ್ ಝವುರ್
B] ಡಮಾಸ್ಕಸ್
C] ಸನಾ√
D] ಹಮಾ


ಪ್ರಶ್ನೆ ನಂ: 88) ವೈರಸ್ ಗಳ ಗಾತ್ರ?
A] 0.115 ರಿಂದ 0.2 ಮೈಕ್ರಾನ್.
B] 0.015 ರಿಂದ 0.5 ಮೈಕ್ರಾನ್.
C] 0.010 ರಿಂದ 0.1 ಮೈಕ್ರಾನ್.
D] 0.015 ರಿಂದ 0.2 ಮೈಕ್ರಾನ್.√


ಪ್ರಶ್ನೆ ನಂ: 89) ಒಬ್ಬ ವ್ಯಕ್ತಿಯು ಬೆಟ್ಟವನ್ನು ಹತ್ತುವಾಗ ಮುಂದಕ್ಕೆ ಬಾಗುತ್ತಾನೆೆ ಏಕೆಂದರೆ?
ಎ) ವೇಗವನ್ನು ಹೆಚ್ಚಿಸಲು
ಬಿ) ಬೀಳುವುದನ್ನು ತಪ್ಪಿಸಲು
ಸಿ) ಗುರುತ್ವಾಕರ್ಷಣೆಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು √
ಡಿ) ಯಾವುದೂ ಅಲ್ಲ.


ಪ್ರಶ್ನೆ ನಂ: 90) ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ ಈ ಕೆಳಗಿನ ಯಾವ ರಾಜ್ಯಗಳ ಮೂಲಕ ಹಾದು ಹೋಗುತ್ತದೆ
1.ಮಹಾರಾಷ್ಟ್ರ
2.ಪಶ್ಚಿಮ ಬಂಗಾಳ
3.ಮಣಿಪುರ
4.ತ್ರಿಪುರ
5.ಜಾರ್ಖಂಡ್
ಈ ಕೆಳಗಿನವುಗಳಲ್ಲಿ ಸರಿಯಾದುದನ್ನು ಆಯ್ಕೆಮಾಡಿ
A. 1, 3, 4 ಮತ್ತು 5
B.2, 3 ಮತ್ತು 5
C. 1, 2, 3 ಮತ್ತು 4
D. 2, 4 ಮತ್ತು 5√


ಪ್ರಶ್ನೆ ನಂ: 91) ಕೇಂದ್ರದ ಸ್ಮಾರ್ಟ್‌ಸಿಟಿ ಯೋಜನೆಗೆ ಈ ಕೆಳಕಂಡ ಯಾವ ನಗರ ಸ್ಮಾರ್ಟ್‌ ಸಿಟಿ ಯೋಜನೆಯ ಪಟ್ಟಿಯಲ್ಲಿ ಇಲ್ಲ?
a) ತುಮಕೂರು
b)ದಾವಣಗೆರೆ
c) ಮೈಸೂರು√
d) ಮಂಗಳೂರು


ಪ್ರಶ್ನೆ ನಂ: 92) ಭಾರತೀಯ ರಿಜರ್ವ್ ಬ್ಯಾಂಕ ವ್ಯಾಖ್ಯಾನಿಸಿದಂತೆ 'ಸೂಕ್ಷ್ಮ ವಲಯ' ಒಳಗೊಂಡಿರುವುದು-
A] ಬಂಡವಾಳ ಮಾರುಕಟ್ಟೆ
B] ರಿಯಲ್ ಎಸ್ಟೇಟ್
C] ಸರಕುಗಳು
D] ಮೇಲಿನೆಲ್ಲವೂ √


ಪ್ರಶ್ನೆ ನಂ: 93) ವಿಪತ್ತು ನಿರ್ವಹಣಾ ಕಾಯ್ದೆ 2005 ರನ್ವಯ “ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ”ಯನ್ನು ಯಾರು ನಿರ್ವಹಣೆ ಮಾಡುತ್ತಾರೆ
A. ಪ್ರಧಾನ ಮಂತ್ರಿ
B. ಗೃಹ ಮಂತ್ರಿ√
C. ಪರಿಸರ ಮತ್ತು ಅರಣ್ಯ ಮಂತ್ರಿ
D. ಹಣಕಾಸು ಮಂತ್ರಿ


ಪ್ರಶ್ನೆ ನಂ: 94) ಕರ್ನಾಟಕ ಈಗ ಗಂಧದ ಬೀಡು, ಕಾಫಿ ತವರೂರು ಎಂಬ ಖ್ಯಾತಿಯ ಜತೆಗೆ 'ವ್ಯಾಘ್ರ ನಾಡು' ಎಂಬ ನವೀನ ಖ್ಯಾತಿಗೂ ಪ್ರಾಪ್ತವಾಯಿತು. ಅಂದಹಾಗೆ 2014ನೇ ಸಾಲಿನ ಹುಲಿ ಗಣತಿ ಪ್ರಕಾರ, ರಾಜ್ಯದಲ್ಲಿ ಎಷ್ಟು ಹುಲಿಗಳಿರುವುದು ಕಂಡು ಬಂದಿದೆ?
A. 316
B. 366
C. 406√
D. 416


ಪ್ರಶ್ನೆ ನಂ: 95) ರಾಜ್ಯಸಭೆಯು ಒಂದು ವೇಳೆ ಧನಮಸೂದೆಯಲ್ಲಿ ಮೂಲಭೂತವಾಗಿ ಬಹಳಷ್ಟು ತಿದ್ದುಪಡಿ ತಂದರೆ ಏನಾಗುತ್ತದೆ?
A. ರಾಜ್ಯಸಭೆಯ ತಿದ್ದುಪಡಿಗಳನ್ನು ಸಮ್ಮತಿಸಿ ಅಥವಾ ಸಮ್ಮತಿಸದೇ ಲೋಕಸಭೆಯು ಮಸೂದೆಯೊಂದಿಗೆ ಮುಂದುವರೆಯಬಹುದು.√
B. ಮಸೂದೆಯನ್ನು ಲೋಕಸಭೆ ಮುಂದಕ್ಕೆ ಪರಿಗಣಿಸುವುದಿಲ್ಲ.
C. ಪುನರ್ ಪರಿಶೀಲನೆಗಾಗಿ ಲೋಕಸಭೆಯು ಮತ್ತೆ ರಾಜ್ಯಸಭೆಗೆ ಕಳುಹಿಸಬಹುದು.
D. ಮಸೂದೆಯನ್ನು ಅಂಗಿಕರಿಸಲು ರಾಷ್ಟ್ರಪತಿಗಳು ಜಂಟಿ ಅಧಿವೇಶನ ಕರೆಯಬಹುದು.


ಪ್ರಶ್ನೆ ನಂ: 96) ಇತ್ತೀಚೆಗೆ ‘ವರ್ಲ್ಡ್ ಹ್ಯಾಪಿನೆಸ್ ಸಂಸ್ಥೆ’ ನಡೆಸಿದ ಸಮೀಕ್ಷೆಯಲ್ಲಿ ಜಾಗತಿಕ ಮಟ್ಟದ 158 ಸುಖೀ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನ ಪಡೆದುಕೊಂಡಿದೆ?
A. 111ನೇ
B. 108ನೇ
C. 117ನೇ√
D. 112ನೇ


ಪ್ರಶ್ನೆ ನಂ: 97) ಪ್ರಸ್ತುತ ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತ ಯಾರು?
A] ವೆಂಕಟರಾಮನ್ ರಾಮಕೃಷ್ಣನ್
B] ಉಮಾನಾಥ್ ಸಿಂಗ್
C] ಪಿ.ಎನ್‌. ಶ್ರೀನಿವಾಸಾಚಾರಿ√
D] ನಸೀಮ್ ಜೈಯ್ಧಿ


ಪ್ರಶ್ನೆ ನಂ: 98) ಭೂಮಿಯ ಮೇಲ್ಮೈಗೆ ಹತ್ತಿರವಾಗಿರುವ ವಾತಾವರಣದ ವಲಯದಿಂದಾರಂಭಿಸಿ ಅತ್ಯಂತ ದೂರವಾಗಿರುವ ವಲಯದವರೆಗೆ ವಾತಾವರಣದ ವಲಯಗಳ ಕ್ರಮವಾದ ವ್ಯವಸ್ಥೆಯನ್ನು ಪ್ರತಿನಿಧಿಸುವ ಸರಿಯಾದ ಉತ್ತರವನ್ನು ಆಯ್ಕೆಮಾಡಿ.
I. ಸ್ಟ್ರಾಟೋಸ್ಪಿಯರ್
II. ಟ್ರೋಟೋಸ್ಪಿಯರ್
III. ಅಯಾನೋಸ್ಪಿಯರ್
IV. ಮಿಸೋಸ್ಪಿಯರ್
ಎ. I, II, III, IV
ಬಿ. II, I, III, IV
ಸಿ. III, I IV, II
ಡಿ. II, I, IV, III√


ಪ್ರಶ್ನೆ ನಂ: 99) ಹೊಂದಿಸಿ ಬರೆಯಿರಿ.

   ದಿನ ಆಚರಣೆ
ಎ) ಏಪ್ರಿಲ್ 22 1) ಭೂದಿನ                                
ಬಿ) ಸೆಪ್ಟೆಂಬರ್ 16 2) ವಿಶ್ವ ಓಜೋನ್ ದಿನ
ಸಿ) ಡಿಸೆಂಬರ್ 10 3) ಮಾನವ ಹಕ್ಕುಗಳ ದಿನ
ಡಿ) ಮಾರ್ಚ್ 22. 4) ವಿಶ್ವ ಜಲ ದಿನ
ಇ) ಜೂನ್ 5 5) ವಿಶ್ವ ಪರಿಸರ ದಿನ  
ಸಂಕೇತಗಳು
A] ಎ-1. ಬಿ-2. ಸಿ -3. ಡಿ-4. ಇ-5√
B] ಎ-4. ಬಿ-1. ಸಿ-5. ಡಿ-3. ಇ-2
C] ಎ -2. ಬಿ-4. ಸಿ -1. ಡಿ-3. ಇ-5
D] ಎ-1. ಬಿ-5. ಸಿ -2. ಡಿ-4. ಇ-3


ಪ್ರಶ್ನೆ ನಂ: 100) ಇತ್ತೀಚೆಗೆ ನಿಧನರಾದ "ಆಧುನಿಕ ಸಿಂಗಾಪುರದ ನಿರ್ಮಾತೃ ಎಂದೇ ಖ್ಯಾತರಾದ ಸಿಂಗಾಪುರದ ಮೊದಲ ಪ್ರಧಾನಿಯಾಗಿದ್ದ ವ್ಯಕ್ತಿ ಯಾರು?
A] ಜಾನ್ ನ್ಯಾಶ್
B] ಕ್ರಿಸ್ಟೋಫರ್ ಲೀ
C] ಲೀ ಕುವಾನ್ ಯು √
D] ಸಕರಿ ಮೆಮೋಯ್

ಕೃಪೆ : ಆರ್ ಎಮ್ . ಎಸ್ ಬ್ಲಾಗ್ 

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area