ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

18-11-2021 Daily Top-10 General Knowledge Question Answers in Kannada for All Competitive Exams

18-11-2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಗುರುತ್ವಾಕರ್ಷಕ ಅಲೆಗಳ ಅಸ್ತಿತ್ವವನ್ನು ದೃಢಪಡಿಸಿದ ಮಹಾತ್ವಾಕಾಂಕ್ಷಿ ಲಿಗೊ (Laser
Interferometer Gravitational Wave
Observatory-LIGO) ಯೋಜನೆಯ ಮುಂದಿನ ಪ್ರಯೋಗಗಳನ್ನು ನಡೆಸಲು ಭಾರತದ ಔಂಧ್ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ. ಅದು ಯಾವ
ರಾಜ್ಯದಲ್ಲಿದೆ?
1) ಗುಜರಾತ್
2) ಮಹಾರಾಷ್ಟ್ರ
3) ಮಧ್ಯಪ್ರದೇಶ 
4) ಒಡಿಶಾ


ಸರಿಯಾದ ಉತ್ತರ: 2) ಮಹಾರಾಷ್ಟ್ರ



2. ಸಿಂಧೂ ನಾಗರಿಕತೆಯಲ್ಲಿ ವಿಶ್ವದ ಇತರೇ ನಾಗರಿಕತೆಗಳಿಗಿಂತ ವೈಶಿಷ್ಟ್ಯಪೂರ್ಣವಾಗಿ ಕಂಡುಬರುವ ವಿಷಯ ಯಾವುದು?
1) ಕೃಷಿ ನಿರ್ವಹಣೆ
2) ನಗರ ನಿರ್ಮಾಣ ಯೋಜನೆ
3) ಲೋಹದ ಕೆಲಸ
4) ತೂಕ ಮತ್ತು ಅಳತೆ


ಸರಿಯಾದ ಉತ್ತರ: 2) ನಗರ ನಿರ್ಮಾಣ ಯೋಜನೆ  



03. ಮಾಂಟೆಗೋ- ಚೆಲ್ಸ್ಮ್‌ಫರ್ಡ್ ಸುಧಾರಣೆಗಳು
ಯಾವುದಕ್ಕೆ ಸಂಬಂಧಿಸಿವೆ?
1) ಶೈಕ್ಷಣಿಕ ಸುಧಾರಣೆಗಳು
2) ಸಾಮಾಜಿಕ ಸುಧಾರಣೆಗಳು
3) ಪೊಲೀಸ್ ಆಡಳಿತದಲ್ಲಿ ಸುಧಾರಣೆಗಳು
4) ಸಾಂವಿಧಾನಿಕ ಸುಧಾರಣೆಗಳು


ಸರಿಯಾದ ಉತ್ತರ: 4) ಸಾಂವಿಧಾನಿಕ ಸುಧಾರಣೆಗಳು





4. ಭಾರತದ ಪ್ರಾಚೀನ ಇತಿಹಾಸದಲ್ಲಿ ಪಾಣಿನಿ ಮತ್ತು ಪತಂಜಲಿಯರು ಪ್ರಸಿದ್ಧರು. ಅವರು ಪ್ರವರ್ಧಗೊಂಡಿದ್ದು ಯಾವ ರಾಜಮನೆತನದಡಿಯಲ್ಲಿ?
1) ಪುಷ್ಯಭಕ್ತಿ
2) ಗುಪ್ತರು
3) ಶಾತವಾಹನರು 
4) ಶುಂಗರು


ಸರಿಯಾದ ಉತ್ತರ: 4) ಶುಂಗರು





5. ಕುಶಾನರ ನಂತರದ ಆಡಳಿತಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ ಹೊಂದಾಣಿಕೆಯಾಗಿಲ್ಲ?
1) ಏಕ ಸಾಮ್ರಾಜ್ಯದ ಪರಿಕಲ್ಪನೆ ಜನಪ್ರಿಯವಾಗಿತ್ತು.
2) ಅವತಾರದ ಪರಿಕಲ್ಪನೆ ಜನಪ್ರಿಯವಾಗಿತ್ತು.
3) ವರ್ಣ ವ್ಯವಸ್ಥೆ ಜನಪ್ರಿಯತೆ ಕಳೆದುಕೊಂಡಿತು.
4) ವೈದಿಕ ಯಜ್ಞಗಳನ್ನು ಅರಸರು ಮಾಡುವುದು ಈ ಕಾಲದಲ್ಲಿ ಅಧಿಕವಾಗಿತ್ತು. 


ಸರಿಯಾದ ಉತ್ತರ: 3) ವರ್ಣ ವ್ಯವಸ್ಥೆ ಜನಪ್ರಿಯತೆ ಕಳೆದುಕೊಂಡಿತು   




6. ಭಾರತ ಮತ್ತು ರೋಮನ್ ಸಾಮ್ರಾಜ್ಯದ ನಡುವೆ ನಡೆಯುತ್ತಿದ್ದ ಸಾಗರ ವ್ಯಾಪಾರವು ಕ್ರಿಶ ಮೊದಲ ಶತಮಾನದಲ್ಲಿ ನಡೆದ ಈ ಕೆಳಗಿನ ಯಾವ ಶೋಧನೆಯಿಂದ ಪ್ರಚೋದನೆ ಪಡೆಯಿತು?
1) ರೋಮನ್ ಸಾಮ್ರಾಜ್ಯದಲ್ಲಿ ದೊಡ್ಡ ದೊಡ್ಡ ಗಣಿಗಳನ್ನು ಪತ್ತೆಹಚ್ಚಲಾಯಿತು.
2) ಹಿಂದೂ ಮಹಾಸಾಗರದಲ್ಲಿ ನಿಯತವಾಗಿ ಬೀಸುತ್ತಿದ್ದ ಮಾನ್ಸೂನ್ ಮಾರುತ ಪತ್ತೆ ಹಚ್ಚಲಾಯಿತು.
3) ಭಾರತ ಮತ್ತು ರೋಮ್ ನಡುವೆ ನೇರ ಕಡಲ ಮಾರ್ಗವನ್ನು ಪತ್ತೆ ಹಚ್ಚಲಾಯಿತು
4) ನೂತನ ನಾವಿಕತಂತ್ರ ಪತ್ತೆ ಹಚ್ಚಲಾಯಿತು

ಸರಿಯಾದ ಉತ್ತರ: 2) ಹಿಂದೂ ಮಹಾಸಾಗರದಲ್ಲಿ ನಿಯತವಾಗಿ ಬೀಸುತ್ತಿದ್ದ ಮಾನ್ಸೂನ್ ಮಾರುತ ಪತ್ತೆ ಹಚ್ಚಲಾಯಿತು 




7. ಬೆಂಗಳೂರಿನಲ್ಲಿ ಮೆಟ್ರೋ ರೈಲು ಜಾಲವನ್ನು ವಿಸ್ತರಿಸಲು ಭಾರತ ಮತ್ತು ಯಾವ ಬ್ಯಾಂಕ್ 500 ಮಿಲಿಯನ್ ಸಾಲ ಒಪ್ಪಂದಕ್ಕೆ ಸಹಿ ಹಾಕಿವೆ?
1) ವಿಶ್ವ ಬ್ಯಾಂಕ್
2) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
3) ಏಷಿಯನ್ ಅಭಿವೃದ್ಧಿ ಬ್ಯಾಂಕ್
4) ಬ್ಯಾಂಕ್ ಆಫ್ ಸಿಂಗಾಪುರ


ಸರಿಯಾದ ಉತ್ತರ: 3) ಏಷಿಯನ್ ಅಭಿವೃದ್ಧಿ ಬ್ಯಾಂಕ್




8. ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರವನ್ನು ಸ್ಥಾಪಿಸಲು ಕೇಂದ್ರ ಸರ್ಕಾರವು ಯಾವ ದಕ್ಷಿಣ ರಾಜ್ಯದಲ್ಲಿ ಅಧಿಸೂಚನೆಯನ್ನು ಹೊರಡಿಸಿದೆ?
1) ಕೇರಳ
2) ಆಂಧ್ರಪ್ರದೇಶ
3) ತಮಿಳುನಾಡು 
4) ಕರ್ನಾಟಕ

ಸರಿಯಾದ ಉತ್ತರ: 4) ಕರ್ನಾಟಕ 




9. 2021ರ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು “ಶಿಕ್ಷಕ ಪರ್ವ 2021” ಅನ್ನು ಉದ್ಘಾಟಿಸಿದರು, ಈ ಕಾರ್ಯಕ್ರಮವನ್ನು ಯಾವ ಸಚಿವಾಲಯ ಆಯೋಜಿಸಿದೆ?
1) ಕೌಶಲ ಮತ್ತು ಅಭಿವೃದ್ಧಿ ಸಚಿವಾಲಯ
2) ಶಿಕ್ಷಣ ಸಚಿವಾಲಯ
3) ಸಾಂಸ್ಕೃತಿಕ ಸಚಿವಾಲಯ
4) ಕಾನೂನು ಮತ್ತು ನ್ಯಾಯ ಸಚಿವಾಲಯ


ಸರಿಯಾದ ಉತ್ತರ: 2) ಶಿಕ್ಷಣ ಸಚಿವಾಲಯ




10.  ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (NPS) ಹೂಡಿಕೆ ಮಾಡಲು ಪ್ರಸ್ತುತ ಅರ್ಹತೆಯ ವಯಸ್ಸು ಎಷ್ಟು?
1) 18-60 
2) 18-65
3) 18-75 
4) 18-70


ಸರಿಯಾದ ಉತ್ತರ: 4) 18-70  


 ಇವುಗಳನ್ನೂ ಓದಿ 











Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area