ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

10ನೇ ತರಗತಿ ಸಿರಿ ಕನ್ನಡ ಪುಸ್ತಕದ ಶುಕನಾಸನ ಉಪದೇಶ ಘಟಕದ ಸಂಪೂರ್ಣ ನೋಟ್ಸ್ ಮತ್ತು ಪ್ರಶ್ನೋತ್ತರಗಳು

10ನೇ ತರಗತಿ ಸಿರಿ ಕನ್ನಡ ಪುಸ್ತಕದ ಶುಕನಾಸನ ಉಪದೇಶ ಘಟಕದ ಸಂಪೂರ್ಣ ನೋಟ್ಸ್ ಮತ್ತು ಪ್ರಶ್ನೋತ್ತರಗಳು

10ನೇ ತರಗತಿ ಸಿರಿ ಕನ್ನಡ ನೋಟ್ಸ್, SSLC Kannada Notes,SSLC Notes 2023,SSLC Passing Packages,10ನೇ ತರಗತಿ ಶುಕನಾಸನ ಉಪದೇಶ ಘಟಕದ ಸಂಪೂರ್ಣ ನೋಟ್ಸ್ ಮತ್ತು ಪ್ರಶ್ನೋತ್ತರ

10ನೇ ತರಗತಿ ಶುಕನಾಸನ ಉಪದೇಶ ಘಟಕದ ಸಂಪೂರ್ಣ ನೋಟ್ಸ್ ಮತ್ತು ಪ್ರಶ್ನೋತ್ತರಗಳು ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 10th Standard Shukanasana Upadesha Kannada Notes Question Answer Pdf Kavi Parichaya Pdf Kseeb Solutions For Class 10 Kannada Chapter 3 Shukanasana Upadesha Notes Shukanasana Upadesha 10th Kannada Questions and Answers 2022 10th Class Kannada 3rd Chapter Notes SSLC Kannada 3rd Lesson Notes Pdf Summery ಶುಕನಾಸನ ಉಪದೇಶ ಸಾರಾಂಶ PDF

ಶುಕನಾಸನ ಉಪದೇಶ ಘಟಕದ ಕೃತಿಕಾರರ ಪರಿಚಯ :

 ವಿದ್ಯಾವಾಚಸ್ಪತಿ ಡಾ . ಬನ್ನಂಜೆ ಗೋವಿಂದಾಚಾರ್ಯ

ವಿದ್ಯಾವಾಚಸ್ಪತಿ ಡಾ . ಬನ್ನಂಜೆ ಗೋವಿಂದಾಚಾರ್ಯ ಇವರು ಉಡುಪಿಯಲ್ಲಿ 1936 ರ ಆಗಸ್ಟ್ 03 ರಂದು ಜನಿಸಿದರು. ತಂದೆ ಪಡುಮನ್ನೂರು ನಾರಾಯಣ ಆಚಾರ್ಯ, ಮೂರು ದಶಕಗಳ ಕಾಲ ಪತ್ರಕರ್ತರಾಗಿ ಕೆಲಸ ಮಾಡಿದ ಡಾ. ಬನ್ನಂಜೆ ಗೋವಿಂದಾಚಾರ್ಯ ಕರ್ನಾಟಕ ಕಂಡ ಬಹುದೊಡ್ಡ ಸಂಸ್ಕೃತ – ಕನ್ನಡ ವಿದ್ವಾಂಸರು , ಸಂಸ್ಕೃತದಲ್ಲಿ 30 , ಕನ್ನಡದಲ್ಲಿ 130 ಕೃತಿಗಳನ್ನು ರಚಿಸಿದ್ದಾರೆ.

ವೇದೋಪನಿಷತ್ತುಗಳು ಹಾಗೂ ರಾಮಾಯಣ ಮಹಾಭಾರತ ಮಹಾಕಾವ್ಯಗಳನ್ನು ಕುರಿತು 30,000 ಗಂಟೆಗಳಷ್ಟು ಉಪನ್ಯಾಸ ನೀಡಿದ್ದಾರೆ .

ವಿದ್ಯಾವಾಚಸ್ಪತಿ ಎಂಬುದು ಅವರ ಪಾಂಡಿತ್ಯಕ್ಕೆ ಸಂದ ಬಿರುದು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅವರಿಗೆ ಸಂದಿವೆ. ಡಾ . ಗೋವಿಂದಾಚಾರ್ಯರು ಅಖಿಲ ಭಾರತ ಸಂಸ್ಕೃತ ಸರಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನಿತ್ತು ಗೌರವಿಸಿದೆ.

ಭಗವಂತನ ನಲ್ನುಡಿ, ಮುಗಿಲ ಮಾತು, ಹೇಳದೆ ಉಳಿದದ್ದು, ಮತ್ತೆ ರಾಮನ ಕತೆ, ಮಹಾಶ್ವೇತೆ, ನೆನಪಾದಳು ಶಕುಂತಲೆ, ಆವೆಯ ಮಣ್ಣಿನ ಆಟದ ಬಂಡಿ, ಋತುಗಳ ಹೆಣಿಗೆ – ಇವು ಇವರ ಕೆಲವು ಸಾಹಿತ್ಯ ಕೃತಿಗಳು.

ಶುಕನಾಸನ ಉಪದೇಶ ಘಟಕದ ಆಯ್ಕೆ:

ಪ್ರಸ್ತುತ ಶುಕನಾಸನ ಉಪದೇಶ ಪಾಠವನ್ನು ಅವರ ಕಾದಂಬರಿ ಕೃತಿಯಿಂದ ಆರಿಸಿಕೊಳ್ಳಲಾಗಿದೆ, ಇದು ಬಾಣಭಟ್ಟನು ಸಂಸ್ಕೃತದಲ್ಲಿ ಬರೆದ ಅದೇ ಹೆಸರಿನ ಕೃತಿಯ ಕನ್ನಡಾನುವಾದ.

 

ಶುಕನಾಸನ ಉಪದೇಶ ಘಟಕದ ಪದಗಳ ಅರ್ಥ

  • ಶ್ರೀಮುಖ - ಲಕ್ಷಣವಾದ ಮುಖ      
  • ಮೆಲುಹಾಸೆ - ಮೆತ್ತನೆಯ ಹಾಸಿಗೆ
  • ಮೀಹ - ಸ್ನಾನ
  • ದರ್ಭೆ - ಒಂದು ಜಾತಿಯ ಹುಲ್ಲು  
  • ಬಗೆ - ಮನಸ್ಸು, ವ್ಯಕ್ತಿತ್ವ, ರೀತಿ, ವಿಧಾನ    
  • ಪಾವುಡ - ತಲೆಗೆ ಸುತ್ತುವ ವಸ್ತ್ರ,
  • ಪೇಟ ಪೈತ್ಯ - ಮನೋವಿಕಾರ, ತಿಕ್ಕಲು, ಹುಚ್ಚಾಟಿಕೆ   
  • ಕಂಚುಕಿ - ಅಂತಃಪುರದ ಅಧಿಕಾರಿ

  • ಕ್ಷುದ್ರ - ಕೀಳು          
  • ನಲ್ನುಡಿ - ಒಳ್ಳೆಯ ಮಾತು, ಹಿತವಾದ ಮಾತು
  • ಜಾಡ್ಯ - ರೋಗ  
  • ಅಟಾಟೋಪ - ಹಾರಾಟ,
  • ಗದ್ದಲ ಕಲುಷ - ಕೊಳೆ, ಕಲ್ಮಶ        
  • ಕುಲೀನ - ಶ್ರೇಷ್ಠ ಕುಲದ  ಮಂಗಲ
  • ಜಲ - ಎಲ್ಲ ಪುಣ್ಯನದಿಗಳಿಂದ ಸಂಗ್ರಹಿಸಿ ತಂದ ಪವಿತ್ರ ಜಲ


ಶುಕನಾಸನ ಉಪದೇಶ ಘಟಕದ ಟಿಪ್ಪಣಿಗಳು:

  • ಉಚ್ಚೈಃಶ್ರವಸು - ಇಂದ್ರನ ಕುದುರೆ.
  • ಕೌಸ್ತುಭ - ವಿಷ್ಣುವಿನ ಎದೆಯನ್ನು ಅಲಂಕರಿಸಿರುವ ಒಂದು ರತ್ನ.
  • ಕಾಲಕೂಟ - ಸಮುದ್ರಮಥನದಲ್ಲಿ ಹುಟ್ಟಿದ ಒಂದು ಉಗ್ರವಾದ ವಿಷ.
  • ಮದಜಲ - ಆನೆಗೆ ಮದವುಂಟಾದಾಗ ಕುಂಭಸ್ಥಳದಿಂದ ಸುರಿಯುವ ದ್ರವ.

ಅಭ್ಯಾಸ

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಹಿತವಚನವು ಮನಸ್ಸಿನ ಕೊಳೆಯನ್ನು ಹೇಗೆ ತೊಳೆಯುತ್ತದೆ?

2. ಯಾರ ಕಿವಿಗೆ ಉಪದೇಶ ನಾಟುವುದಿಲ್ಲ?

3. ಯಾರಿಗೆ ಜಗತ್ತು ಕ್ಷುದ್ರವಾಗಿ ಕಾಣುತ್ತದೆ?

4. ಲಕ್ಷ್ಮಿ ಯಾವ ಯಾವ ದುರ್ಗುಣಗಳನ್ನು ಹೊತ್ತು ಬಂದಿದ್ದಾಳೆ?

5. ಸಂಪತ್ತಿನ ಗುಣವೇನು?

6. ಯಾರ್ಯಾರನ್ನು ಕಂಡರೆ ಸಂಪತ್ತಿಗೆ ಆಗಿಬರುವುದಿಲ್ಲ?

7. ದರ್ಭೆಯ ಚಿಗುರು ಯಾವ ಗುಣವನ್ನು ಒರೆಸಿಬಿಡುತ್ತದೆ?

8. ಬೆಳ್ಗೊಡೆಯ ಅಡಿಯಲ್ಲಿ ಯಾವುದು ಕಾಣುವುದಿಲ್ಲ?


ಆ) ಕೆಳಗಿನ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿರಿ.

1. ಗುರೂಪದೇಶದ ಗುಣಗಳನ್ನು ಪಟ್ಟಿಮಾಡಿ.

2. ಗುರೂಪದೇಶವು ಯಾರಿಗೆ ಮೆಚ್ಚಿಕೆಯಾಗುವುದಿಲ್ಲ?

3. ರಾಜರ ಪ್ರಕೃತಿ ಹೇಗಿರುತ್ತದೆ?

4. ಸಂಪತ್ತನ್ನು ಕಾಪಾಡಲು ಎದುರಾಗುವ ಕಷ್ಟಗಳೇನು?

5. ಸಂಪತ್ತು ಯಾರನ್ನು ಆಶ್ರಯಿಸುತ್ತದೆ?

6. ದುಡ್ಡಿನ ನಿಜರೂಪವೇನು?

7. ಸಿರಿಯು ರಾಜರಿಗೆ ಒಲಿದರೆ ಏನೇನು ಅನಾಹುತಗಳಾಗುತ್ತವೆ?

ಇ) ಕೆಳಗಿನ ಪ್ರಶ್ನೆಗಳಿಗೆ ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1. ಗುರೂಪದೇಶವನ್ನು ಯಾರ್ಯಾರು ಹೇಗೆ ಸ್ವೀಕರಿಸುತ್ತಾರೆ?

2. ಸಂಪತ್ತಿನ ಗುಣಾವಗುಣಗಳನ್ನು ವಿವರಿಸಿ.

3. ಸಂಪತ್ತಿನ ಮದವೇರಿದ ಅರಸರ ಸ್ವಭಾವ ಹೇಗಿರುತ್ತದೆ?


ಈ) ಈ ಮಾತುಗಳ ಸಂದರ್ಭದೊಡನೆ ಸ್ವಾರಸ್ಯವನ್ನು ವಿಸ್ತರಿಸಿ ಬರೆಯಿರಿ.

1. ಗುರೂಪದೇಶ ಎಂದರೆ ತಲೆ ನೆರೆಯದೆ ಬರುವ ಮುಪ್ಪು.

2. ದುಡ್ಡು ದುರಭಿಮಾನದ ತವರು.

3. ಸಂಪತ್ತು ಸಿಕ್ಕಿತು ಎಂದ ಮಾತ್ರಕ್ಕೆಯೆ ಸುಖವುಂಟೆ?

4.  ದುಡ್ಡಿನಿಂದ  ದೊಡ್ಡವರು  ಎನಿಸಿಕೊಂಡವರಲ್ಲಿ  ಇರುವಷ್ಟು  ದೌರ್ಬಲ್ಯ,  ಸಣ್ಣತನ  ಇನ್ನೊಂದೆಡೆ    ಇರಲಾರದು.


ಉ) ಈ ಕೆಳಗಿನ ಪದಗಳ ವಚನ ಬದಲಾಯಿಸಿ ಬರೆಯಿರಿ.

ಮಾದರಿ : ಕುಲೀನ - ಕುಲೀನರು -------->

  • ಕಿವಿಯೋಲೆ,
  • ಕತ್ತಿಗಳು,
  • ಹಾವು,
  • ಬಿಂದಿಗೆಗಳು,
  • ಹೊಗಳುಭಟ.

ಊ) ಈ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿರಿ.   

  • ಕೋಲಾಹಲ,
  • ಹಿತವಚನ,
  • ದಾಕ್ಷಿಣ್ಯ,
  • ಅಪರಿಚಿತ,
  • ದೊಡ್ಡಸ್ತಿಕೆ.


ಋ) ಈ ಕೆಳಗಿನ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿರಿ.   

  • ತಲೆಗಡರಿ,
  • ಗುರೂಪದೇಶ,
  • ಹಾಲುಗಡಲು,
  • ಪಟ್ಟಾಭಿಷೇಕ.


ಭಾಷೆಯ ಸೊಬಗು

ಒಂದೇ ಶಬ್ಧ, ಆದರೆ ಎರಡು ಅರ್ಥ. ಇಂಥವು ಕನ್ನಡದಲ್ಲಿ ಹೇರಳವಾಗಿವೆ.

ಕೆರೆ -

(1) ಜೋರಾಗಿ ಮಳೆ ಸುರಿದ ಕಾರಣ ಕೆಂಪಾಂಬುಧಿ ಕೆರೆಯು ತುಂಬಿತು.

(2) ಅವನು ಮೈಯೆಲ್ಲ ಕೆರೆದುಕೊಂಡನು.

ಬರೆ -

(3) ಹೇಳಿದ್ದನ್ನು ಬರೆದುಕೊಳ್ಳುವಾಗಲೂ ತಪ್ಪಾಗುವುದೆ?

(4) ತಪ್ಪು ಮಾಡಿದರೆ ಬರೆ ಹಾಕಿಬಿಟ್ಟೇನು!

ತೊರೆ -

(5) ಗುಡ್ಡದಿಂದ ಇಳಿದುಬರುತ್ತಿದ್ದ ತೊರೆಯ ನೀರಲ್ಲಿ ಮುಖ ತೊಳೆದುಕೊಂಡೆನು.

(6) ಎಲ್ಲವನ್ನೂ ತೊರೆದು ಆತ ಕಾಶಿಗೆ ಹೊರಟುಹೋದನು.

ಇಂಥ ಇನ್ನಷ್ಟು ಶಬ್ಧಗಳನ್ನು ಪಟ್ಟಿಮಾಡಿ, ಅರ್ಥ ಬರೆಯಿರಿ.

ಸೈದ್ಧಾಂತಿಕ ಭಾಷಾಭ್ಯಾಸ

ಕಾಲ:

ಧಾತುಗಳಿಗೆ ಉತ್ತ ಎಂಬ ಕಾಲಸೂಚಕ ಪ್ರತ್ಯಯ ಸೇರಿದಾಗ ವರ್ತಮಾನ ಕಾಲರೂಪವೂ ಎಂಬ ಪ್ರತ್ಯಯ  ಸೇರಿದಾಗ  ಭೂತಕಾಲರೂಪವೂ  ವ  ಎಂಬ ಪ್ರತ್ಯಯ ಸೇರಿದಾಗ ಭವಿಷ್ಯತ್ ಕಾಲರೂಪವೂ ಉಂಟಾಗುತ್ತದೆ. ಧಾತುಗಳಿಗೆ ಕಾಲಸೂಚಕದ ಜೊತೆಗೆ ಆಖ್ಯಾತ ಪ್ರತ್ಯಯಗಳು ಸೇರಿದಾಗ ಪುರುಷವಾಚಕಗಳಿಗೆ ಅನುಗುಣವಾಗಿ ಬೇರೆಬೇರೆ ರೂಪಗಳನ್ನು ಹೊಂದುತ್ತವೆ.


ಉದಾಹರಣೆ:

ಕಾಲ ಉತ್ತಮಪುರುಷ ಮಧ್ಯಮಪುರುಷ ಪ್ರಥಮಪುರುಷ
ವರ್ತಮಾನಕಾಲ ತಿನ್ನುತ್ತೇನೆ ತಿನ್ನುತ್ತಿ ತಿನ್ನುತ್ತಾನೆ
ಭೂತಕಾಲ ತಿಂದೆನು ತಿಂದೆ ತಿಂದನು
ಭವಿಷ್ಯತ್ಕಾಲ ತಿನ್ನುವೆನು ತಿನ್ನುವೆ ತಿನ್ನುವನು

ಕಾಲಪಲ್ಲಟ: ಒಂದು ಕಾಲದ ಕ್ರಿಯೆಯನ್ನು ಇನ್ನೊಂದು ಕಾಲದ ಕ್ರಿಯಾರೂಪದಿಂದ ಹೇಳುವುದೇ ಕಾಲಪಲ್ಲಟ, ಹೀಗೆ  ಕಾಲ  ಪಲ್ಲಟವಾಗುವಾಗ  ಭವಿಷ್ಯತ್  ಕಾಲದ  ಕ್ರಿಯಾಪದಗಳು  ವರ್ತಮಾನಕಾಲದಲ್ಲೂ  ವರ್ತಮಾನ ಕಾಲದ ಕ್ರಿಯಾಪದಗಳು ಭವಿಷತ್ ಕಾಲದಲ್ಲೂ ಪ್ರಯೋಗವಾಗುವುವು.

ಉದಾ :  1.  ವರ್ತಮಾನಕಾಲವು ಭವಿಷ್ಯತ್ ಕಾಲದಲ್ಲಿ      

             - ಅವನು ಒಳಗೆ ಊಟ ಮಾಡುವನು (ಊಟಮಾಡುತ್ತಾನೆ    ಎಂದಾಗಬೇಕು)

               2.  ಭವಿಷ್ಯತ್ಕಾಲವು ವರ್ತಮಾನ ಕಾಲದಲ್ಲಿ      

               - ಅವಳು ಮುಂದಿನ ವಾರ ಬರುತ್ತಾಳೆ (ಬರುವಳು ಎಂದಾಗಬೇಕು)


ಕೊಟ್ಟಿರುವ ಸೂಚನೆಯಂತೆ ಉತ್ತರಿಸಿ.

  1.  ಹಂಪಿಯಲ್ಲಿನ ದೇವಾಲಯ ನೋಡಿಕೊಂಡು ಬಂದೆವು.     

         (ಭವಿಷ್ಯತ್ಕಾಲಕ್ಕೆ ಪರಿವರ್ತಿಸಿ)

  2.  ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುವರು.          

         (ವರ್ತಮಾನಕಾಲಕ್ಕೆ ಪರಿವರ್ತಿಸಿ)

  3.  ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆಯುತ್ತವೆ.     

        (ಭೂತಕಾಲಕ್ಕೆ ಪರಿವರ್ತಿಸಿ)

ಪತ್ರಲೇಖನ


ಈಗಾಗಲೇ ಹಿಂದಿನ ತರಗತಿಗಳಲ್ಲಿ ರಜಾ ಅರ್ಜಿ, ಬಂಧುಗಳಿಗೆ ಬರೆಯುವ ಪತ್ರಗಳ ಬಗ್ಗೆ ತಿಳಿದುಕೊಳ್ಳಲಾಗಿದೆ. ಈ ತರಗತಿಯಲ್ಲಿ ಉಳಿದ ಕೆಲವು ಮಾದರಿಗಳನ್ನು ತಿಳಿದುಕೊಳ್ಳೋಣ.

ವಿನಂತಿ ಪತ್ರ :

ನಿಮ್ಮ ಬೀದಿಗೆ ದಾರಿದೀಪ ಹಾಕಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಿರಿ.


ಇವರಿಂದ,

ಪ್ರಣವ್ ಸೂರ್ಯವಂಶಿ

ಅದರಗುಂಚಿ ಗ್ರಾಮ

ಅದರಗುಂಚಿ

ಧಾರವಾಡ ತಾಲ್ಲೂಕು

ಧಾರವಾಡ ಜಿಲ್ಲೆ   

ಇವರಿಗೆ,

ಮಾನ್ಯ ಅಧ್ಯಕ್ಷರು,

ಗ್ರಾಮ ಪಂಚಾಯಿತಿ ಕಚೇರಿ,

ಅದರಗುಂಚಿ, ಧಾರವಾಡ ತಾಲೂಕು,  ಧಾರವಾಡ  ಜಿಲ್ಲೆ.   


ಮಾನ್ಯರೇ,

                  ವಿಷಯ : ಬೀದಿ ದೀಪ ಅಳವಡಿಸುವಂತೆ ಕೋರಿ ಮನವಿ.

        ಅದರಗುಂಚಿ ಗ್ರಾಮದಿಂದ ಧಾರವಾಡಕ್ಕೆ  ಹೋಗುವ  ರಸ್ತೆಯಲ್ಲಿ  ಪ್ರತಿನಿತ್ಯ  ನೂರಾರು  ಮಂದಿ ಸಂಚರಿಸುತ್ತಾರೆ. ಈ ರಸ್ತೆ ನಿರ್ಮಾಣಗೊಂಡು ಈಗಾಗಲೇ ಹದಿನೈದು ವರ್ಷಗಳಾಗಿವೆ. ಅದರಗುಂಚಿ ಗ್ರಾಮದಲ್ಲಿ ಸುಮಾರು ಎಪ್ಪತ್ತು ಮನೆಗಳಿಗೆ ಹೋಗಲು ಈ ರಸ್ತೆ ಪ್ರಮುಖವಾಗಿದೆ. ಆದರೆ ರಸ್ತೆ ಹೊಂಡಮಯವಾಗಿರುವರಿಂದ ಹಾಗೂ ಕಾಡಿನ ಮಧ್ಯೆ ಹಾದು ಹೋಗುವುದರಿಂದ ರಾತ್ರಿ ಹೊತ್ತಿನಲ್ಲಿ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ.  ಆದುದರಿಂದ  ಗ್ರಾಮ  ಪಂಚಾಯಿತಿಯ  ವತಿಯಿಂದ  ದಾರಿದೀಪ  ಹಾಕಿಸಬೇಕಾಗಿ  ಈ  ಮೂಲಕ ಪ್ರಾರ್ಥಿಸಿಕೊಳ್ಳುತ್ತೇನೆ.


                                                ಧನ್ಯವಾದಗಳೊಂದಿಗೆ           

ದಿನಾಂಕ : 16-02-2023                                                                           ಇಂತಿ ತಮ್ಮ ವಿಶ್ವಾಸಿ,

 ಸ್ಥಳ : ಅದರಗುಂಚಿ ಅಂಚೆ                                                                           ಸಹಿ.......................

                                                                                                             (ಪ್ರಣವ್ ಸೂರ್ಯವಂಶಿ)


(ಊರಿನ ನಾಗರಿಕರಲ್ಲಿ ಐವತ್ತು ಜನರು ಈ ವಿನಂತಿ ಪತ್ರಕ್ಕೆ ಸಹಿ ಹಾಕಿರುತ್ತಾರೆ.)

ಪೂರಕ ಓದು

  •  ಪ್ರಸ್ತುತ ಪಾಠದಲ್ಲಿ ಬಂದಿರುವ ಮುಚ್ಚಂಜೆ, ಮೀಹ, ಮುಪ್ಪು, ಬೊಜ್ಜು - ಇವೆಲ್ಲ ಅಚ್ಚ ಕನ್ನಡದ ಪದಗಳು.
  • ಈ ಪಾಠದಲ್ಲಿ ಬಂದಿರುವ ಉಳಿದ ಅಂಥ ಅಚ್ಚಕನ್ನಡದ ಪದಗಳನ್ನು ಪಟ್ಟಿಮಾಡಿ.
  • ಡಾ. ಬನ್ನಂಜೆ ಗೋವಿಂದಾಚಾರ್ಯರ ಇನ್ನಿತರ ಕೃತಿಗಳನ್ನು ಓದಿ ಅಭ್ಯಸಿಸಿರಿ.
  • `ಸಮುದ್ರಮಥನ ಸಂದರ್ಭದ ಕತೆಯನ್ನು ಓದಿ, ತಿಳಿಯಿರಿ.

 

ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ

 

1. ಹಿತವಚನವು ಮನಸ್ಸಿನ ಕೊಳೆಯನ್ನು ಹೇಗೆ ತೊಳೆಯುತ್ತದೆ?

 ಮುಸ್ಸಂಜೆಯ ಚಂದ್ರ ಕತ್ತಲನ್ನು ಕಳೆವಂತೆ, ಬಗೆಯ (ಮನಸ್ಸಿನ) ಕೊಳೆಯನ್ನೆಲ್ಲ ಹಿತವಚನ ತೊಳೆದುಬಿಡುತ್ತದೆ

2. ಯಾರ ಕಿವಿಗೆ ಉಪದೇಶ ನಾಟುವುದಿಲ್ಲ?

 ರಾಜರ ಮನೆತನದಲ್ಲಿ ಹುಟ್ಟಿದರೆ ಸಾಕು. ಅಹಂಕಾರದಿಂದ ಅವರ ಕಿವಿ ಕಿವುಡಾಗಿ ಬಿಡುತ್ತದೆ. ಇಂತಹವರ ಕಿವಿಗೆ ಉಪದೇಶವು ನಾಟುವುದಿಲ್ಲ

 

3. ಯಾರಿಗೆ ಜಗತ್ತು ಕ್ಷುದ್ರವಾಗಿ ಕಾಣುತ್ತದೆ?

 ದುಡ್ಡು ದುರಭಿನದ ತವರು ದುಡ್ಡಿನ ಪೈತ್ಯ (ಮನೋವಿಕಾರ) ಅಡರಿದವರಿಗೆ ಜಗತ್ತೇಲ್ಲ ಕ್ಷುದ್ರವಾಗಿ ಕಾಣುತ್ತದೆ

 

4. ಲಕ್ಷೀ ಯಾವ ಯಾವ ದುರ್ಗುಣಗಳನ್ನು ಹೊತ್ತು ಬಂದಿದ್ದಾಳೆ?

ಲಕ್ಷೀಯೆಂಬ ಚಂಚಲೆ ಹಾಲುಗಡಲಿನಿಂದ ಮೇಲೆದ್ದು ಬರುವಾಗಲೇ ತನ್ನ  ಜತೆಗಾರರಿಂದ ಹಲವೆಲ್ಲ  ದುರ್ಗುಣಗಳನ್ನು ಹೊತ್ತುಕೊಂಡು ಬಂದಿದ್ದಾಳೆ

 

5. ಸಂಪತ್ತಿನ ಗುಣವೇನು?

ಸಂಪತ್ತಿನ ಸ್ನೇಹದ ಬಂಧನವಿಲ್ಲ : ಕುಲದ ಗುರುತಿಲ್ಲ: ರೂಪದ ಒಲವಿಲ್ಲ.ಒಂದೇ ಮನೆತನದಲ್ಲಿ ಬಹುಕಾಲ ಉಳಿಯವ ಅಭ್ಯಾಸವಂತು ಇಲ್ಲವೇ ಇಲ್ಲ

 

6. ಯಾರಾರನ್ನು ಕಂಡರೆ ಸಂಪತ್ತಿಗೆ ಆಗಿಬರುವುದಿಲ್ಲ?

ವಿದ್ಯಾವಂತ, ಗುಣವಂತ, ವೀರ,ಶೂರ, ಸಜ್ಜನರು, ಕುಲೀನರು, ದಾನಶೀಲರು, ವಿನಯಶೀಲರು, ಹಾಗೂ ಪಂಡಿತರನ್ನು ಕಂಡರೆ ಸಂಪತ್ತಿಗೆ ಆಗಿಬರುವುದಿಲ್ಲ.

 

7. ದರ್ಭೆಯ ಚಿಗುರು ಯಾವ ಗುಣವನ್ನು ಒರೆಸಿಬಿಡುತ್ತದೆ?

 ದರ್ಭೆಯ (ಒಂದು ಜಾತಿಯ ಹುಲ್ಲು) ಚಿಗುರು ಕ್ಷಮಾಗುಣವನ್ನು ಒರೆಸಿಬಿಡುತ್ತದೆ.

 

8. ಬೆಳ್ಕೊಡೆಯ ಅಡಿಯಲ್ಲಿ ಯಾವುದು ಕಾಣುವುದಿಲ್ಲ?

 ಬೆಳ್ಕೊಡೆಯ ಅಡಿಯಲ್ಲಿ ಪೆರಲೋಕ ಕಾಣಿಸುವುದಿಲ್ಲ.


ಆ) ಕೆಳಗಿನ ಪ್ರಶ್ನೆಗಳಿಗೆ ಐದು -ಆರು ವಾಕ್ಯಗಳಲ್ಲಿ ಉತ್ತರಿಸಿರಿ.

 

1. ಗುರೂಪದೇಶದ ಗುಣಗಳನ್ನು ಪಟ್ಟಿಮಾಡಿ.

ಗುರೂಪದೇಶ ಎಂದರೆ ಜನರ ಒಳ ಹೊರಗಣ ಕೊಳೆಗಳನ್ನು ತೊಳೆದು ಬಿಡುವ ನೀರಿಲ್ಲದ ʼಮೀಹʼ (ಸ್ನಾನ) ತಲೆ ನೆರೆಯದ, ಮೈ , ಸುಕ್ಕುಗಟ್ಟದೆ ಮೂಡುವ ಮುಪ್ಪು:ಬೊಜ್ಜು ಬೆಳೆಯದೆ ಬರುವ ಗುರುತ್ವ: ಬಂಗಾರವಿಲ್ಲದೆ ಮಾಡಿ ಬೆಲೆಬಾಳುವ ಕಿವಿಯೋಲೆ: ಪಂಜು ಇಲ್ಲದೆ ಬೆಳಗುವ ಬೆಳಕು: ಉದ್ವೇಗ ಬರಿಸದ ಜಾಗರಣೆ.


2. ಗುರೂಪದೇಶವು ಯಾರಿಗೆ ಮೆಚ್ಚಿಕೆಯಾಗುವುದಿಲ್ಲ ?

ರಾಜರ ಮನೆತನದಲ್ಲಿ ಹುಟ್ಟಿದರೆ ಸಾಕು ಅಹಂಕಾರದಿಂದ ಅವರ ಕಿವಿ ಕಿವುಡಾಗಿಬಿಡುತ್ತದೆ. ಎಂಥ ಉಪದೇಶವು ಅವರ ಕಿವಿಗೆ ನಾಟುವುದಿಲ್ಲ. ಯಾರದೋ ದಾಕ್ಷಿಣ್ಯಕ್ಕೆ  ಉಪದೇಶವನ್ನು ಆಲಿಸಿದರೂ ಎಂಥ ಅನಾದರೆ ಆ  ಮೋರೆಯಲ್ಲಿ ! ಆನೆಯಂತೆ ಅರೆಸ ಮುಚ್ಚಿದ ಕಣ್ಣಲ್ಲಿ ʼತನಗೆ ಉಪದೇಶಿಸಬೇಕಾದ್ದು ಏನೂ ಉಳಿದಿಲ್ಲʼ ಎನುವಂಥ ಭಾವ, ಇಂಥವರಿಗೆ ಗುರೂಪದೇಶ ಮೆಚ್ಚಿಗೆ ಆಗುವುದಿಲ್ಲ.

3. ರಾಜರ ಪ್ರಕೃತಿ ಹೇಗಿರುತ್ತದೆ ?

ರಾಜರ ಪ್ರಕೃತಿಯು, ಅಹಂಕಾರದ ದಾಹಜ್ವರ ತಲೆಗಡರಿ ಅವರ ಬಗೆ ( ವ್ಯಕ್ತಿತ್ವ ) ಯಲ್ಲಿ ಕತ್ತಲು ತುಂಬಿರುತ್ತದೆ . ಇದು ಎಲ್ಲ ದುಡ್ಡಿನ ಮಹಿಮೆ, ದುಡ್ಡು ದುರಭಿಮಾನದ ತವರು . ದುಡ್ಡಿನ ಪೈತ್ಯ ಅಡರಿದವರಿಗೆ ಜಗತ್ತೆಲ್ಲ ಕುದ್ರವಾಗಿ ಕಾಣುತ್ತದೆ . ರಾಜ್ಯ ಎನ್ನುವುದು ಒಂದು ವಿಷ , ಅದರ ಅಧಿಕಾರದ ಸೋಂಕು ತಾಗಿದವರಿಗೆಲ್ಲ ಬುದ್ದಿ ಮಂಕಾಗಿ ಬಿಡುತ್ತದೆ.


4. ಸಂಪತ್ತನ್ನು ಕಾಪಾಡಲು ಎದುರಾಗುವ ಕಷ್ಟಗಳೇನು ?

ಸಂಪತ್ತನ್ನು ಕಾಯುವ ಕಷ್ಟ ಕಾಪಾಡುವ ಪಾಡು ಯಅರಿಗೆ ಬೇಕು ? ಎಷ್ಡು ಬಿಗಿಯಾಗಿ ಬಿಗಿದರೂ ನುಸುಳಿಕೊಳ್ಳುವಂಥ ಜಾಣು ಅದಕ್ಕೆ ತಿಳಿದಿದೆ ಮಹಾವೀರರಾದ ಸಾವಿರಾರು ಸೈನಿಕರ ಕತ್ತಿಗಳ ಪಂಜರದ ನಡುವೆ ಕಾಪಿಟ್ಟ ಸಂಪತ್ತು ಕೂಡ ತನ್ನ ತಾನೆ ಕಣರೆಯಾಗಿಬಿಡುತ್ತದೆ.ಮದಜಲವನ್ನು ಸುರಿದು ಸುತ್ತೆಲ್ಲ .ಕತ್ತಲು ಬರಿಸುವ ಮದ್ದಾನೆಗಳ ಕಾವಲಿನಲ್ಲಿ ಕೂಡ ಕಣ್ನು ತಪ್ಪಿಸಿ ಓಡಿಬಿಡುತ್ತದೆ.


5. ಸಂಪತ್ತು ಯಾರನ್ನು ಆಶ್ರಯಿಸುತ್ತದೆ ?

ಸಂಪತ್ತು ಸ್ವಭಾವವನ್ನು ಕಾಣದು ; ಪಾಂಡಿತ್ಯವನ್ನು ಗಣಿಸದು ; ಶಾಸ್ತ್ರವನ್ನು ಆಲಿಸದು ; ಧರ್ಮವನ್ನು ನಂಬದು , ಅದಕ್ಕೆ ತ್ಯಾಗದ ಮೇಲೆ ಗೌರವವಿಲ್ಲ ; ತುಂಬ ಬಲ್ಲವರು ಎಂದರೆ ಆದರವಿಲ್ಲ ; ಒಳ್ಳೆಯ ನಡತೆ ಅದಕ್ಕೆ ಅಪರಿಚಿತ , ಆದರ ಮುಂದೆ ಸತ್ಯಕ್ಕು ಸುಳ್ಳಿನಷ್ಟೆ ಬೆಲೆ . ಅದು ಒಳ್ಳೆಯ ಲಕ್ಷಣವಂತನನ್ನೆ ಆಶ್ರಯಿಸುತ್ತದೆ ಎಂಬ ನಿಯಮವಿಲ್ಲ . ಅದರ ಚಾಪಲ್ಯಕ್ಕಂತು ಎಣೆಯೇ ಇಲ್ಲ . ಅದು ಗಂಧರ್ವನಗರೆದಂತೆ ಕಾಣುತ್ತಿದ್ದಂತೆಯೇ ಕರಗಿಬಿಡುತ್ತದೆ!

6. ದುಡ್ಡಿನ ನಿಜರೂಪವೇನು ?

ದುಡ್ಡು ಆಸೆಯ ವಿಷಲತೆಗೆ ಎರೆಯುವ ನೀರು , ಇಂದ್ರಿಯಗಳೆಂಬ ಜಿಂಕೆಗಳನ್ನು ಮರುಳುಗೊಳಿಸುವ ಬೇಡನ ಸಂಗೀತ . ಒಳ್ಳೆಯ ನಡತೆಯೆಂಬ ಚಿತ್ರಕ್ಕೆ ಬಳಿದ ಮಸಿ , ಅವಿವೇಕದ ಸವಿನಿದ್ದೆಗೆ ಹಾಸಿದ ಮೆಲುಹಾಸೆ , ಅಹಂಕಾರದ ಪಿಶಾಚಿಗಳಿಗೆ ನೆಲೆಮನೆಯಾದ ಹಳೆಯಟ್ಟ ,ಶಾಸ್ತ್ರದ ತಿಳಿವಿಗೆ ಬಿಗಿದ ಕಣ್ಪಟ್ಟಿ, ಎಲ್ಲ ದೌರ್ಜನ್ಯಗಳ ವಿಜಯಧ್ವಜ, ಕೋಪವೆಂಬ ಮೊಸಳೆಯನ್ನು ಹೊತ್ತ ಹೊಳೆ, ವಿಷಯ ಮದ್ಯಗಳ ಪಾನಭೂಮಿ, ಸಜ್ಜನಿಕೆಗೆ ಬೀಸಿದ ಬೆತ್ತ ,ಒಳ್ಳಯತನವೆಂಬ ಕಲಹಂಸಗಳನ್ನು ಓಡಿಸುವ ಬಿರುಮಳೆ. ಸಜ್ಜನಿಕೆಯನ್ನು ಸುಡುವ ಮಸಣ. ಧರ್ಮವೆಂಬ ಚಂದ್ರಮಂಡಲವನ್ನು ಕಬಳಿಸುವ ರಾಹುವಿನ ಕರಿನಾಲಿಗೆ.


7. ಸಿರಿಯು ರಾಜರಿಗೆ ಒಲಿದರೆ ಏನೇನು ಅನಾಹುತಗಳಾಗುತ್ತವೆ ?

ಸಿರಿಯು ರಾಜರಿಗೆ ಒಲಿದರೆ , ಪಟ್ಟಾಭಿಷೇಕ ಕಾಲದಲ್ಲಿ ಅವರ ತಲೆಗೆ ಮಂಗಳಜಲವನ್ನು ಬಿಂದಿಗೆಯಿಂದ ಸುರಿಯುತ್ತಾರೆ . ಈ ಸಲಿಲವೆ ಅವರ ದಯೆ – ದಾಕ್ಷಿಣ್ಯಗಳನ್ನೆಲ್ಲ ತೊಳೆದುಬಿಡುತ್ತದೆ. ಹೋಮದ ಹೊಗೆಯಿಂದ ಬಗೆಯೆಲ ಮಲಿನವಾಗುತ್ತದೆ . ಪುರೋಹಿತರು ಮಂತ್ರಜಲವನ್ನು ಸಿಂಪಡಿಸುವ ದರ್ಭೆಯ ಚಿಗುರು ಅವರ ಕ್ಷಮಾಗುಣವನ್ನು ಒರೆಸಿಬಿಡುತ್ತದೆ . ತಲೆಗೆ ಬಿಗಿದ ಪಾವುಡದ ಎಡೆಯಲ್ಲಿ ಮುಪ್ಪಿನ ನೆನಪು ಮರೆಯಾಗುತ್ತದೆ.

ಬೆಳ್ಕೊಡೆಯ ಅಡಿಯಲ್ಲಿ ಪರಲೋಕ ಕಾಣಿಸುವುದಿಲ್ಲ. ದಿಟವನ್ನೆ ನುಡಿಯುವ ಬುದ್ದಿ ಚಾಮರದ ಗಾಳಿಯಲ್ಲಿ ತೇಲಿಹೋಗುತ್ತದೆ. ಕಂಚುಕಿಗಳ ಕೈಯ ಬೆತ್ತವನ್ನು ಕಂಡೇ ಸಜ್ಜನಿಕೆ ದೂರ ಸರಿಯುತ್ತದೆ . ಹೊಗಳುಭಟರ ಜಯಕಾರದ ಕೋಲಾಹಲದಲ್ಲಿ ನುಡಿ ಕೇಳುವ ಕಿವಿ ಕಿವುಡಾಗುತ್ತದೆ . ತೊನೆಯುವ ವಿಜಯಧ್ವಜವೆ ಯಶಸ್ಸನ್ನು ನಾಶಗೊಳಿಸುತ್ತದೆ . ಹೀಗಿದೆ ಐಶ್ವರ್ಯದೆ ( ಸಿರಿಯ ) ಅಟಾಟೋಪ ! ಅಥವಾ ಅನಾಹುತಗಳು.

ಇ) ಕೆಳಗಿನ ಪ್ರಶ್ನೆಗಳಿಗೆ ಹತ್ತು ವಾಕ್ಯದಲ್ಲಿ ಉತ್ತರಿಸಿರಿ

 

1. ಗುರೂಪದೇಶವನ್ನು ಯಾರು ಯಾರು ಹೇಗೆ ಸ್ವೀಕರಿಸುತ್ತಾರೆ ?

ಗುರುವಾಣಿ ಎಷ್ಟು ಪರಿಶುದ್ಧವಾದರೂ ಮೂರ್ಖನ ಕಿವಿಗೆ ಅದು ಒಂದು ಹೊರೆ , ಅಂಥವರು ಕಿವಿಯೊಳಗೆ ಹಿತವಚನ ಹೊಕ್ಕಾಗ ತಿಳಿನೀರು ಹೊಕ್ಕಂತೆ ಸಂಕಟಪಟ್ಟು ಕೊಳ್ಳುತ್ತಾರೆ . ಆದರೆ ಸಜ್ಜನರಿಗೆ ಗುರುವಚನ ಎನ್ನುವುದು ಕಿವಿಗೆ ಒಂದು ಆಭರಣ , ಆದರಿಂದ ಅವರ ಶ್ರೀಮುಖ ಇನ್ನಷ್ಟು ಶ್ರೀಮಂತವಾಗುತ್ತದೆ .

ಮುಸ್ಸಂಜೆಯ ಚಂದ್ರ ಕತ್ತಲನ್ನು ಕಳೆವಂತೆ , ಬಗೆಯ ಕೊಳೆಯನ್ನೆಲ್ಲ ಹಿತವಚನೆ ತೊಳೆದುಬಿಡುತ್ತದೆ . ಆಗ ಬಾಳಿನಲ್ಲಿ ಒಂದು ಸಂಯಮ , ಒಂದು ಪಕ್ವತೆ , ಒಂದು ಶಾಂತಿ ಕಾಣಿಸಿಕೊಳ್ಳುತ್ತದೆ . ರಾಜರ ಮನೆತನದಲ್ಲಿ ಹುಟ್ಟಿದರೆ ಸಾಕು . ಅಹಂಕಾರದಿಂದ ಅವರ ಕಿವಿ ಕಿವುಡಾಗಿಬಿಡುತ್ತದೆ . ಎಂಥ ಉಪದೇಶವೂ ಅವರ ಕಿವಿಗೆ ನಾಟುವುದಿಲ್ಲ ಯಾರದೋ ದಾಕ್ಷಿಣ್ಯಕ್ಕೆ ಉಪದೇಶವನ್ನು ಆಲಿಸಿದರೂ ಎಂಥ ಅನಾದರ ಆ ಮೋರೆಯಲಿ ಆನೆಯಂತೆ ಅರೆ ಮುಚ್ಚಿದ ಕಣ್ಣಲ್ಲಿ “ ತನಗೆ ಉಪದೇಶಿಸಬೇಕಾದ್ದು ಏನೂ ಉಳಿದಿಲ ” ಎನುವಂಥ ಭಾವ , ಉಪದೇಶಿಸ ಬಂದ ಗುರುಗಳಿಗೂ ಇದು ಒಂದು ವ್ಯಾಧಿ . ಇಂಥವರಿಗೆ ಪಾಠ ಹೇಳುವ ದೌರ್ಭಾಗ್ಯ ತಮಗೇಕೆ ಬಂತು ಎಂದು ಅವರು ನೊಂದುಕೊಳ್ಳುತ್ತಾರೆ


2. ಸಂಪತ್ತಿನ ಗುಣಾವಗುಣಗಳನ್ನು ವಿವರಿಸಿ .

ಸಂಪತ್ತಿಗೆ ಸ್ನೇಹದ ಬಂಧನವಿಲ್ಲ: ಕುಲದ ಗುರುತಿಲ್ಲ: ರೂಪದ ಒಲವಿಲ್ಲ. ಒಂದೇ ಮನೆತನದಲ್ಲಿ ಬಹುಕಾಲ ಉಳಿಯುವ ಅಭ್ಯಾಸವಂತು ಇಲ್ಲವೇ ಇಲ್ಲ. ಅದು ಸ್ವಭಾವವನ್ನು ಕಾಣದು; ಪಾಂಡಿತ್ಯವನ್ನು ಗಣಿಸದು; ಶಾಸ್ತ್ರವನ್ನು ಆಲಿಸದು; ಧರ್ಮವನ್ನು ನಂಬದು, ಅದಕ್ಕೆ ತ್ಯಾಗದ ಮೇಲೆ ಗೌರವವಿಲ್ಲ; ತುಂಬ ಬಲ್ಲವರು ಎಂದರೆ ಆದರವಿಲ್ಲ; ಒಳ್ಳೆಯ ನಡತೆ ಆದರ ಮುಂದೆ ಸತ್ಯಕ್ಕು ಸುಳ್ಳಿನ ಬೆಲೆ. ಅದು ಒಳ್ಳೆಯ ಲಕ್ಷಣವಂತನನ್ನೆ ಆಶ್ರಯಿಸುತ್ತದೆ ಎಂಬ ನಿಯಮವಿಲ್ಲ. ಅದರ ಚಪಲ ಕೆಂತು ಎಣೆಯೇ ಇಲ್ಲ, ಅದು ಗಂಧರ್ವನಗರದಂತೆ, ಕಾಣುತ್ತಿದ್ದಂತೆಯೇ ಕರಗಿಬಿಡುತ್ತದೆ ! ದುಡ್ಡು ಒಂದು ಕೆಟ್ಟ ಪಿಶಾಚಿ, ಅದು ಕೆಲವರನ್ನು ದೊಡ್ಡಸ್ತಿಕೆಯಲ್ಲಿ ಕುಣಿಸಿಬಿಡುತ್ತದೆ. ಕೆಲವು ಕುದ್ರ ಜೀವಿಗಳನ್ನಂತು ಈ ಪಿಶಾಚಿ ಹುಚ್ಚುಗೊಳಿಸಿ ಬಿಡುತ್ತದೆ. ವಿದ್ಯಾವಂತನನ್ನು ಕಂಡರೆ ಅದೆಕ್ಕೆ ಕಿಚ್ಚು. ಅವನಗೋಜಿಗೇ ಅದು ಬರುವುದಿಲ್ಲ. ಗುಣವಂತನನ್ನು ಕಂಡಾಗ ಕೊಳಕನನ್ನು ಕಂಡರೆ ಹೇಗೆ ಹಾಗೆ ದೂರ ಸರಿಯುತದೆ. ವೀರರನು ಕಂಡಾಗ ಅಮಂಗಲವನ್ನು ಕಂಡಂತೆ, ಸಜ್ಜನರನ್ನು ಕಂಡರೆ ಅಪಶಕುನವನ್ನು ಕಂಡಂತೆ ನಡೆದುಕೊಳ್ಳುತ್ತದೆ. ಕುಲೀನನನ್ನು ಕೆಂಡರೆ ಹಾವು ಸುಳಿದಂತೆ ಹಿಂಜರಿಯುತದೆ. ಶೂರರೆಂದರೆ ಮುಳ್ಳಿನಂತೆ, ದಾನಶೀಲರೆಂದರೆ ಕೆಟ ಕನಸಿನಂತೆ ಅದಕ್ಕೆ ತ್ಯಾಜ್ಯ ವಿನಯಶೀಲನನ್ನು, ಪಂಡಿತನನ್ನು ಕಂಡರೆ ಪಾತಕಿಯನ್ನು, ಮರುಳನನ್ನು ಕಂಡಂತೆ ನಡೆದುಕೊಳ್ಳುತ್ತದೆ. ದುಡ್ಡಿನ ಇತಿಹಾಸವೆ ಅಂಥದು

3. ಸಂಪತ್ತಿನ ಮದವೇರಿದ ಅರಸರ ಸ್ವಭಾವ ಹೇಗಿರುತ್ತದೆ?

ರಾಜರ ಮನೆತನದಲ್ಲಿ ಹುಟ್ಟಿದರೆ ಸಾಕು ಅಹಂಕಾರದಿಂದ ಅವರ ಕಿವಿ ಕಿವುಡಾಗಿಬಿಡುತ್ತದೆ. ಎಂಥ ಉಪದೇಶವೂ ಅವರ ಕಿವಿಗೆ ನಾಟುವುದಿಲ್ಲ. ಯಾರಾದೋ ದಾಕ್ಷಿಣ್ಯಕ್ಕೆ ಉಪದೇಶವನ್ನು ಆಲಿಸಿದರೂ ಎಂಥ ಅನಾಧರೆ ಆ ಮೋರೆಯಲ್ಲಿ! ಆನೆಯಂತೆ ಅರೆ ಮುಚ್ಚಿದ ಕಣ್ಣಲ್ಲಿ ʼತನಗೆ ಉಪದೇಶಿಸಬೇಕಾದ್ದು ಏನೂ ಉಳಿದಿಲ್ಲ” ಎನುವಂಥ ಭಾವ, ಉಪದೇಶಿಸ ಬಂದ ಗುರುಗಳಿಗೂ ಎದು ಒಂದು ವ್ಯಾಧಿ ಇಂಥವರಿಗೆ ಪಾಠ ಹೇಳುವ ದೌರ್ಭಾಗ್ಯ ತಮಗೇಕೆ ಬಂತು ಎಂದು ಅವರು ನೊಂದುಕೊಳ್ಳುತ್ತಾರೆ . ರಾಜರ ಪ್ರಕೃತಿಯೇ ಹಾಗೆ, ಅಹಂಕಾರದ ದಾಹಜ್ವರ ತಲೆಗಡರಿ ಅವರ ಬಗೆಯಲ್ಲಿ ಕತ್ತಲು ತುಂಬಿರುತ್ತದೆ. ಇದು ಎಲ್ಲ ದುಡ್ಡಿನ ಮಹಿಮೆ, ದುಡ್ಡು ದುರಭಿಮಾನದ ತವರು. ‘ದುಡ್ಡಿನ ಪೈತ್ಯ ಅಡರಿದವರಿಗೆ ಜಿಗತ್ತೆಲ್ಲ ಕ್ಷುದ್ರವಾಗಿ ಕಾಣುತ್ತದೆ. ರಾಜ್ಯ ಎನ್ನುವುದು ಒಂದು ವಿಷ ಅದರ ಅಧಿಕಾರದ ಸೋಂಕು ತಾಗಿದವರಿಗೆಲ್ಲ ಬುದ್ಧಿ ಮಂಕಾಗಿ ಬಿಡುತ್ತದೆ.


ಈ) ಈ ಮಾತುಗಳ ಸಂದರ್ಭದೊಡನೆ ಸ್ವಾರಸ್ಯವನ್ನು ವಿಸ್ತರಿಸಿ ಬರೆಯಿರಿ


1. ಗುರೂಪದೇಶ ಎಂದರೆ ತಲೆ ನೆರೆಯದೆ ಬರುವ ಮುಪ್ಪು ?

ಆಯ್ಕೆ: ಈ ವಾಕ್ಯವನ್ನು ಡಾ. ಬನ್ನಂಜೆ ಗೋವಿಂದಾಚಾರ್ಯ ಅವರು ಬರೆದಿರುವ ಕಾದಂಬರಿ ಎಂಬ ಕೃತಿಯಿಂದ ಆರಿಸಲಾಗಿರುವ ಶುಕನಾಸನ ಉಪದೇಶ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಇದು ಬಾಣಭಟ್ಟನು ಸಂಸ್ಕೃತದಲ್ಲಿ ಬರೆದ ಅದೇ ಹೆಸರಿನ ಕೃತಿಯ ಅನುವಾದ.

ಸಂದರ್ಭ: ಪಟ್ಟಾಭಿಷೇಕೋತ್ಸವಕ್ಕೆ ಪೂರ್ವಭಾವಿಯಾಗಿ, ಮಹಾಮಂತ್ರಿಯಾದ ಶುಕನಾಸನನ್ನು ಸಂದರ್ಶಿಸಲು ರಾಜಪುತ್ರ ಚಂದ್ರಾಪೀಡನು ಬಂದ ಸಂದರ್ಭದಲ್ಲಿ ಓರ್ವ ಜವಾಬ್ದಾರಿಯುತ ಪ್ರಧಾನಮಂತ್ರಿಯಾಗಿ ಮುಂದಕ್ಕೆ ಯುವರಾಜ ಪಟ್ಟವೇರಲಿರುವ ರಾಜಕುಮಾರನಿಗೆ, ಗುರು ಉಪದೇಶದ ಮಹತ್ವವನ್ನು ತಿಳಿಸುವ ಸಂದರ್ಭದಲ್ಲಿ ಶುಕನಾಸನರು ಈ ಮಾತನ್ನು ಹೇಳುತ್ತಾರೆ.

2. ಸಂಪತ್ತು ಸಿಕ್ಕಿತು ಎಂದ ಮಾತ್ರಕ್ಕೆಯೆ ಸುಖವುಂಟೆ ?

ಆಯ್ಕೆ: ಈ ವಾಕ್ಯವನ್ನು ಡಾ. ಬನ್ನಂಜೆ ಗೋವಿಂದಾಚಾರ್ಯ ಅವರು ಬರೆದಿರುವ ಕಾದಂಬರಿ ಎಂಬ ಕೃತಿಯಿಂದ ಆರಿಸಲಾಗಿರುವ ಶುಕನಾಸನ ಉಪದೇಶ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಇದು ಬಾಣಭಟ್ಟನು ಸಂಸ್ಕೃತದಲ್ಲಿ ಬರೆದ ಅದೇ ಹೆಸರಿನ ಕೃತಿಯ ಅನುವಾದ.

ಸಂದರ್ಭ: ಪಟ್ಟಾಭಿಷೇಕೋತ್ಸವಕ್ಕೆ ಪೂರ್ವಭಾವಿಯಾಗಿ ಮಹಾಮಂತ್ರಿಯಾದ ಶುಕನಾಸನನ್ನು ಸಂದರ್ಶಿಸಲು ರಾಜಪುತ್ರ ಚಂದ್ರಾಪೀಡನು (ಯುವರಾಜ ) ಬಂದ ಸಂದರ್ಭದಲ್ಲಿ ಓರ್ವ ಜವಾಬ್ದಾರಿಯುತ ಪ್ರಧಾನಮಂತ್ರಿಯಾಗಿ, ಸಂಪತ್ತನ್ನು ಕಾಯುವ ಕಷ ಕಾಪಾಡುವ ಪಾಡು ಯಾರಿಗೆ ಬೇಕು? ಎಷ್ಟು ಬಿಗಿಯಾಗಿ ಬಿಗಿದರೂ ನುಸುಳಿಕೊಳ್ಳುವಂಥ ಜಾಣು ಅದಕ್ಕೆ ತಿಳಿದಿದೆ. ಎಂದು ಹೇಳುವ ಸಂದರ್ಭದಲ್ಲಿ ಶುಕನಾಸನರು ಈ ಮಾತನ್ನು ಹೇಳುತ್ತಾರೆ.


3. ದುಡ್ಡು ದುರಭಿಮಾನದ ತವರು

ಆಯ್ಕೆ: ಈ ವಾಕ್ಯವನ್ನು ಡಾ. ಬನ್ನಂಜೆ ಗೋವಿಂದಾಚಾರ್ಯರವರು ಬರೆದಿರುವ ಕಾದಂಬರಿ ಎಂಬ ಕೃತಿಯಿಂದ ಆರಿಸಲಾಗಿರುವ ಶುಕನಾಸನ ಉಪದೇಶ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ ಇದು ಬಾಣಭಟ್ಟನು ಸಂಸ್ಕೃತದಲ್ಲಿ ಬರೆದ ಅದೇ ಹೆಸರಿನ ಕೃತಿಯ ಅನುವಾದ .

ಸಂದರ್ಭ: ಪಟ್ಟಾಭಿಷೇಕೋತ್ಸವಕ್ಕೆ ಪೂರ್ವಭಾವಿಯಾಗಿ, ಮಹಾಮಂತ್ರಿಯಾದ ಶುಕನಾಸನನ್ನು ಸಂದರ್ಶಿಸಲು, ರಾಜಪುತ್ರ ಚಂದ್ರಾಪೀಡನು ಬಂದ ಸಂದರ್ಭದಲ್ಲಿ ಓರ್ವ ಜವಾಬ್ದಾರಿಯುತ ಪ್ರಧಾನಮಂತ್ರಿಯಾಗಿ ಮುಂದಕ್ಕೆ ಯುವರಾಜ ಪಟ್ಟವೇರಲಿರುವ ರಾಜಕುಮಾರನಿಗೆ ದುಡ್ಡಿನ ಮಹಿಮೆಯನ್ನು ತಿಳಿಸುವ ಸಂದರ್ಭದಲ್ಲಿ ಶುಕನಾಸನರು ಈ ಮಾತನ್ನು ಹೇಳುತ್ತಾರೆ.

ಸ್ವಾರಸ್ಯ: ಶುಕನಾಸನರು ಯುವರಾಜ ಪಟ್ಟವೇರಲಿರುವ ರಾಜಕುಮಾರನಿಗೆ , ದುಡ್ಡಿನ ಮಹಿಮೆ ಹಾಗೂ ಅದರಿಂದ ಆಗುವ ಅನಾಹುತಗಳನ್ನು ಉಪದೇಶಿಸಿರುವುದು ಸ್ವಾರಸ್ಯ ಪೂರ್ಣವಾಗಿದೆ .

4. ದುಡ್ಡಿನಿಂದ ದೊಡ್ಡವರು ಎನಿಸಿಕೊಂಡವರಲ್ಲಿ ಇರುವಷ್ಟು ದೌರ್ಬಲ್ಯ ಸಣ್ಣತನ ಇನ್ನೊಂದೆಡೆ ಇರಲಾರದು.

ಆಯ್ಕೆ: ಈ ವಾಕ್ಯವನ್ನು ಡಾ . ಬನ್ನಂಜೆ ಗೋವಿಂದಾಚಾರ್ಯ ಅವರು ಬರೆದಿರುವ ಕಾದಂಬರಿ ಎಂಬ ಕೃತಿಯಿಂದ ಆರಿಸಲಾಗಿರುವ ಶುಕನಾಸನ ಉಪದೇಶ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಇದು ಬಾಣಭಟ್ಟನು ಸಂಸ್ಕೃತದಲ್ಲಿ ಬರೆದ ಅದೇ ಹೆಸರಿನ ಕೃತಿಯ ಅನುವಾದ .

ಸಂದರ್ಭ: ಪಟ್ಟಾಭಿಷೇಕೋತ್ಸವಕ್ಕೆ ಪೂರ್ವಭಾವಿಯಾಗಿ ಮಹಾಮಂತ್ರಿಯಾದ ಶುಕನಾಸನನ್ನು ಸಂದರ್ಶಿಸಲು ರಾಜಪುತ್ರ ಚಂದ್ರಾಪೀಡನು ಬಂದ ಸಂದರ್ಭದಲ್ಲಿ ಸಂಪತ್ತು ಬೆಳೆದಷ್ಟು ದುಡ್ಡಿನ ಹಸಿವೂ ಹೆಚ್ಚುತ್ತದೆ. ಐಶ್ವರ್ಯ ಬೆಳೆದಂತೆಯ ದುರ್ಗುಣಗಳೂ ಬೆಳೆಯುತ್ತಿರುತ್ತವೆ. ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಉಪದೇಶವನ್ನು ಶುಕನಾಸನರು ಹೇಳುತ್ತಾರೆ

ಸ್ವಾರಸ್ಯ: ಐಶ್ವರ್ಯ ಬೆಳೆದಂತೆಯ ದುರ್ಗುಣಗಳೂ ಬೆಳೆಯುತ್ತಿರುತ್ತವೆ. ಎಂದು ಶುಕನಾಸನರು ಯುವರಾಜನಿಗೆ ಹೇಳಿರುವುದು ಇಲ್ಲಿ ಸ್ವಾರಸ್ಯಪೂರ್ಣವಾಗಿದೆ .

 

ಉ ) ಈ ಕೆಳಗಿನ ಪದಗಳ ವಚನ ಬದಲಾಯಿಸಿ ಬರೆಯಿರಿ .

ಮಾದರಿ : ಕುಲೀನ – ಕುಲೀನರು

  •  ಕಿವಿಯೋಲೆ – ಕಿವಿಯೋಲೆಗಳು
  •  ಕತ್ತಿಗಳು -ಕತ್ತಿ
  •  ಹಾವು -ಹಾವುಗಳು
  •  ಬಿಂದಿಗೆಗಳು -ಬಿಂದಿಗೆ
  •  ಹೊಗಳುಭಟ -ಹೊಗಳುಭಟರು

 

ಊ ) ಈ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿರಿ.

ಕೋಲಾಹಲ : -ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಕೋಲಾಹಲವೆಬ್ಬಿಸಿದವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು

 ಹಿತವಚನ : ಗುರು ಹಿರಿಯರು ಹೇಳುವ ಹಿತವಚನದಂತೆ ನಾವು ನಡೆದುಕೊಂಡರೆ ನಮ್ಮ ಜೀವನ ಸುಂದರವಾಗಿರುತ್ತದೆ .

ದಾಕ್ಷಿಣ್ಯ : : – ಬೇರೆಯವರ ದಾಕ್ಷಿಣ್ಯದಲ್ಲಿ ನಾವು ಬದುಕಬಾರದು .

 ಅಪರಿಚಿತ : – ನಾವು ಪ್ರಯಾಣ ಮಾಡುತ್ತಿರುವಾಗ ಅಪರಿಚಿತ ವ್ಯಕ್ತಿಗಳು ಕೊಡುವ ಆಹಾರವನ್ನು ಸ್ವೀಕರಿಸಬಾರದು

ದೊಡ್ಡಸ್ತಿಕೆ : ದುಡ್ಡಿನ ದೊಡ್ಡಸ್ತಕೆಯಲ್ಲಿ ನಾವು ಅಹಂಕಾರದಿಂದ ಬೇರೆಯವರನ್ನು ಹಿಯಾಳಿಸಬಾರದು


ಹೆಚ್ಚುವರಿ ಪ್ರಶೋತ್ತರಗಳು :

ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .


1. ಮೂರ್ಖನ ಕಿವಿಗೆ ಯಾವುದು ಹೊರೆಯಾಗುತ್ತದೆ ?

ಉತ್ತರ : ಗುರುವಾಣಿಯು ಮೂರ್ಖನ ಕಿವಿಗೆ ಒಂದು ಹೊರೆಯಾಗುತ್ತದೆ .


2. ಸಜ್ಜನರಿಗೆ ಗುರುವಚನ ಎನ್ನುವುದು ಯಾವುದರಂತಿರುತ್ತದೆ ?

ಉತ್ತರ : ಸಜ್ಜನರಿಗೆ ಗುರುವಚನ ಎನ್ನುವುದು ಕಿವಿಗೆ ಒಂದು ಆಭರಣದಂತಿರುತ್ತದೆ .


3  ದುಡ್ಡು ಯಾವುದರ ತವರು ?

ಉತ್ತರ : ದುಡ್ಡು ದುರಭಿಮಾನದ ತವರು ,


4. ದುಡ್ಡಿಗೆ ಯಾರನ್ನು ಕಂಡರೆ ಕಿಚ್ಚಾಗುತ್ತದೆ ?

ಉತ್ತರ : ದುಡ್ಡಿಗೆ ವಿದ್ಯಾವಂತನನ್ನು ಕಂಡರೆ ಕಿಚ್ಚಾಗುತ್ತದೆ .


5. ಯಾರಲ್ಲಿ ದೌರ್ಬಲ್ಯ ಮತ್ತು ಸಣ್ಣತನ ಹೆಚ್ಚಾಗಿರುತ್ತದೆ ?

ಉತ್ತರ : ದುಡ್ಡಿನಿಂದ ದೊಡ್ಡವರು ಎನಿಸಿಕೊಂಡವರಲ್ಲಿ ದೌರ್ಬಲ್ಯ , ಸಣ್ಣತನ ಹೆಚ್ಚಾಗಿರುತ್ತದೆ .

ಈ ಕೆಳಗಿನ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .


1. ಸಂಪತ್ತು ಮತ್ತು ಸುಧೆ (ಅಮೃತ) ಇವುಗಳ ಸ್ವಭಾವದಲ್ಲಿ ಕಂಡುಬರುವ ವ್ಯತ್ಯಾಸವನ್ನು ಕುರಿತು ಲೇಖಕರ ಅಭಿಪ್ರಾಯವೇನು?

ಉತ್ತರ: ‘ಅಮೃತ ಸತ್ತವರನ್ನು ಬದುಕಿಸಿದರೆ ಸಂಪತ್ತು ಸೇರಿದಲ್ಲಿ ಮನುಷ್ಯತ್ವವನ್ನ ಕೊಲ್ಲುತ್ತದೆ. ಅದಕ್ಕಾಗಿ ಜನ ಹೊಡೆದಾಡಿಕೊಂಡು ಸಾಯುತ್ತಾರೆ . ಆದರೆ ಅದು ಯಾರ ಕಣ್ಣಿಗೂ ಕಾಣಿಸದೆ ಮೋಜು ನೋಡುತ್ತಿರುತ್ತದೆ. ಹರಿಯ ಎದೆಯಲ್ಲಿ ಸಿರಿಯ ವಾಸ ಎನ್ನುತ್ತಾರೆ. ಆದರೆ ಮೂರ್ಖರ ಎದೆಯಲ್ಲಿ ಅದರ ವಾಸ ಎನ್ನುವುದು ನಮಗೆ ತಿಳಿದ ಮಾತು ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.


2. ದುಡ್ಡು ಎಂಬ ಕೆಟ್ಟ ಪಿಶಾಚಿಯ ಪ್ರಭಾವವೇನು ?

ಉತ್ತರ: ದುಡ್ಡು ಒಂದು ಕೆಟ್ಟ ಪಿಶಾಚಿ, ಅದು ಕೆಲವರನ್ನು ದೊಡ್ಡಸ್ತಿಕೆಯಲ್ಲಿ ಕುಣಿಸಿಬಿಡುತ್ತದೆ. ಕೆಲವು ಕುದ್ರ ಜೀವಿಗಳನ್ನಂತು ಈ ಪಿಶಾಚಿ ಹುಚ್ಚುಗೊಳಿಸಿಬಿಡುತ್ತದೆ. ವಿದ್ಯಾವಂತನನ್ನು ಕಂಡರೆ ಅದಕ್ಕೆ ಕಿಚ್ಚು, ಅವನ ಗೋಜಿಗೇ ಅದು ಬರುವುದಿಲ್ಲ. ಗುಣವಂತನನ್ನು ಕಂಡಾಗ ಕೊಳಕನನ್ನು ಕಂಡರೆ ಹೇಗೆ ಹಾಗೆ ದೂರ ಸರಿಯುತ್ತದೆ. ವೀರರನ್ನು ಕಂಡಾಗ ಅಮಂಗಲವನ್ನು ಕಂಡಂತೆ, ಸಜ್ಜನರನ್ನು ಕಂಡರೆ ಅಪಶಕುನವನ್ನು ಕಂಡಂತೆ ನಡೆದುಕೊಳ್ಳುತ್ತದೆ. ಕುಲೀನನನ್ನು ಕಂಡರೆ ಹಾವು ಸುಳಿದಂತೆ ಹಿಂಜರಿಯುತ್ತದೆ .

3. ಗುರೂಪದೇಶದ ಸ್ವರೂಪವನ್ನು ಲೇಖಕರು ಹೇಗೆ ಬಣ್ಣಿಸಿದ್ದಾರೆ ?

ಉತ್ತರ : ಗುರೂಪದೇಶ ಎಂದರೆ ” ಜನರ ಒಳ ಹೊರಗಣ ಕೊಳೆಗಳನ್ನು ತೊಳೆದು ಬಿಡುವ ನೀರಿಲ್ಲದ ಮೀಹ  ತಲೆ ನೆರೆಯದೆ , ಮೈ ಸುಕ್ಕುಗಟ್ಟದೆ ಮೂಡುವ ಮುಪ್ಪು; ಬೊಜ್ಜು ಬೆಳೆಯದೆ ಬರುವ ಗುರುತ್ವ: ಬಂಗಾರವಿಲ್ಲದೆ ಮಾಡಿದ ಬೆಲೆ ಬಾಳುವ ಕಿವಿಯೋಲೆ, ಪಂಜು ಇಲ್ಲದೆ ಬೆಳಗುವ ಬೆಳಕು: ಉದ್ವೇಗ ಬರಿಸದ ಜಾಗರಣೆ ” ಎಂದು ಲೇಖಕರು ಬಣ್ಣಿಸಿದ್ದಾರೆ .


4. ದುಡ್ಡು ಎಂಬ ಪಿಶಾಚಿ ಯಾರು ಯಾರನ್ನು ಕಂಡರೆ ಹೇಗೆಲ್ಲಾ ನಡೆದುಕೊಳ್ಳುತ್ತದೆ ?

ಉತ್ತರ: ದುಡ್ಡು ಒಂದು ಕೆಟ್ಟ ಪಿಶಾಚಿ, ವಿದ್ಯಾವಂತನನ್ನು ಕಂಡರೆ ಅದಕ್ಕೆ ಕಿಚ್ಚು, ಅವನ ಗೋಜಿಗೇ ಅದು ಬರುವುದಿಲ್ಲ. ಗುಣವಂತನನ್ನು ಕಂಡಾಗ ಕೊಳಕನನ್ನು ಕಂಡರೆ ಹೇಗೆ ಹಾಗೆ ದೂರ ಸರಿಯುತ್ತದೆ. ವೀರರನ್ನು ಕಂಡಾಗ ಅಮಂಗಲವನ್ನು ಕಂಡಂತೆ, ಸಜ್ಜನರನ್ನು ಕಂಡರೆ ಅಪಶಕುನವನ್ನು ಕಂಡಂತೆ ನಡೆದುಕೊಳ್ಳುತ್ತದೆ. ಕುಲೀನನನ್ನು ಕಂಡರೆ ಹಾವು ಸುಳಿದಂತೆ ಹಿಂಜರಿಯುತ್ತದೆ. ಶೂರರೆಂದರೆ ಮುಳ್ಳನಂತೆ, ದಾನಶೀಲರೆಂದರೆ ಕೆಟ್ಟ ಕನಸಿನಂತೆ ಅದಕ್ಕೆ ತ್ಯಾಜ್ಯ ವಿನಯಶೀಲನನ್ನು ಪಂಡಿತನನ್ನು ಕಂಡರೆ ಪಾತಕಿಯನ್ನು , ಮರುಳನನ್ನು ಕಂಡಂತೆ ನಡೆದುಕೊಳ್ಳುತ್ತದೆ .


ಸಂದರ್ಭಸಹಿತ ಸ್ವಾರಸ್ಯ ಬರೆಯಿರಿ :

1. “ ಸಂಪತ್ತಿಗೆ ಸ್ನೇಹದ ಬಂಧನವಿಲ್ಲ ; ಕುಲದ ಗುರುತಿಲ್ಲ ”

ಆಯ್ಕೆ: ಈ ವಾಕ್ಯವನ್ನು ಡಾ | ಬನ್ನಂಜೆ ಗೋವಿಂದಾಚಾರ್ಯ ಅವರ ‘ ಕಾದಂಬರಿ ‘ ಎಂಬ ಕೃತಿಯಿಂದ ಆರಿಸಲಾಗಿರುವ ‘ ಶುಕನಾಸನ ಉಪದೇಶ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .

ಸಂದರ್ಭ: ಸಂಪತ್ತಿನ ಗುಣಾವಗುಣಗಳನ್ನು ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ . “ ಸಂಪತ್ತಿಗೆ ಸ್ನೇಹದ ಬಂಧನವಿಲ್ಲ: ಕುಲದ ಗುರುತಿಲ್ಲ : ರೂಪದ ಒಲವಿಲ್ಲ . ಒಂದೇ ಮನೆತನದಲ್ಲಿ ಬಹುಕಾಲ ಉಳಿಯುವ ಅಭ್ಯಾಸವಂತು ಇಲ್ಲವೇ ಇಲ್ಲ . ಅದು ಸ್ವಭಾವವನ್ನು ಕಾಣದು: ಪಾಂಡಿತ್ಯವನ್ನು ಗಣಿಸದು: ಶಾಸ್ತ್ರವನ್ನು ಆಲಿಸದು; ಧರ್ಮವನ್ನು ನಂಬದು.” - ಎಂದು ಲೇಖಕರು ಈ ಸಂದರ್ಭದಲ್ಲಿ ಅದರ ಗುಣಾವಗುಣಗಳನ್ನು ವರ್ಣಿಸಿದ್ದಾರೆ .

ಸ್ವಾರಸ್ಯ: ಸಂಪತ್ತು ಯಾವುದೇ ಗುಣವನ್ನು ಪರಿಗಣಿಸುವುದಿಲ್ಲ . ಅಲ್ಲದೆ ಅದು ಒಂದೆಡೆ ನಿಲ್ಲುವುದಿಲ್ಲ ಚಂಚಲವಾದುದು ಎಂಬ ಸತ್ಯಸಂಗತಿಯನ್ನು ಲೇಖಕರು ಈ ಮಾತಿನಲ್ಲಿ ಸ್ವಾರಸ್ಯಕರವಾಗಿ ತಿಳಿಸಿದ್ದಾರೆ

2. "ದುಡ್ಡು ಒಂದು ಕೆಟ್ಟ ಪಿಶಾಚಿ ”

ಆಯ್ಕೆ: ಈ ವಾಕ್ಯವನ್ನು ಡಾ. ಬನ್ನಂಜೆ ಗೋವಿಂದಾಚಾರ್ಯ ಅವರ ‘ಕಾದಂಬರಿ' ಎಂಬ ಕೃತಿಯಿಂದ ಆರಿಸಲಾಗಿರುವ ‘ಶುಕನಾಸನ ಉಪದೇಶ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .

ಸಂದರ್ಭ: ದುಡ್ಡು ಯಾರು ಯಾರನ್ನು ಯಾವ ರೀತಿ ನಡೆಸಿಕೊಳ್ಳುತ್ತದೆ ಎಂದು ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ. ದುಡ್ಡು ಒಂದು ಕೆಟ್ಟ ಪಿಶಾಚಿ, ಅದು ಕೆಲವರನ್ನು ದೊಡ್ಡಸ್ತಿಕೆಯಲ್ಲಿ ಕುಣಿಸಿಬಿಡುತ್ತದೆ. ಕೆಲವು ಕುದ್ರ ಜೀವಿಗಳನ್ನಂತು ಈ ಪಿಶಾಚಿ ಹುಚ್ಚುಗೊಳಿಸಿಬಿಡುತ್ತದೆ . ವಿದ್ಯಾವಂತನನ್ನು ಕಂಡರೆ ಅದಕ್ಕೆ ಕಿಚ್ಚು. ಅವನ ಗೋಜಿಗೇ ಅದು ಬರುವುದಿಲ್ಲ. ಗುಣವಂತನನ್ನು ಕಂಡಾಗ ಕೊಳಕನನ್ನು ಕಂಡರೆ ಹೇಗೆ ಹಾಗೆ ದೂರ ಸರಿಯುತ್ತದೆ. ವೀರರನ್ನು ಕಂಡಾಗ ಅಮಂಗಲವನ್ನು ಕಂಡಂತೆ, ಸಜ್ಜನರನ್ನು ಕಂಡರೆ ಅಪಶಕುನವನ್ನು ಕಂಡಂತೆ ನಡೆದುಕೊಳ್ಳುತ್ತದೆ. ಎಂದು ಹೇಳಿದ್ದಾರೆ .

ಸ್ವಾರಸ್ಯ: ದುಡ್ಡು ಎಂಬ ಪಿಶಾಚಿ ಮುಂದೆ ಯಾರೂ ಮುಖ್ಯವಲ್ಲ . ಅದು ಹೆಚ್ಚಾದರೆ ಹುಚ್ಚರನ್ನಾಗಿ ಮಾಡಿಬಿಡುತ್ತದೆ . ವಿದ್ಯಾವಂತ, ಗುಣವಂತ, ವೀರ ಈ ಯಾರ ಹತ್ತಿರಕ್ಕೂ ಸುಳಿಯುವುದಿಲ್ಲ  ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area