ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

19-09-2021 SDA General Knowledge Question Paper and Key Answers

19-09-2021 SDA General Knowledge Question Paper and Key Answers

19-09-2021 SDA General Knowledge Question Paper and Key Answers

ಹಾಯ್, ಎಲ್ಲರಿಗೂ ನಮಸ್ಕಾರ..!!
★ 19-09-2021 SDA KEY ANSWERS: GK PAPER: ★

ಇಂದು (19-09-2021 ರಂದು) ನಡೆದ ದ್ವಿತೀಯ ದರ್ಜೆ ಸಹಾಯಕರು ( SDA ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಸಾಮಾನ್ಯ ಜ್ಞಾನ (GK) ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ಧಪಡಿಸಿದ ಸಂಭಾವ್ಯ ಸರಿ ಉತ್ತರಗಳು.!!

ವಿಶೇಷ ಸೂಚನೆ:
ಇವು ಅಂತಿಮ ಕೀ ಉತ್ತರಗಳಲ್ಲ, ಕೇವಲ ಸಂಭಾವ್ಯ.! ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ.!!

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 History Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


Edutube Kannada ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ Edutube Kannada ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ

1. “ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು” ಎನ್ನುವ ಸೂಕ್ತಿಗೆ ಬ್ರಿಟಿಷ್ ಕಾಲದ ಕೆಳಗಿನ ಯಾವ ಪದ್ಧತಿಯು ಕಾರಣವಾಗಿತ್ತು?
(1) ಜಮೀನ್ದಾರಿ ಪದ್ಧತಿ
(2) ಮಹಲ್ವಾರಿ ಪದ್ಧತಿ
(3) ರೈತವಾರಿ ಪದ್ಧತಿ
(4) ಇವುಗಳಲ್ಲಿ ಯಾವುದೂ ಅಲ್ಲ


ಸರಿಯಾದ ಉತ್ತರ: (1) ಜಮೀನ್ದಾರಿ ಪದ್ಧತಿ 

2. ಮೌರ್ಯರ ಕಾಲದಲ್ಲಿ ಈ ಕೆಳಗಿನ ಯಾರು ಸುದರ್ಶನ ಸರೋವರವನ್ನು ಕಟ್ಟಿದರು?
(1) ಚಂದ್ರಗುಪ್ತ ಮೌರ್ಯ
(2) ತುಶಾಸ್ಪ
(3) ಅಶೋಕ
(4) ಪುಷ್ಯಗುಪ್ತ 


ಸರಿಯಾದ ಉತ್ತರ: (4) ಪುಷ್ಯಗುಪ್ತ 

3. ಈ ಕೆಳಗಿನ ಯಾವ ಭಾಷೆಯು ಕದಂಬರ ಕಾಲದ “ಕೋರ್ಟ್ ಲ್ಯಾಂಗ್ವೇಜ್” ಆಗಿತ್ತು?
(1) ಕನ್ನಡ ಮತ್ತು ಸಂಸ್ಕೃತ
(2) ಕರೋಷ್ಠಿ ಮತ್ತು ಸಂಸ್ಕೃತ
(3) ಪ್ರಾಕೃತ ಮತ್ತು ಸಂಸ್ಕೃತ
(4) ಅರ್ಮನಿಕ್ ಮತ್ತು ಗ್ರೀಕ್


ಸರಿಯಾದ ಉತ್ತರ : (1) ಕನ್ನಡ ಮತ್ತು ಸಂಸ್ಕೃತ  

4. ಈ ಕೆಳಕಂಡ ಪಟ್ಟಿ-I ರ ಜೊತೆಗೆ ಪಟ್ಟಿ-II ರನ್ನು ಸರಿಯಾದ ಹೊಂದಿಸಿ, ಕೆಳಗೆ ನೀಡಿರುವ ಆಯ್ಕೆಯನ್ನು ಪರಿಗಣಿಸಿ.
                     ಪಟ್ಟಿ-I                                                                           ಪಟ್ಟಿ-II
ಕರ್ನಾಟಕ ಪ್ರದೇಶ  ಕಾಂಗ್ರೆಸ್ ಅಧಿವೇಶನಗಳು                                        ಅಧ್ಯಕ್ಷರು
(A) 1920ರ ಧಾರವಾಡದ ಅಧಿವೇಶನ                                    (i) ಸಿ.ರಾಜಗೋಪಾಲಚಾರಿ
(B) 1922ರ ಮಂಗಳೂರು ಅಧಿವೇಶನ                                   (ii) ಶ್ರೀನಿವಾಸ್ ಅಯ್ಯಂಗಾರ್
(C) 1923ರ ಬಿಜಾಪುರ ಅಧಿವೇಶನ                                      (iii) ಸರೋಜಿನಿ ನಾಯ್ಡು
(D) 1926ರ ಬಳ್ಳಾರಿ ಅಧಿವೇಶನ                                         (iv) ಗಂಗಾಧರರಾವ್ ದೇಶಪಾಂಡೆ


     (A)   (B)   (C)   (D)
(1) (i)   (ii)    (iii)   (iv)
(2) (iv) (iii)   (i)     (ii) 
(3) (iv) (iii)   (ii)    (i)
(4) (iii) (iv)   (ii)    (i)


ಸರಿಯಾದ ಉತ್ತರ : (2) (iv) (iii) (i)(ii) 

5. ಕೆಳಕಂಡ ಪ್ರಮುಖ ಸಂಘಟನೆಗಳು/ ಸಂಸ್ಥೆಗಳನ್ನು ಭಾರತೀಯ ಹಿಂದು ನಾಯಕರು/ ಸಮಾಜ ಸುಧಾರಕರು ಸ್ವಾತಂತ್ರ್ಯ ಚಳುವಳಿ ಸಮಯದಲ್ಲಿ ಸ್ಥಾಪಿಸಿದರು.
(A) ಗೋಪಾಲ ಗಣೇಶ.  - ದೇವ ಸಮಾಜ ಅಗರ್‌ಕರ್
(B) ಶಿವನಾರಾಯಣ ಅಗ್ನಿಹೋತ್ರಿ - ಡೆಕ್ಕನ್ ಎಜ್ಯುಕೇಶನ್ ಸೊಸೈಟಿ
(C) ಗೋಪಾಲ ಕೃಷ್ಣ ಗೋಖಲೆ - ದಿ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ
(D) ಎನ್‌.ಎಂ. ಜೋಶಿ - ದಿ ಸೋಷಿಯಲ್ ಸರ್ವಿಸ್ ಲೀಗ್
(1) (A) ಮತ್ತು (B)
(2) (B) (C) ಮತ್ತು (D)
(3) (C) ಮತ್ತು (D)
(4) (C) ಮಾತ್ರ


ಸರಿಯಾದ ಉತ್ತರ : (3) (C) ಮತ್ತು (D)

6. ಕೆಳಗಿನ ಪಟ್ಟಿ-I ಮತ್ತು ಪಟ್ಟಿ-IIನ್ನು ಹೊಂದಿಸಿ. ಸರಿ ಹೊಂದಾಣಿಕೆಯನ್ನು ಕೊಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ.
                  ಪಟ್ಟಿ-I           ಪಟ್ಟಿ-II
          ಬೌದ್ಧ ಮಹಾಸಭೆಗಳು                ಅರಸರು                
(A) Iನೇ ಬೌದ್ಧ ಮಹಾಸಭೆ -       (i) ಕಾಲಾಶೋಕ
(B) IIನೇ ಬೌದ್ಧ ಮಹಾಸಭೆ -    (ii) ಅಶೋಕ
(C) IIIನೇ ಬೌದ್ಧ ಮಹಾಸಭೆ - (iii) ಕನಿಷ್ಠ
(D) IVನೇ ಬೌದ್ಧ ಮಹಾಸಭೆ -     (iv) ಅಜಾತ ಶತ್ರು
ಸಂಕೇತಗಳು :
     (A) (B)   (C) (D)
(1) (ii) (i)   (iv)  (iii)
(2) (iv) (iii) (ii)   (i)
(3) (i)  (ii)  (iii)  (iv)
(4) (iv) (i)    (ii) (iii) 


ಸರಿಯಾದ ಉತ್ತರ: (4) (iv) (i)    (ii) (iii) 

7. ಶಿವಾಜಿಯ ಆಧ್ಯಾತ್ಮಿಕ ಗುರು ಯಾರು?
(1) ತುಳಸಿದಾಸ
(2) ದಾದಾಜಿ ಕೊಂಡದೇವ
(3) ರಾಮದಾಸ
(4) ತುಕಾರಾಮ


ಸರಿಯಾದ ಉತ್ತರ: (2) ದಾದಾಜಿ ಕೊಂಡದೇವ 

 8. ಬಕ್ಸಾರ್ ಕದನವು ಯಾವ ಒಪ್ಪಂದದೊಂದಿಗೆ ಮುಕ್ತಾಯವಾಯಿತು?
(1) ಮದ್ರಾಸ್ ಒಪ್ಪಂದ
(2) ಅಲಿ ನಗರ ಒಪ್ಪಂದ
(3) ಪಾಂಡಿಚೇರಿ ಒಪ್ಪಂದ
(4) ಅಲಹಾಬಾದ್ ಒಪ್ಪಂದ


ಸರಿಯಾದ ಉತ್ತರ : (4) ಅಲಹಾಬಾದ್ ಒಪ್ಪಂದ 

9. ಪ್ರಥಮ ಬಾರಿಗೆ ಭಾರತದಲ್ಲಿ “ಇಂಡಿಯನ್ ಸಿವಿಲ್ ಸರ್ವೀಸ್” (ಭಾರತ ನಾಗರೀಕ ಸೇವೆ) ಜಾರಿಗೆ ತಂದ ಗವರ್ನರ್ ಜನರಲ್ ಯಾರು?
(1) ವಾರನ್ ಹೇಸ್ಟಿಂಗ್ಸ್
(2) ಲಾರ್ಡ್ ಕಾರ್ನ್‌ವಾಲೀಸ್
(3) ಲಾರ್ಡ್ ವಿಲಿಯಂ ಬೆಂಟಿಂಕ್
(4) ಲಾರ್ಡ್ ವೆಲ್ಲೆಸ್ಲಿ


ಸರಿಯಾದ ಉತ್ತರ : (2) ಲಾರ್ಡ್ ಕಾರ್ನ್‌ವಾಲೀಸ್  

10. “ಪ್ರಭುದ್ಧ ಭಾರತ” ಎಂಬ ಆಂಗ್ಲ ಪತ್ರಿಕೆಯನ್ನು ಈ ಕೆಳಗಿನವರಲ್ಲಿ ಯಾರು ಪ್ರಕಟಿಸಿದರು?
(1) ಸ್ವಾಮಿ ದಯಾನಂದ ಸರಸ್ವತಿ
(2) ರಾಜಾರಾಮ ಮೋಹನ್‌ರಾಯ್
(3) ಆ್ಯನಿಬೆಸೆಂಟ್
(4) ಸ್ವಾಮಿ ವಿವೇಕಾನಂದ 


ಸರಿಯಾದ ಉತ್ತರ : (4) ಸ್ವಾಮಿ ವಿವೇಕಾನಂದ  


11. ಡಾ. ಬಿ.ಆರ್. ಅಂಬೇಡ್ಕರ್‌ವರ ನೇತೃತ್ವದಲ್ಲಿ “ಮಹಾಡ್ ಸತ್ಯಾಗ್ರಹ" ನಡೆದ ವರ್ಷ
(1) 1927
(2) 1929
(3) 1930
(4) 1932


ಸರಿಯಾದ ಉತ್ತರ : (1) 1927 

12. “ಹಿಂದ್ ಸ್ವರಾಜ್ಯ” ಪುಸ್ತಕದ ಕರ್ತೃ ಯಾರು?
(1) ಜವಾಹರಲಾಲ್ ನೆಹರು
(2) ಮೋತಿಲಾಲ್ ನೆಹರು
(3) ಎಂ.ಕೆ. ಗಾಂಧಿ
(4) ಬಾಲಗಂಗಾಧರ ತಿಲಕ್


ಸರಿಯಾದ ಉತ್ತರ: (3) ಎಂ.ಕೆ. ಗಾಂಧಿ  

13. ಯಾರು ಬಸವೇಶ್ವರರನ್ನು 'ಕರ್ನಾಟಕದ ಮಾರ್ಟಿನ್ ಲೂಥರ್' ಎಂದು ಹೊಗಳಿದ್ದಾರೆ?
(1) ಸರ್ ಅರ್ಥರ್ ಮೈಲರ್
(2) ಬಿಜ್ಜಳ
(3) ಜಾನ್ ಫೀಟರ್‌
(4)' ಜಾತವೇದ ಮುನಿ


ಸರಿಯಾದ ಉತ್ತರ : (1) ಸರ್ ಅರ್ಥರ್ ಮೈಲರ್  

14. 'ತಾಳಗುಂದ ಶಾಸನದ ಕರ್ತೃ ಯಾರು?
(1) ರವಿಕೀರ್ತಿ
(2) ಕುಬ್ಬಕವಿ
(3) ಹರಿಸೇನ
(4) ಮೇಲಿನ ಯಾವುದೂ ಅಲ್ಲ


ಸರಿಯಾದ ಉತ್ತರ : (2) ಕುಬ್ಬಕವಿ  

15. ಕೊನೆಯ ಚಾಲುಕ್ಯ ಆಡಳಿತಗಾರ ಯಾರು?
(1) ಎರಡನೇ ಕೀರ್ತಿವರ್ಮ
(2) ದಂತಿದುರ್ಗ
(3) ಎರಡನೇ ಇಂದ್ರ
(4) ಒಂದನೇ ಕರ್ಕ


ಸರಿಯಾದ ಉತ್ತರ : (1) ಎರಡನೇ ಕೀರ್ತಿವರ್ಮ 

16, ಬಿಜಾಪುರದ ' ಗೋಲ್ ಗುಂಬಜ್ ಅನ್ನು ಕಟ್ಟಿಸಿದ
ವರ್ಷ ಯಾವುದು?
(1) 1620-58
(2) 1627-57
(3) 1561-1568
(4) ಮೇಲಿನ ಯಾವುದೂ ಅಲ್ಲ


ಸರಿಯಾದ ಉತ್ತರ : (2) 1627-57

17. ಈ ಕೆಳಗಿನ ಯಾವ ಯುಗವನ್ನು “ಜೈನ ಸಾಹಿತ್ಯದ ಸುವರ್ಣಯುಗ” ಎಂದು ಕರೆಯಲಾಗಿದೆ?
(1) ರಾಷ್ಟ್ರಕೂಟರ ಯುಗ
(2) ಹೊಯ್ಸಳರ ಯುಗ
(3) ಚಾಲುಕ್ಯರ ಯುಗ
(4) ಶಾತವಾಹನರ ಯುಗ


ಸರಿಯಾದ ಉತ್ತರ: (1) ರಾಷ್ಟ್ರಕೂಟರ ಯುಗ 

 18. ಈ ಕೆಳಗಿನ ಯಾವ ಕಾಯಿದೆಯ ಪ್ರಕಾರ ಸಮಾಜವಾದ ಎಂಬ ಪದವನ್ನು ಭಾರತದ ಸಂವಿಧಾನ ಪ್ರಸ್ತಾವನೆಯಲ್ಲಿ ಸೇರಿಸಲಾಯಿತು?
(1) 41ನೇಯ ತಿದ್ದುಪಡಿ ಕಾಯ್ದೆ
(2) 42ನೇಯ ತಿದ್ದುಪಡಿ ಕಾಯ್ದೆ
(3) 43ನೇಯ ತಿದ್ದುಪಡಿ ಕಾಯ್ದೆ
(4) 44ನೇಯ ತಿದ್ದುಪಡಿ ಕಾಯ್ದೆ


ಸರಿಯಾದ ಉತ್ತರ : (2) 42ನೇಯ ತಿದ್ದುಪಡಿ ಕಾಯ್ದೆ  

19. ಏಷ್ಯನ್ ಅಮೇರಿಕಾ ಮೂಲದ ಯಾವ ಮಹಿಳೆ ಅಮೇರಿಕಾದ ಪ್ರಥಮ ಮಹಿಳಾ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ?
(1) ಜಾರ್ಜ್ ಕ್ಲಿಂಟನ್
(2) ಜೇರಿ ಬ್ರೌನ್
(3) ಕಮಲಾ ಹ್ಯಾರಿಸ್
(4) ಮೇಲಿನ ಯಾವುದೂ ಅಲ್ಲ


ಸರಿಯಾದ ಉತ್ತರ : (3) ಕಮಲಾ ಹ್ಯಾರಿಸ್ 

20. 2021ರ ಕರ್ನಾಟಕದ ಗ್ರಾಮ - ಪಂಚಾಯಿತಿ ಚುನಾವಣೆಯಲ್ಲಿ EVMನ್ನು ಬಳಸಲು ಈ ಕೆಳಗಿನ ಯಾವ ಜಿಲ್ಲೆಯನ್ನು ಪ್ರಾಯೋಗಿಕ ಯೋಜನೆಯಾಗಿ ಆಯ್ಕೆ ಮಾಡಲಾಗಿತ್ತು?
(1) ಕೊಪ್ಪಳ
(2) ಬೀದರ್
(3) ಬಿಜಾಪುರ
(4) ಗುಲ್ಬರ್ಗಾ


ಸರಿಯಾದ ಉತ್ತರ : (2) ಬೀದರ್ 


21. ಕರ್ನಾಟಕದ ವಿಜಯನಗರ ಹೊಸ ಜಿಲ್ಲೆಯಲ್ಲಿ ಎಷ್ಟು ತಾಲೂಕುಗಳನ್ನು ಸೇರಿಸಲಾಗಿದೆ?
(1) 05
(2) 06 
(3) 04
(4) 08


ಸರಿಯಾದ ಉತ್ತರ : (2) 06  

22. ಕೆಳಗಿನ ಯಾವ ರಾಜ್ಯಗಳ ಮಧ್ಯೆ ಪ್ರಥಮ ಕಿಸಾನ್ ರೈಲ್ವೇಯನ್ನು ಪ್ರಾರಂಭಿಸಲಾಯಿತು?
(1) ಕರ್ನಾಟಕ ಮತ್ತು ಮಹಾರಾಷ್ಟ್ರ
(2) ಮಹಾರಾಷ್ಟ್ರ ಮತ್ತು ಬಿಹಾರ್
(3) ಮಹಾರಾಷ್ಟ್ರ ಮತ್ತು ತಮಿಳುನಾಡು
(4) ಕೇರಳ ಮತ್ತು ತಮಿಳುನಾಡು


ಸರಿಯಾದ ಉತ್ತರ: (2) ಮಹಾರಾಷ್ಟ್ರ ಮತ್ತು ಬಿಹಾರ್  

23. ಭಾರತದ ಯಾವ ರಾಜ್ಯ ಮೂರು ರಾಜಧಾನಿಗಳನ್ನು ಸ್ಥಾಪಿಸಲು ನಿರ್ಧರಿಸಿದೆ?
(1) ತೆಲಂಗಾಣ
(2) ಆಂಧ್ರ ಪ್ರದೇಶ
(3) ರಾಜಸ್ಥಾನ
(4) ಕರ್ನಾಟಕ


ಸರಿಯಾದ ಉತ್ತರ : (2) ಆಂಧ್ರ ಪ್ರದೇಶ 

24. ಕೆಳಗಿನ ಯಾವ ರಾಜ್ಯವು ತನ್ನ ಶಾಸನ ಸಭೆಗೆ ಹೊಸ ಲಾಂಛನವನ್ನು (Logo) ಅಳವಡಿಸಿಕೊಂಡಿದೆ ಮತ್ತು ಅದು ಫಾಕ್ಸ್‌ಟೇಲ್ ಆರ್ಕಿಡ್ (Foxtail Orchid) ಒಳಗೊಂಡಿದೆ?
(1) ಅರುಣಾಚಲ ಪ್ರದೇಶ
(2) ಮಿಜೋರಾಮ್
(3) ಅಸ್ಸಾಂ
(4) ಹಿಮಾಚಲ ಪ್ರದೇಶ


ಸರಿಯಾದ ಉತ್ತರ : (1) ಅರುಣಾಚಲ ಪ್ರದೇಶ  

25. ಹೊಂದಿಸಿ ಬರೆಯಿರಿ.
(A) ಆದಿಚುಂಚನಗಿರಿ     (i) ಪಕ್ಷಿಧಾಮ
(B) ಮಂಡಗದ್ದೆ             (ii) ರಾಷ್ಟ್ರೀಯ ಉದ್ಯಾನವನ
(C) ನಾಗರಹೊಳೆ        (iii) ಎಲೆ ಉದುರುವ ಕಾಡುಗಳು
(D) ಶ್ರೀಗಂಧದ ಮರ    (iv) ನವಿಲು ಧಾಮ
(E) ಪಶ್ಚಿಮ ಘಟ್ಟಗಳು    (v) ನಿತ್ಯಹರಿದ್ವರ್ಣ ಕಾಡುಗಳು

      (A)   (B)   (C)   (D)     (E)
(1)  (i)   (ii)    (iii)    (iv)   (v)
(2) (iv)  (i)     (ii)    (iii)    (v) ++
(3) (iv)  (i)     (v)    (iii)    (ii)
(4) (iv)  (v)    (ii)     (i)    (iii)


ಸರಿಯಾದ ಉತ್ತರ : (2) (iv) (i) (ii) (iii) (v) 

26. ಕರ್ನಾಟಕದ ಈ ಕೆಳಗಿನ ಸ್ಥಳಗಳನ್ನು ಪರಿಗಣಿಸಿ.
(A) ಮೊಳಕಾಲ್ಮೂರು
(B) ಗಂಗಾವತಿ
(C) ಕಾರವಾರ
(D) ಮೈಸೂರು

ಮೇಲಿನ ಸ್ಥಳಗಳಲ್ಲಿ ಯಾವುದು ಸಾಂಪ್ರದಾಯಿಕ ಸೀರೆಗಳನ್ನು ಉತ್ಪಾದಿಸುವಲ್ಲಿ ಪ್ರಸಿದ್ಧಿಯಾಗಿವೆ?
(1) (A) ಮಾತ್ರ
(2) (B), (C) ಮತ್ತು (D)
(3) (A) ಮತ್ತು (D)
(4) (D), (A) ಮತ್ತು (C)


ಸರಿಯಾದ ಉತ್ತರ : (3) (A) ಮತ್ತು (D)

27. ಪಿಪಿಪಿಪಿ ಎಂದರೆ
(1) ಪಬ್ಲಿಕ್ ಪ್ರೈವೇಟ್ ಪಾರ್ಟಿ ಪಾರ್ಟ್‌ನರ್‌ಶಿಪ್
(2) ಪಬ್ಲಿಕ್ ಪೈವೇಟ್‌ ಪಾರ್ಟ್‌ನರ್‌ಶಿಪ್ ಪುಷ್
(3) ಪಬ್ಲಿಕ್ ಪೀಪಲ್ ಪಾರ್ಟ್‌ನರ್‌ಶಿಪ್ ಪೊಲಿಟಿಕಲ್
(4) ಪಬ್ಲಿಕ್ ಪ್ರೈವೇಟ್ ಪೀಪಲ್ ಪಾರ್ಟ್‌ನರ್‌ಶಿಪ್ 


ಸರಿಯಾದ ಉತ್ತರ: (4) ಪಬ್ಲಿಕ್ ಪ್ರೈವೇಟ್ ಪೀಪಲ್ ಪಾರ್ಟ್‌ನರ್‌ಶಿಪ್ 

28. ಮಾನವ ಅಭಿವೃದ್ಧಿ ಸೂಚ್ಯಂಕವು ಆಯಾಮಗಳ ಒಟ್ಟು ಅಭಿವೃದ್ಧಿಯ ಪ್ರಗತಿಯ ಅಳತೆಯಾಗಿದೆ.
(1) ಮೂರು
(2) ನಾಲ್ಕು
(3) ಎರಡು
(4) ಐದು


ಸರಿಯಾದ ಉತ್ತರ : (1) ಮೂರು

29. ಎಮ್ ಯು ಡಿಆರ್‌ಎ ಎಂದರೆ
(1) ಮ್ಯಾಕ್ರೋ ಯುನಿಟ್ಸ್ ಡೆವಲಪ್‌ಮೆಂಟ್ ಮತ್ತು ರಿಫೈನಾನ್ಸ್ ಏಜೆನ್ಸಿ ಬ್ಯಾಂಕ್
(2) ಮೀಡಿಯಮ್ ಯುನಿಟ್ಸ್ ಡೆವಲಪ್‌ಮೆಂಟ್ ಮತ್ತು ರಿಫೈನಾನ್ಸ್ ಏಜೆನ್ಸಿ ಬ್ಯಾಂಕ್
(3) ಮೈಕ್ರೋ ಯುನಿಟ್ಸ್ ಯುನಿಟ್ಸ್ ಡೆವಲಪ್‌ಮೆಂಟ್ ಮತ್ತು ರಿಫೈನಾನ್ಸ್ ಏಜೆನ್ಸಿ ಬ್ಯಾಂಕ್
(4) ಮೈಕ್ರೋ ಯುನಿಟ್ಸ್ ಯುನಿಟ್ಸ್ ಡೆವಲಪ್‌ಮೆಂಟ್
ಮತ್ತು ರಿಪ್ಲೇಸ್‌ಮೆಂಟ್ ಏಜೆನ್ಸಿ ಬ್ಯಾಂಕ್


ಸರಿಯಾದ ಉತ್ತರ : (3) ಮೈಕ್ರೋ ಯುನಿಟ್ಸ್ ಯುನಿಟ್ಸ್ ಡೆವಲಪ್‌ಮೆಂಟ್ ಮತ್ತು ರಿಫೈನಾನ್ಸ್ ಏಜೆನ್ಸಿ ಬ್ಯಾಂಕ್ 

30. ನಗದು ಮೀಸಲು ಅನುಪಾತ (CRR) ಎಂದರೇನು?
(1) ವಾಣಿಜ್ಯ ಬ್ಯಾಂಕಿನ ಒಟ್ಟು ಠೇವಣಿಯ ಭಾಗವನ್ನು ಸ್ವತಃ ತನ್ನಲ್ಲಿಯೇ ಇಡಬೇಕು
(2) ವಾಣಿಜ್ಯ ಬ್ಯಾಂಕಿನ ಒಟ್ಟು ಠೇವಣಿಯ ಭಾಗವನ್ನು, ಆರ್‌ಬಿಐನಲ್ಲಿ ಇಡಬೇಕು
(3) ವಾಣಿಜ್ಯ ಬ್ಯಾಂಕುಗಳು ತಮ್ಮ ಒಟ್ಟು ಠೇವಣಿಯ ಭಾಗವನ್ನು ಚಿನ್ನದ ರೂಪದಲ್ಲಿ ಹೊಂದುವುದು
(4) ಮೇಲಿನ ಯಾವುದೂ ಅಲ್ಲ


ಸರಿಯಾದ ಉತ್ತರ : (2) ವಾಣಿಜ್ಯ ಬ್ಯಾಂಕಿನ ಒಟ್ಟು ಠೇವಣಿಯ ಭಾಗವನ್ನು, ಆರ್‌ಬಿಐನಲ್ಲಿ ಇಡಬೇಕು  


31. ಆತ್ಮನಿರ್ಭರ ಭಾರತ್ 3.0 ಪ್ಯಾಕೇಜ್______ ದಿನಾಂಕದಂದು ಪ್ರಕಟಿಸಲಾಗಿದೆ.
(1) 12ನೇ ಮೇ 2020
(2) 12ನೇ ಅಕ್ಟೋಬರ್ 2020
(3) 12ನೇ ನವೆಂಬರ್ 2020
(4) 12ನೇ ಡಿಸೆಂಬರ್ 2020


ಸರಿಯಾದ ಉತ್ತರ : (3) 12ನೇ ನವೆಂಬರ್ 2020  

32. 2011ರ ಜನಗಣತಿಯ ಪ್ರಕಾರ, ಈ ಕೆಳಗಿನ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅತೀ ಕಡಿಮೆ ಶೇಕಡಾವಾರು ಬಡತನವನ್ನು ಹೊಂದಿದೆ?
(1) ದಕ್ಷಿಣ ಕನ್ನಡ
(2) ಬೆಂಗಳೂರು ನಗರ
(3) ಕೊಡಗು
(4) ಉತ್ತರ ಕನ್ನಡ


ಸರಿಯಾದ ಉತ್ತರ: (2) ಬೆಂಗಳೂರು ನಗರ 

33. ಭಾರತೀಯ GST ಕೌನ್ಸಿಲ್______ ನೇತೃತ್ವದಲ್ಲಿದೆ.
(1) ರಾಷ್ಟ್ರಪತಿಗಳು
(2) ಪ್ರಧಾನ ಮಂತ್ರಿಗಳು
(3) ಹಣಕಾಸು ಸಚಿವರು 
(4) ಗೃಹ ಸಚಿವರು


ಸರಿಯಾದ ಉತ್ತರ : (3) ಹಣಕಾಸು ಸಚಿವರು 

34. ಹಸಿರು ಕ್ರಾಂತಿಯ ಮೊದಲ ಹಂತದಲ್ಲಿ, HYV ಬೀಜಗಳ ಬಳಕೆಯು ಪ್ರಾಥಮಿಕವಾಗಿ______ ಬೆಳೆಯುತ್ತಿರುವ ಪ್ರದೇಶಗಳಿಗೆ ಮಾತ್ರ ಪ್ರಯೋಜನವನ್ನು ನೀಡಿತು.
(1) ಗೋಧಿ
(2) ಹತ್ತಿ
(3) ಕಬ್ಬು
(4) ರಾಗಿ


ಸರಿಯಾದ ಉತ್ತರ : (1) ಗೋಧಿ  

35. “ಭಾರತ ಮತ್ತು ಜ್ಞಾನ ಆರ್ಥಿಕತೆ : ಸಾಮರ್ಥ್ಯ ಮತ್ತು ಅವಕಾಶಗಳನ್ನು ನಿಯಂತ್ರಿಸುವುದು” ಎಂಬ ಶೀರ್ಷಿಕೆಯ ವರದಿಯನ್ನು ಯಾರು ಪ್ರಕಟಿಸಿದರು?
(1) ಆರ್‌.ಬಿ.ಐ.
(2) NITI ಆಯೋಗ್
(3) ವಿಶ್ವ ಬ್ಯಾಂಕ್
(4) ಇವುಗಳಲ್ಲಿ ಯಾವುದೂ ಅಲ್ಲ


ಸರಿಯಾದ ಉತ್ತರ : (3) ವಿಶ್ವ ಬ್ಯಾಂಕ್ 

36. GDPಗೆ ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳು ನೀಡಿದ ಕೊಡುಗೆ ಆರ್ಥಿಕತೆಯ ಆಗಿದೆ.
(1) ವಿನ್ಯಾಸ
(2) ರಚನಾತ್ಮಕ ಉತ್ಪಾದಕತೆ
(3) ಪ್ರತಿಷ್ಠಾನ
(4) ರಚನಾತ್ಮಕ ಸಂಯೋಜನೆ


ಸರಿಯಾದ ಉತ್ತರ : (4) ರಚನಾತ್ಮಕ ಸಂಯೋಜನೆ 

37. ನೇರ ತೆರಿಗೆಗೆ ಉದಾಹರಣೆ
(1) ವೈಯಕ್ತಿಕ ಆದಾಯದ ಮೇಲಿನ ತೆರಿಗೆ
(2) ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ
(3) (1) ಮತ್ತು (2) ಸಹ ಸರಿ
(4) (1) ಮತ್ತು (2) ಸಹ ತಪ್ಪು


ಸರಿಯಾದ ಉತ್ತರ: (1) ವೈಯಕ್ತಿಕ ಆದಾಯದ ಮೇಲಿನ ತೆರಿಗೆ  

 38. ವಿಸ್ತರಿಸಿ : MPCE
(1) ಮಾಸಿಕ ತಲಾ ಅನುಭೋಗ ವೆಚ್ಚ (Monthly Per Capita Consumption Expenditure)
(2) ಮಾಸಿಕ ತಲಾ ಅನುಭೋಗ ಗಳಿಕೆ (Monthly Per Capita Consumption Earnings)
(3) ಮಾಸಿಕ ತಲಾ ಉತ್ಪಾದನಾ ವೆಚ್ಚ (Monthly Per Capita Production Expenditure)
(4) ಮೇಲಿನವುಗಳಲ್ಲಿ ಯಾವುದೂ ಅಲ್ಲ


ಸರಿಯಾದ ಉತ್ತರ : (1) ಮಾಸಿಕ ತಲಾ ಅನುಭೋಗ ವೆಚ್ಚ (Monthly Per Capita Consumption Expenditure)

39. ಭಾರತ ಸರ್ಕಾರ ಶಿಕ್ಷಣದ ಮೇಲು ತೆರಿಗೆಯಿಂದ ಬರುವ ಆದಾಯವನ್ನು ಈ ಕೆಳಕಂಡ ಶಿಕ್ಷಣದ ಮೇಲಿನ ವೆಚ್ಚಕ್ಕಾಗಿ ಮೀಸಲಿಡುತ್ತದೆ.
(1) ಉನ್ನತ ಶಿಕ್ಷಣ
(2) ಪ್ರಾಥಮಿಕ ಶಿಕ್ಷಣ
(3) ಮಾಧ್ಯಮಿಕ ಶಿಕ್ಷಣ
(4) ಮೇಲಿನವುಗಳಲ್ಲಿ ಯಾವುದೂ ಅಲ್ಲ


ಸರಿಯಾದ ಉತ್ತರ : (3) ಮಾಧ್ಯಮಿಕ ಶಿಕ್ಷಣ 

40. ಕೆಳಗಿನವುಗಳಲ್ಲಿ ಭಾರತ ತಯಾರಿಸಿದ ಕೋವಿಡ್ ಲಸಿಕೆಗಳನ್ನು ಮೊದಲು ಪಡೆದ ದೇಶ ಯಾವುದು?
(1) ಬಾಂಗ್ಲಾದೇಶ
(2) ಮಾಲೀವ್
(3) ಭೂತಾನ್
(4) ಮಯನ್ಮಾರ್


ಸರಿಯಾದ ಉತ್ತರ : (3) ಭೂತಾನ್  


41. AVALOKANA ಜಾರಿಯಾದುದು
(1) 20 ಜನವರಿ 2021
(2) 26 ಜನವರಿ 2021
(3) 30 ಜನವರಿ 2021
(4) 31 ಜನವರಿ 2021


ಸರಿಯಾದ ಉತ್ತರ : (1) 20 ಜನವರಿ 2021  

42. ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ.ಬಿ.ಎಸ್. ಯಡಿಯೂರಪ್ಪನವರು ದಿನಾಂಕ 09-01-2021 ರಂದು ಜಾರಿಗೆ ತಂದ “ಕೃಷಿ ಸಂಜೀವಿನಿ ಯೋಜನೆ_______ಗೆ ಸಂಬಂಧಿಸಿದೆ.
(1) ನೀರಾವರಿ ಯೋಜನೆಯಲ್ಲಿ ರಿಯಾಯಿತಿ ನೀಡುವುದು
(2) ರೈತರಿಗೆ ಪಿಂಚಣಿ ಯೋಜನೆ
(3) ಮಣ್ಣು ಪರೀಕ್ಷೆ, ನೀರು ಮತ್ತು ರೋಗ ನಿವಾರಣೆ ಬಗ್ಗೆ ಕ್ರಮ ಕೈಗೊಳ್ಳುವುದು
(4) ರೈತರಿಗೆ ಸಾಲ ಒದಗಿಸುವುದು


ಸರಿಯಾದ ಉತ್ತರ: (3) ಮಣ್ಣು ಪರೀಕ್ಷೆ, ನೀರು ಮತ್ತು ರೋಗ ನಿವಾರಣೆ ಬಗ್ಗೆ ಕ್ರಮ ಕೈಗೊಳ್ಳುವುದು 

43. ಕರ್ನಾಟಕದ 2011ರ ಜನಗಣತಿ ಪ್ರಕಾರ ಅಕ್ಷರಸ್ಥರ ಸಂಖ್ಯೆ
(1) 75.36
(2) 76.36
(3) 77.36
(4) 78.36


ಸರಿಯಾದ ಉತ್ತರ : (1) 75.36

44. 2021ರ “ಕರ್ನಾಟಕ ಜನಸೇವಕ” ಯೋಜನೆಯು______ಗೆ ಸಂಬಂಧಿಸಿದೆ.
(1) ಸರ್ಕಾರಿ ಸೇವೆಗಳನ್ನು ಮನೆ ಮನೆಗೆ ತಲುಪಿಸುವುದು
(2) ಪ್ರತಿ ಗ್ರಾಮಕ್ಕೆ ಮುಖಂಡರನ್ನು ನೇಮಿಸುವುದು
(3) ಪೋಸ್ಟಲ್ ಜನಸೇವಕ ಪ್ರತಿನಿಧಿ
(4) ಸಾಲ ಒದಗಿಸಲು ಸರ್ಕಾರದ ಪ್ರತಿನಿಧಿ


ಸರಿಯಾದ ಉತ್ತರ : (1) ಸರ್ಕಾರಿ ಸೇವೆಗಳನ್ನು ಮನೆ ಮನೆಗೆ ತಲುಪಿಸುವುದು  

45. “ಬೆಂಗಳೂರು ತಾಂತ್ರಿಕ ಶೃಂಗ-2020ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
(A) ಈ ಶೃಂಗ ಸಭೆಯು ವಾಸ್ತವಿಕವಾಗಿ (Virtually) 2020ರ ನವೆಂಬರ್ 19 ರಿಂದ 21 ರವರೆಗೆ ಜರುಗಿತು.
(B) ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಸರೆನ್ಸ್ ಮೂಲಕ ಶೃಂಗಸಭೆಯನ್ನು ಉದ್ಘಾಟಿಸಿದರು
(C) ಶೃಂಗಸಭೆಯ ಧೈಯವಾಕ್ಯ “ಮುಂದಿನದು ಈಗ”.
ಈ ಮೇಲಿನ ಯಾವ ಹೇಳಿಕೆ/ಗಳು ಸರಿ? ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ.
(1) (A) ಮಾತ್ರ
(2) (A) ಮತ್ತು (B) ಮಾತ್ರ
(3) (A) ಮತ್ತು (C) ಮಾತ್ರ
(4) ಮೇಲಿನ ಎಲ್ಲವೂ


ಸರಿಯಾದ ಉತ್ತರ : (4) ಮೇಲಿನ ಎಲ್ಲವೂ  

46. ನಾವು ಗಾಳಿಯನ್ನು ಉಸಿರಾಡುವಾಗ, ಆಮ್ಲಜನಕದ ಜೊತೆಗೆ ಸಾರಜನಕವನ್ನು ತೆಗೆದುಕೊಳ್ಳುತ್ತೇವೆ. ಸಾರಜನಕದ ವಿಧಿ ಏನು?
(1) ಅದು ಆಮ್ಲಜನಕದ ಜೊತೆಗೆ ಕೋಶದಲ್ಲಿ ಚಲಿಸುತ್ತದೆ
(2) ಅದು ಇಂಗಾಲದ ಡೈ ಆಕ್ಸೆಡ್ ಜೊತೆಗೆ ನಿಶ್ವಾಸದ ಸಮಯದಲ್ಲಿ ಹೊರ ಬರುತ್ತದೆ
(3) ಅದು ಮೂಗಿನ ಕೋಶಗಳಿಂದ ಮಾತ್ರ ಹೀರಿಕೊಳ್ಳುತ್ತದೆ
(4) ಸಾರಜನಕದ ಪ್ರಮಾಣ ಮೊದಲೇ ಕೋಶದಲ್ಲಿ ತುಂಬ ಇರುವುದರಿಂದ ಅದು ಹೀರಿಕೊಳ್ಳುವುದಿಲ್ಲ


ಸರಿಯಾದ ಉತ್ತರ : (4) ಸಾರಜನಕದ ಪ್ರಮಾಣ ಮೊದಲೇ ಕೋಶದಲ್ಲಿ ತುಂಬ ಇರುವುದರಿಂದ ಅದು ಹೀರಿಕೊಳ್ಳುವುದಿಲ್ಲ  

47. ಶಾರ್ಟ್ ಸರ್ಕ್ಯೂಟ್ ಸಮಯದಲ್ಲಿ, ಸರ್ಕ್ಯೂಟ್‌ನ ಕರ್ರಂಟ್
(1) ಗಣನೀಯವಾಗಿ ಕಡಿಮೆ ಆಗುವುದು
(2) ಬದಲಾಗುವುದಿಲ್ಲ
(3) ಹೆಚ್ಚು ಹೆಚ್ಚಾಗುತ್ತದೆ
(4) ನಿರಂತರವಾಗಿ ಬದಲಾಗುತ್ತದೆ


ಸರಿಯಾದ ಉತ್ತರ: (3) ಹೆಚ್ಚು ಹೆಚ್ಚಾಗುತ್ತದೆ  

 48. ಬಟ್ಟೆ ಒಗೆಯುವ ಯಂತ್ರವು ಯಾವ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ?
(1) ರಿವರ್ಸ್ ಆಸ್ಫೋಸಿಸ್
(2) ಪ್ರಸರಣ
(3) ಬೇರ್ಪಡಿಸು
(4) ವಿಗಲನ


ಸರಿಯಾದ ಉತ್ತರ : (3) ಬೇರ್ಪಡಿಸು 

49. ದ್ಯುತಿ ತಂತು ಯಾವ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ?
(1) ಬೆಳಕಿನ ಚದುರುವಿಕೆ
(2) ಒಟ್ಟು ಆಂತರಿಕ ಹೀರಿಕೊಳ್ಳುವಿಕೆ
(3) ಒಟ್ಟು ಆಂತರಿಕ ಪ್ರತಿಫಲನ
(4) ದ್ಯುತಿ ಭ್ರಮಣ


ಸರಿಯಾದ ಉತ್ತರ: (3) ಒಟ್ಟು ಆಂತರಿಕ ಪ್ರತಿಫಲನ 

50. ವೇಗವರ್ಧನೆಯಿಂದ ಲಿಫ್ಟ್ ಕೆಳಗೆ ಚಲಿಸುವಾಗ, ದೇಹದ ಸ್ಪಷ್ಟ ತೂಕ
(1) ನಿಜವಾದ ತೂಕಕ್ಕಿಂತ ಕಡಿಮೆ
(2) ನಿಜವಾದ ತೂಕಕ್ಕಿಂತ ಹೆಚ್ಚು
(3) ಲಘುವಾದ
(4) ಬದಲಾಗುವುದಿಲ್ಲ


ಸರಿಯಾದ ಉತ್ತರ : (1) ನಿಜವಾದ ತೂಕಕ್ಕಿಂತ ಕಡಿಮೆ  

Edutube Kannada ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ Edutube Kannada ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ


51. ಈ ಕೆಳಗಿನವುಗಳಲ್ಲಿ ಯಾವುದು ರಾಸಾಯನಿಕ
ಬದಲಾವಣೆಯಲ್ಲ?
(1) ಕಾಗದವನ್ನು ಸುಡುವುದು
(2) ಹಾಲನ್ನು ಮೊಸರಿಗೆ ಪರಿವರ್ತಿಸುವುದು
(3) ನೀರಿಗೆ ಸಕ್ಕರೆ ಸೇರಿಸುವುದ
(4) ಇವುಗಳಲ್ಲಿ ಯಾವುದೂ ಇಲ್ಲ


ಸರಿಯಾದ ಉತ್ತರ : (3) ನೀರಿಗೆ ಸಕ್ಕರೆ ಸೇರಿಸುವುದು

52. ಕ್ಲೋರೋಫಿಲ್ _______ ಅನ್ನು ಹೊಂದಿರುತ್ತದೆ
(1) ಕಬ್ಬಿಣದ ಸಂಕೀರ್ಣ
(2) ಮೆಗ್ನಿಷಿಯಮ್ ಸಂಕೀರ್ಣ
(3) ಕ್ಯಾಲ್ಸಿಯಂ ಸಂಕೀರ್ಣ
(4) ಪೊಟ್ಯಾಶಿಯಮ್ ಸಂಕೀರ್ಣ


ಸರಿಯಾದ ಉತ್ತರ: (2) ಮೆಗ್ನಿಷಿಯಮ್ ಸಂಕೀರ್ಣ  

53. ಕ್ಯಾನ್ಸರ್ ಚಿಕಿತ್ಸೆಗಾಗಿ ಈ ಕೆಳಗಿನ ಯಾವ ವಿಕಿರಣಗಳನ್ನು ಬಳಸಲಾಗುತ್ತದೆ?
(1) ಆಲ್ಫಾ
(2) ಗಾಮಾ
(3) ಬೀಟಾ
(4) ಇವುಗಳಲ್ಲಿ ಎಲ್ಲವೂ


ಸರಿಯಾದ ಉತ್ತರ : (2) ಗಾಮಾ 

54. ಜಲಮಾಲಿನ್ಯದಿಂದ ಬರುವ “ಮಿನಮಟ' ರೋಗವು ಈ ಕೆಳಕಂಡ ಸಂಯುಕ್ತಗಳಿಂದ ಉಂಟಾಗುತ್ತದೆ.
(1) ಸೀಸ
(2) ಕ್ಯಾಡ್ಮಿಯಂ
(3) ಪಾದರಸ
(4) ಕಬ್ಬಿಣ


ಸರಿಯಾದ ಉತ್ತರ : (3) ಪಾದರಸ

55. ವಾಹನಗಳಲ್ಲಿ ಹೊರಸೂಸುವಿಕೆ ಪರೀಕ್ಷೆಯನ್ನು ಅನಿಲದ ಪ್ರಮಾಣವನ್ನು ಅಳೆಯಲು ಮಾಡಲಾಗುತ್ತದೆ.
(1) CO2
(2) S2
(3) NO
(4) CO


ಸರಿಯಾದ ಉತ್ತರ : (1) CO2  

56. ನ್ಯೂಕ್ಲಿಯ ಕ್ರಿಯಾಕಾರಿಯಲ್ಲಿ _______ ಅನ್ನು ಮಂದಕಾರಿಯಾಗಿ ಬಳಸುತ್ತಾರೆ.
(1) ಡ್ರೈ ಐಸ್
(2) ಭಾರ ಜಲ
(3) ಇದ್ದಿಲು
(4) ಜಲಜನಕ


ಸರಿಯಾದ ಉತ್ತರ : (1) CO2 

57. ಅಲಂ ಮಣ್ಣಿನ ನೀರನ್ನು ನಿಂದ ಶುದ್ದೀಕರಿಸುತ್ತದೆ.
(1) ಹೆಪ್ಪುಗಟ್ಟುವಿಕೆ
(2) ಡಯಾಲಿಸಿಸ್‌
(3) ಹೀರಿಕೊಳ್ಳುವಿಕೆ
(4) ನಿಜವಾದ ದ್ರಾವಣವನ್ನು ರೂಪಿಸುವುದು


ಸರಿಯಾದ ಉತ್ತರ: (1) ಹೆಪ್ಪುಗಟ್ಟುವಿಕೆ 

58. ಮಣ್ಣಿನಲ್ಲಿ ಕಂಡುಬರುವ ಆಮ್ಲ
(1) ಅಸಿಟಿಕ್ ಆಮ್ಲ
(2) ಫಾರ್ಮಿಕ್ ಆಮ್ಲ
(3) ಕಾರ್ಬೋನಿಕ್ ಆಮ್ಲ
(4) ಹ್ಯೂಮಿಕ್ ಆಮ್ಲ 


ಸರಿಯಾದ ಉತ್ತರ : (4) ಹ್ಯೂಮಿಕ್ ಆಮ್ಲ  

59. ಎರಡನೆಯ ಮಹಾಯುದ್ಧದ ಸಮಯದಲ್ಲಿ ಗಾಯಗೊಂಡ ಲಕ್ಷಾಂತರ ಸೈನಿಕರ ಜೀವವನ್ನು ಉಳಿಸಿದ ಅದ್ಭುತ ಔಷಧ ಎಂದು ಕರೆಯಲ್ಪಡುವ ಪ್ರತಿಜೀವಕ . ಪೆನಿಸಿಲಿನ್ ಈ ಕೆಳಗಿನ ಸೂಕ್ತ ಜೀವಾಣುವಿನಿಂದ ತಯಾರಿಸಲ್ಪಡುತ್ತದೆ.
(1) ಬ್ಯಾಕ್ಟಿರಿಯಂ
(2) ವೈರಾಣು
(3) ಆಕೈನೋಮೈಸಿಟ್
(4) ಶಿಲೀಂಧ್ರ 


ಸರಿಯಾದ ಉತ್ತರ : (4) ಶಿಲೀಂಧ್ರ  

60. ಭಾರತವು ಈ ಕೆಳಗಿನವುಗಳ ಪೇಟೆಂಟ್ ಹೊಂದಿದೆ.
(1) ಬೇವು
(2)ಅರಿಶಿನ
(3) (1) ಮತ್ತು (2) ಸಹ
(4) ಮೇಲಿನವುಗಳಲ್ಲಿ ಯಾವುದೂ ಅಲ್ಲ


ಸರಿಯಾದ ಉತ್ತರ : (3) (1) ಮತ್ತು (2) ಸಹ  


61. ಈ ಕೆಳಗಿನವುಗಳಲ್ಲಿ ಯಾವುದರಲ್ಲಿ ವಿಟಮಿನ್ 'ಎ' ಅತ್ಯಧಿಕ ಪ್ರಮಾಣದಲ್ಲಿದೆ?
(1) ಸೇಬು
(2) ಬಾಳೆಹಣ್ಣು
(3) ಜೇನುತುಪ್ಪ
(4) ಲಿಂಬೆಹಣ್ಣು


ಸರಿಯಾದ ಉತ್ತರ : (2) ಬಾಳೆಹಣ್ಣು 

62. ಈ ಕೆಳಕಂಡ ಭಾರತದ ವಿಜ್ಞಾನಿಗಳಲ್ಲಿ ಪಕ್ಷಿತಜ್ಞನನ್ನು ಗುರುತಿಸಿ.
(1) ಅಬ್ದುಲ್ ಕಲಾಂ
(2) ಸ್ವಾಮಿನಾಥನ್
(3) ಸಲೀಂ ಆಲಿ
(4) ಸಿ.ಎನ್.ಆರ್. ರಾವ್



ಸರಿಯಾದ ಉತ್ತರ: (3) ಸಲೀಂ ಆಲಿ 

63. 'ಮಾಸ್ಟರ್ ಗ್ಲ್ಯಾಂಡ್' ಎಂದು ಯಾವುದನ್ನು ಕರೆಯುತ್ತಾರೆ?
(1) ಥೈರಾಯ್
(2) ಪಿಟ್ಯುಟರಿ
(3) ಮೇದೋಜೀರಕ ಗ್ರಂಥಿ
(4) ಮೇಲಿನವುಗಳಲ್ಲಿ ಯಾವುದೂ ಅಲ್ಲ


ಸರಿಯಾದ ಉತ್ತರ : (2) ಪಿಟ್ಯುಟರಿ 

64. ರಕ್ತದಲ್ಲಿ ಮುಖ್ಯವಾಗಿ ಆಮ್ಲಜನಕವು ಈ ಮೂಲಕ ಸಾಗಣೆ ಆಗುತ್ತದೆ.
(1) ರಕ್ತ ಪ್ಲಾಸ್ಮಾ
(2) ಕೆಂಪು ರಕ್ತ ಕಣಗಳು
(3) ಬಿಳಿ ರಕ್ತ ಕಣಗಳು
(4) ಥ್ರಂಬೋಸೈಟ್ ಗಳು


ಸರಿಯಾದ ಉತ್ತರ: (2) ಕೆಂಪು ರಕ್ತ ಕಣಗಳು  

65. ಕರ್ನಾಟಕ ರಾಜ್ಯದ ಪತಂಗ ಎಂಬುದಾಗಿ ಅಂಗೀಕೃತವಾಗಿರುವಂಥ ಪತಂಗದ ಪ್ರಭೇದದ ಹೆಸರೇನು?
(1) ನಾರ್ಥರ್ನ್ ಬರ್ಡ್ ವಿಂಗ್
(2) ಬ್ಲೂ ಮೊರಾನ್
(3) ಟೇಲ್ ಜೇ
(4) ಸದರ್ನ್ ಬರ್ಡ್ ವಿಂಗ್ 


ಸರಿಯಾದ ಉತ್ತರ : (4) ಸದರ್ನ್ ಬರ್ಡ್ ವಿಂಗ್ 

66, ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿ ಹೊಂದಿಕೆಯಾಗಿದೆ?
(1) H5N1 - ಹಕ್ಕಿಗಳು
(2) H1N1 - ಹಂದಿಗಳು
(3) NiV - ಬಾವುಲಿಗಳು.
(4) KFDV - ದನಕರುಗಳು 


ಸರಿಯಾದ ಉತ್ತರ : (4) KFDV ದನಕರುಗಳು  

67. ಕರ್ನಾಟಕದಲ್ಲಿ ಎಲ್ಲಿ ಕಾಳಿಂಗಸರ್ಪ ಸಂಶೋಧನಾ ಕೇಂದ್ರವಿದೆ?
(1) ಆಗುಂಬೆ
(2) ಸುಬ್ರಹ್ಮಣ್ಯ
(3) ಕುಶಾಲನಗರ
(4) ದಾಂಡೇಲಿ


ಸರಿಯಾದ ಉತ್ತರ: (1) ಆಗುಂಬೆ 

68. 1963ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದವರು
(1) ಪಿ.ವಿ. ಕಾಣೆ
(2) ಸಿ. ರಾಜಗೋಪಾಲಚಾರಿ
(3) ಅಣ್ಣಮಾಚಾರಿ
(4) ಸಿ.ವಿ. ರಾಮನ್


ಸರಿಯಾದ ಉತ್ತರ : (1) ಪಿ.ವಿ. ಕಾಣೆ 

69. “ಡಿಪ್ರೆಸ್ಡ್ ಕ್ಲಾಸ್ ಲೀಗ್” ಸ್ಥಾಪಕ
(1) ಡಾ. ಬಿ.ಆರ್. ಅಂಬೇಡ್ಕರ್
(2) ಡಾ. ಬಾಬು ಜಗಜೀವನ ರಾಮ್
(3) ಪೆರಿಯಾರ್ ರಾಮಸ್ವಾಮಿ ನಾಯ್ಕರ್
(4) ಜ್ಯೋತಿ ಬಾಪುಲೇ


ಸರಿಯಾದ ಉತ್ತರ : (2) ಡಾ. ಬಾಬು ಜಗಜೀವನ ರಾಮ್ 

70. ಭಾರತದಲ್ಲಿ ಮೊದಲ ಬಾರಿಗೆ ಅಂಚೆ ಚೀಟಿಯನ್ನು ಜಾರಿಗೊಳಿಸಿದವರು ಯಾರು?
(1) ಲಾರ್ಡ್ ರಿಪ್ಪನ್
(2) ಲಾರ್ಡ್ ವಿಲಿಯಮ್ ಬೆಂಟಿಕ್
(3) ಲಾರ್ಡ್ ಇದ್ದೀನ್
(4) ಲಾರ್ಡ್ ಡಾಲ್‌ಹೌಸಿ


ಸರಿಯಾದ ಉತ್ತರ : (4) ಲಾರ್ಡ್ ಡಾಲ್‌ಹೌಸಿ  


71. ಕೆಳಗಿನ ಯಾವ ರಾಜ್ಯ ಪ್ರಥಮವಾಗಿ ಇ-ಕ್ಯಾಬಿನೆಟ್ (e-cabinet) ನ್ನು ಜಾರಿಗೊಳಿಸಲು ನಿರ್ಧರಿಸಿದೆ?
(1) ಕೇರಳ
(2) ಹಿಮಾಚಲ ಪ್ರದೇಶ
(3) ಅಸ್ಸಾಂ
(4) ಕರ್ನಾಟಕ


ಸರಿಯಾದ ಉತ್ತರ : (2) ಹಿಮಾಚಲ ಪ್ರದೇಶ  

72. ಕೆಳಗಿನ ಯಾವ ದೇಶವು ಬ್ರಿಕ್ಸ್ ಕ್ರೀಡಾಕೂಟ (BRICS Games 2021) 2021ನ್ನು ಆಯೋಜಿಸುವ ಯೋಜನೆಯನ್ನು ಹಾಕಿಕೊಂಡಿದೆ?
(1) ಬ್ರೆಜಿಲ್
(2) ರಷ್ಯಾ
(3) ಭಾರತ 
(4) ಚೀನಾ


ಸರಿಯಾದ ಉತ್ತರ: (3) ಭಾರತ 

73. ಕೆಳಗಿನ ಯಾವ ದೇಶವು 36 ನೇಯ 'ಆಸಿಯಾನ್' (ASEAN) ಸಮ್ಮೇಳನವನ್ನು ಆಯೋಜಿಸಿತ್ತು?
(1) ಜಪಾನ್
(2) ಭಾರತ
(3) ಚೀನಾ
(4) ವಿಯೆಟ್ನಾಂ


ಸರಿಯಾದ ಉತ್ತರ: (4) ವಿಯೆಟ್ನಾಂ 

74. ಕೆಳಗಿನ ಯಾರು ಅತೀ ಹೆಚ್ಚು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು?
(1) ಪವನ್ ಕುಮಾರ್ ಚಾಪ್ಲಿಂಗ್
(2) ಜ್ಯೋತಿ ಬಸು
(3) ಗೇಗೆಂಗ್ ಅಪಾಂಗ್
(4) ಲಾಲ್ ಥಾನ್‌ವಾಲ


ಸರಿಯಾದ ಉತ್ತರ : (1) ಪವನ್ ಕುಮಾರ್ ಚಾಪ್ಲಿಂಗ್  

75. “ಯಾರೇ ವ್ಯಕ್ತಿಯನ್ನು ಒಂದೇ , ಅಪರಾಧಕ್ಕಾಗಿ ಒಂದಕ್ಕಿಂತ ಹೆಚ್ಚು ಸಲ ಪ್ರಾಸಿಕ್ಯೂಷನ್‌ಗೆ ಗುರಿಪಡಿಸತಕ್ಕದಲ್ಲ ಹಾಗೂ ದಂಡಿಸತಕ್ಕದ್ದಲ್ಲ” ಈ ನಿಯಮವನ್ನು ಭಾರತೀಯ ಸಂವಿಧಾನದಲ್ಲಿ ಯಾವ ಅನುಚ್ಛೇದದಲ್ಲಿ ಮಾತನಾಡಲಾಗಿದೆ?
(1) ಅನುಚ್ಛೇದ 20 (2)
(2) ಅನುಚ್ಛೇದ 19 (8)
(3) ಅನುಚ್ಛೇದ 21
(4) ಅನುಚ್ಛೇದ 22


ಸರಿಯಾದ ಉತ್ತರ : (1) ಅನುಚ್ಛೇದ 20 (2)  

76. ಒಂದು ವಿಧೇಯಕವು ಧನ ವಿಧೇಯಕವೇ ಅಥವಾ ಅಲ್ಲವೇ ಎಂಬ ಯಾವುದೇ ಪ್ರಶ್ನೆ ಉದ್ಭವಿಸಿದರೆ ಯಾರ ತೀರ್ಮಾನವು ಅಂತಿಮವಾದುದಾಗಿರತಕ್ಕದ್ದು?
(1) ಉಪ ಸಭಾಪತಿಯವರು
(2) ಸಭಾಪತಿಯವರು
(3) ರಾಷ್ಟ್ರಪತಿಯವರು
(4) ರಾಜ್ಯದ ರಾಜ್ಯಪಾಲರು


ಸರಿಯಾದ ಉತ್ತರ : (2) ಸಭಾಪತಿಯವರು 

77. ಭಾರತೀಯ ಸಂವಿಧಾನದ 263ನೇ ಅನುಚ್ಛೇದದ ಅಡಿಯಲ್ಲಿ ರಚಿಸಲಾದ ಅಂತರ ರಾಜ್ಯ ಪರಿಷತ್ತಿನ ಅಧ್ಯಕ್ಷರಾಗಿ ಯಾರು ಕಾರ್ಯನಿರ್ವಹಿಸುತ್ತಾರೆ?
(1) ಭಾರತದ ಪ್ರಧಾನ ಮಂತ್ರಿಗಳು
(2) ರಾಜ್ಯದ ಮುಖ್ಯ ಮಂತ್ರಿಗಳು
(3) ರಾಷ್ಟ್ರಪತಿಗಳು
(4) ಭಾರತದ ಮುಖ್ಯ ನ್ಯಾಯಾಧೀಶರು


ಸರಿಯಾದ ಉತ್ತರ: (1) ಭಾರತದ ಪ್ರಧಾನ ಮಂತ್ರಿಗಳು

 78. ಸಮಾಜವಾದಿ' ಹಾಗೂ 'ಜಾತ್ಯಾತೀತ' ಎಂಬ ಪದಗಳನ್ನು ಭಾರತ ಸಂವಿಧಾನದ ಪೂರ್ವಪೀಠಿಕೆಯಲ್ಲಿ_______ ಮೂಲಕ ಸೇರ್ಪಡಿಸಲಾಗಿದೆ.
(1) 42ನೇ ತಿದ್ದುಪಡಿ
(2) 44ನೇ ತಿದ್ದುಪಡಿ
(3) 23ನೇ ತಿದ್ದುಪಡಿ
(4) 24ನೇ ತಿದ್ದುಪಡಿ


ಸರಿಯಾದ ಉತ್ತರ : (1) 42ನೇ ತಿದ್ದುಪಡಿ 

79. ಭಾರತ ಸಂವಿಧಾನದ ಯಾವ ವಿಧಿಯು ಸಂವಿಧಾನ
ತಿದ್ದುಪಡಿಯ ವಿಧಾನವನ್ನು ತಿಳಿಸುತ್ತದೆ?
(1) 268ನೇ ವಿಧಿ
(2) 325ನೇ ವಿಧಿ
(3) 365ನೇ ವಿಧಿ
(4) 368ನೇ ವಿಧಿ 


ಸರಿಯಾದ ಉತ್ತರ : (4) 368ನೇ ವಿಧಿ  

80. ಈ ಕೆಳಗಿನವುಗಳಲ್ಲಿ ಯಾವುದು ಸಂವಿಧಾನಾತ್ಮಕ ಸಂಸ್ಥೆಯಾಗಿದೆ?
(1) ಕೇಂದ್ರ ತನಿಖಾ ಆಯೋಗ
(2) ಸಿ.ವಿ.ಸಿ.
(3) ಕರ್ನಾಟಕ ಲೋಕ ಸೇವಾ ಆಯೋಗ
(4) ರಾಜ್ಯ ಮಹಿಳಾ ಆಯೋಗ


ಸರಿಯಾದ ಉತ್ತರ : (3) ಕರ್ನಾಟಕ ಲೋಕ ಸೇವಾ ಆಯೋಗ  


81. ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಮತ್ತು ಸಮವರ್ತಿ ಯಾವ ಪಟ್ಟಿಗಳ ಸಂವಿಧಾನದ ಬಗ್ಗೆ ಷೆಡ್ಯೂಲ್‌ನಲ್ಲಿ ಉಲ್ಲೇಖಿಸಿದೆ?
(1) ಷೆಡ್ಯೂಲ್-I
(2) ಷೆಡ್ಯೂಲ್-III
(3) ಷೆಡ್ಯೂಲ್-V
(4) ಷೆಡ್ಯೂಲ್-VII

ಸರಿಯಾದ ಉತ್ತರ : (4) ಷೆಡ್ಯೂಲ್-VII 

82. ಆಡಳಿತದ ಮೇಲೆ ನಾಗರಿಕರ ಪರಿಣಾಮಕಾರಿ ನಿಯಂತ್ರಣದ ವಿಧಾನವೆಂದರೆ
(1) ಚುನಾವಣೆ
(2) ಸಾರ್ವಜನಿಕ ಅಭಿಪ್ರಾಯ
(3) 'ಒತ್ತಡ ಗುಂಪುಗಳು
(4) ಸಲಹಾ ಸಮಿತಿಗಳು


ಸರಿಯಾದ ಉತ್ತರ: (1) ಚುನಾವಣೆ 

83. ಭಾರತದಲ್ಲಿ ರಾಜ್ಯದ ರಾಜ್ಯಪಾಲರಾಗಲು ಅರ್ಹ ವಯಸ್ಸೆಷ್ಟು?
(1) 30 ವರ್ಷ
(2) 25 ವರ್ಷ
(3) 35 ವರ್ಷ
(4) 40 ವರ್ಷ


ಸರಿಯಾದ ಉತ್ತರ: (3) 35 ವರ್ಷ 

84. ಕರ್ನಾಟಕ ಹೈಕೋರ್ಟ್ ಸ್ಥಾಪನೆಯಾಗಿದ್ದು ಯಾವಾಗ?
(1) 1885
(2) 1884
(3) 1886
(4) 1890


ಸರಿಯಾದ ಉತ್ತರ : (2) 1884 

85. ಸಾರ್ವಭೌಮಾಧಿಕಾರವು ಪ್ರಜಾಪ್ರಭುತ್ವದಲ್ಲಿ______ ನೆಲೆಸಿರುತ್ತದೆ.
(1) ರಾಷ್ಟ್ರಾಧ್ಯಕ್ಷರಲ್ಲಿ
(2) ಜನತೆಯಲ್ಲಿ
(3) ಪ್ರಧಾನಮಂತ್ರಿಯಲ್ಲಿ
(4) ನಾಗರೀಕ ಸೇವಾ ವರ್ಗದಲ್ಲಿ


ಸರಿಯಾದ ಉತ್ತರ : (2) ಜನತೆಯಲ್ಲಿ 

86. ಹೈಕೋರ್ಟ್‌ನ ನ್ಯಾಯಾಧೀಶರ ನಿವೃತ್ತಿ ಅವಧಿಯು_______ ಆಗಿದೆ.
(1) 60 ವರ್ಷ
(2) 62 ವರ್ಷ
(3) 58 ವರ್ಷ
(4) 65 ವರ್ಷ


ಸರಿಯಾದ ಉತ್ತರ : (2) 62 ವರ್ಷ  

87. ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಟ್ಟ ಮೊದಲಿಗೆ ಮಹಿಳಾ ನ್ಯಾಯಾಧೀಶರಾಗಿ ನೇಮಕಗೊಂಡವರು ಯಾರು?
(1) ರಾಣಿ ಜೇ‌ಮಲಾನಿ
(2) ಅಣ್ಣ ಜಾರ್ಜ್ ಮಲ್ಲೋತ್ರಾ
(3) ಎಂ. ಫಾತಿಮಾ ಬೀವಿ
(4) ಲೀಲಾ ಸೇಠ್


ಸರಿಯಾದ ಉತ್ತರ: (3) ಎಂ. ಫಾತಿಮಾ ಬೀವಿ 

 88. ಈ ಕೆಳಗಿನ ಯಾವ ವಿಧಿಯು ಭಾರತದ ಪ್ರಧಾನಮಂತ್ರಿಯನ್ನು ನೇಮಿಸಲು ರಾಷ್ಟ್ರಪತಿಗೆ ಅಧಿಕಾರ ನೀಡುತ್ತದೆ?
(1) ವಿಧಿ 74
(2) ವಿಧಿ 75
(3) ವಿಧಿ 76
(4) ವಿಧಿ 77


ಸರಿಯಾದ ಉತ್ತರ : (2) ವಿಧಿ 75 

89. ಈ ಕೆಳಗಿನ ಯಾವ ವೈಶಿಷ್ಟ್ಯವು ಭಾರತೀಯ ಸಂವಿಧಾನದ ಸಂಯುಕ್ತ ಪಾತ್ರವನ್ನು ಬೆಂಬಲಿಸುವುದಿಲ್ಲ?
(1) ಕೇಂದ್ರ ಮತ್ತು ರಾಜ್ಯಗಳ ನಡುವಣ ಅಧಿಕಾರಗಳ ವಿಂಗಡಣೆ
(2) ನ್ಯಾಯಾಲಯಗಳ ಅಧಿಕಾರಗಳು
(3) ಸಂವಿಧಾನವೇ ಸರ್ವಶ್ರೇಷ್ಠವೆಂಬ ಅಂಶ
(4) ಏಕ ಪೌರತ್ವ 


ಸರಿಯಾದ ಉತ್ತರ: (4) ಏಕ ಪೌರತ್ವ  

90. ವಾಯುಭಾರ ಮಾಪಕ ಏನನ್ನು ಅಳೆಯುತ್ತದೆ?
(1) ಗಾಳಿಯ ವೇಗ
(2) ಗಾಳಿಯ ದಿಕ್ಕು
(3) ಒತ್ತಡ
(4) ಆರ್ದ್ರತೆ


ಸರಿಯಾದ ಉತ್ತರ : (3) ಒತ್ತಡ  


91. ಕರ್ನಾಟಕದ ಕರಾವಳಿಯ ಉದ್ದ
(1) 320 ಕಿ.ಮೀ.
(2) 325 ಕಿ.ಮೀ.
(3) 321 ಕಿ.ಮೀ.
(4) 330 ಕಿ.ಮೀ.


ಸರಿಯಾದ ಉತ್ತರ : (1) 320 ಕಿ.ಮೀ. 

92. ಜಗತ್ತಿನ ಅತೀ ದೊಡ್ಡ, ದ್ವೀಪ ' ಸಮೂಹ ಯಾವುದು?
(1) ಅಂಡಮಾನ್ ಮತ್ತು ನಿಕೋಬಾರ್
(2) ಮಲೇಷಿಯಾ
(3) ಇಂಡೋನೇಷಿಯಾ
(4) ಮಾಲ್ಡೀವ್ಸ್


ಸರಿಯಾದ ಉತ್ತರ: (3) ಇಂಡೋನೇಷಿಯಾ 

93. ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೋಲಿಕೆಯಾಗುವುದಿಲ್ಲ?
(1) ಕೊಡಚಾದ್ರಿ ಬೆಟ್ಟ - ಶಿವಮೊಗ್ಗ
(2) ಮುಳ್ಳಯ್ಯನಗಿರಿ ಬೆಟ್ಟ - ಚಿಕ್ಕಮಂಗಳೂರು
(3) ಶಿವಗಂಗೆ ಬೆಟ್ಟ - ತುಮಕೂರು
(4) ಪುಷ್ಪಗಿರಿ ಬೆಟ್ಟ - ಕೊಡಗು


ಸರಿಯಾದ ಉತ್ತರ: (3) ಶಿವಗಂಗೆ ಬೆಟ್ಟ - ತುಮಕೂರು 

94. ಉಷ್ಣವಲಯ ಕಾಡುಗಳು ದಟ್ಟವಾಗಿವೆ ; ಕಾರಣ
(1) ವನ್ಯ ಪ್ರಾಣಿಗಳು
(2) ಅತಿಯಾದ ಉಷ್ಣತೆ ಮತ್ತು ಕಡಿಮೆ ಮಳೆ
(3) ಕಡಿಮೆ ಉಷ್ಣಾಂಶ ಮತ್ತು ಕಡಿಮೆ ಮಳೆ
(4) ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ 


ಸರಿಯಾದ ಉತ್ತರ : (4) ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ  

95. ಈ ಕೆಳಗಿನವುಗಳಲ್ಲಿ ಯಾವ ಒಂದು ಜೋಡಿಯು ಸರಿಯಾಗಿ ಹೊಂದಾಣಿಕೆಯಾಗಿರುವುದಿಲ್ಲ?
(1) ಜಾಗತಿಕ ನಾಗರಿಕ ದಿನ - ಜೂನ್ 8
(2) ಜಾಗತಿಕ ಅರಣ್ಯ ದಿನ - ಮಾರ್ಚ್ 21
(3) ಭೂಮಿ ದಿನ - ಏಪ್ರಿಲ್ 22
(4) ಜಾಗತಿಕ ಜನಸಂಖ್ಯೆ ದಿನ - ಜುಲೈ 25


ಸರಿಯಾದ ಉತ್ತರ : (4) ಜಾಗತಿಕ ಜನಸಂಖ್ಯೆ ದಿನ - ಜುಲೈ 25

96. ಏಳು ಬೆಟ್ಟಗಳ ನಗರ ಯಾವುದು?
(1) ಲಂಡನ್
(2) ರೋಮ್
(3) ನ್ಯೂಯಾರ್ಕ್‌
(4) ಟೋಕಿಯೋ


ಸರಿಯಾದ ಉತ್ತರ : (2) ರೋಮ್ 

97, ಕೆಳಗಿನ ಪಟ್ಟಿ-1 (ಬೆಳೆಗಳು) ಮತ್ತು ಪಟ್ಟಿ-II
(ರಾಜ್ಯದ ಹೆಸರು) ಹೊಂದಿಸಿ, ಕೆಳಗೆ ಕೊಟ್ಟಿರುವ
ಸಂಕೇತಗಳಿಂದ ಸರಿಯಾದ ಆಯ್ಕೆ ಮಾಡಿ.
          ಪಟ್ಟಿ-1                              ಪಟ್ಟಿ-II
       (ಬೆಳೆಗಳು)                        (ರಾಜ್ಯಗಳು)
(A) ಕಬ್ಬು -                         (i) ಕರ್ನಾಟಕ
(B) ತೆಂಗು -                       (ii) ಮಹಾರಾಷ್ಟ್ರ
(C) ಕಾಫೀ -                      (iii) ಆಂಧ್ರ ಪ್ರದೇಶ
(D) ಶೇಂಗಾ (ನೆಲಗಡಲೆ) - (iv) ಕೇರಳ
            ಸಂಕೇತಗಳು :
      (A)   (B)  (C)   (D)
(1) (ii)   (iv)  (iii)   (i)
(2) (iv)  (ii)   (iii)   (i)
(3) (ii)  (iv)    (i)    (iii)
(4) (iv) (ii)    (i)     (iii)


ಸರಿಯಾದ ಉತ್ತರ: (3) (ii) (iv) (i) (iii)

98. ಕರ್ನಾಟಕದ ಪೂರ್ವ ಪಶ್ಚಿಮದ ಅಗಲವೆಷ್ಟು?
(1) 400 ಕಿ.ಮೀ.
(2) 350 ಕಿ.ಮೀ.
(3) 300 ಕಿ.ಮೀ.
(4) 375 ಕಿ.ಮೀ.

ಸರಿಯಾದ ಉತ್ತರ : (1) 400 ಕಿ.ಮೀ. 

99. ಈ ಕೆಳಗಿನವುಗಳಲ್ಲಿ ಒಂದು ನದಿ ಸಮಭಾಜಕ ವೃತ್ತವನ್ನು 2 ಸಲ ಹಾಯ್ದು ಹೋಗುವುದು.
(1) ಕಾಂಗೋ ನದಿ
(2) ಅಮೇಜಾನ್ ನದಿ
(3) ನೈಜಿರ್ ನದಿ
(4) ನೈಲ್ ನದಿ


ಸರಿಯಾದ ಉತ್ತರ : (1) ಕಾಂಗೋ ನದಿ 

100. ಭಾರತೀಯ ಮ್ಯಾಂಗೋವ್ ಅರಣ್ಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆಯು ಸರಿಯಾಗಿಲ್ಲ?
(1) ಇದು ತೀರ ಪ್ರದೇಶಗಳಲ್ಲಿ ಕಂಡುಬರುವ ಉಬ್ಬರವಿಳಿತ ಕಾಡುಗಳು
(2) ಈ ರಾಯಲ್ ಬೆಂಗಾಲ್ ಕಾಡುಗಳು ಹುಲಿಗಳಿಗೆ ಪ್ರಸಿದ್ಧವಾಗಿದೆ
(3) ಇವುಗಳನ್ನು ಉಷ್ಣದೋಷಿತ ಸಸ್ಯವರ್ಗ ಎಂದು ಕರೆಯುತ್ತಾರೆ
(4) ಸುಂದರಿ ಮರಗಳಿಂದಾಗಿ ಇದನ್ನು ಸುಂದರಬನ ಎನ್ನುತ್ತಾರೆ


ಸರಿಯಾದ ಉತ್ತರ: (3) ಇವುಗಳನ್ನು ಉಷ್ಣದೋಷಿತ ಸಸ್ಯವರ್ಗ ಎಂದು ಕರೆಯುತ್ತಾರೆ  

Edutube Kannada ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ Edutube  Kannada ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area