ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Top-100 General Knowledge (GK) Question Answers in Kannada for All Competitive Exams-05

Top-100 General Knowledge (GK) Question Answers in  Kannada for All Competitive Exams-05

Top-100 General Knowledge (GK) Question Answers in  Kannada for All Competitive Exams-02





ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ (ಸಾಮಾನ್ಯ ಅಧ್ಯಯನ) ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-100 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Graduate Primary School Teachers Recruitment (GPSTR), and All Competitive Exams.




Edutube Kannada ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ Edutube Kannada ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ

1, ಬೌದ್ಧರ ಪವಿತ್ರ ಗ್ರಂಥಗಳಾದ ತ್ರಿಪಿಟಕಗಳನ್ನು ಯಾವ ಭಾಷೆಯಲ್ಲಿ ರಚಿಸಲಾಗಿದೆ ?
ಎ) ಪಾಳಿ
ಬಿ) ಪ್ರಾಕೃತ
ಸಿ) ಅರೆಬಿಕ್
ಡಿ) ಸಂಸ್ಕೃತ


ಸರಿಯಾದ ಉತ್ತರ: ಎ) ಪಾಳಿ

2. 'ವಿಷ್ಣು ಪುರಾಣ'ವು ಈ ಕೆಳಗಿನ ಯಾವ ಸಾಮ್ರಾಜ್ಯದ ಬಗ್ಗೆ ತಿಳಿಸುತ್ತದೆ ?
ಎ) ಗುಪ್ತರು
ಬಿ) ಮೌರ್ಯರು
ಸಿ) ಶಾತವಾಹನರು
ಡಿ) ವರ್ಧನರು


ಸರಿಯಾದ ಉತ್ತರ: ಬಿ) ಮೌರ್ಯರು 

3. ಭಾರತದ ಮೇಲೆ ದಾಳಿ ಮಾಡಿದ ಮೊದಲ ವಿದೇಶಿಗರು ಯಾರು ?
ಎ) ಅರಬ್ಬರು
ಬಿ) ಗ್ರೀಕರು
ಸಿ) ಪರ್ಶಿಯನ್ನರು
ಡಿ) ಕುಶಾನರು


ಸರಿಯಾದ ಉತ್ತರ : ಸಿ) ಪರ್ಶಿಯನ್ನರು 

4. ಚೀನಿಯರಿಗಾಗಿ ಮೃಗಶಿಕವನದಲ್ಲಿ ಒಂದು ಬೌದ್ಧ ಸಂಘ ರಾಮವನ್ನು ನಿರ್ಮಿಸಿದ ಗುಪ್ತರ ದೊರೆ ಯಾರು ?
ಎ) ಸಮುದ್ರಗುಪ್ತ
ಬಿ) ಚಂದ್ರಗುಪ್ತ-II
ಸಿ) ಶ್ರೀಗುಪ್ತ
ಡಿ) ಕುಮಾರಗುಪ್ತ


ಸರಿಯಾದ ಉತ್ತರ : ಸಿ) ಶ್ರೀಗುಪ್ತ

5. ಕಿತಾಬ್-ಉರ್-ರಹಲಾ ಎಂಬ ಕೃತಿಯನ್ನು ರಚಿಸಿದವರು ಯಾರು ?
ಎ) ಅಮೀರಖುಸ್ತು
ಬಿ) ಬರೌನಿ
ಸಿ) ಅಬುಲ್ ಫಜಲ್
ಡಿ) ಇಬನ್ ಬತೂತಾ 


ಸರಿಯಾದ ಉತ್ತರ: ಡಿ) ಇಬನ್ ಬತೂತಾ

6. ಎವಾಪೊರೈಟ್ಸ್ (Evaporites) ಎಂದರೆ ?
ಎ) ಒಂದು ಶಿಲೆ
ಬಿ) ಒಂದು ಉಲ್ಕಾಶಿಲೆ
ಸಿ) ಒಂದು ಉಪ್ಪು ನೀರಿನ ಫ್ಯಾನ್
ಡಿ) ಒಂದು ಬಾಷ್ಪಮಾಪಕ


ಸರಿಯಾದ ಉತ್ತರ: ಎ) ಒಂದು ಶಿಲೆ 

7. ವ್ಯಾಲೆಸ್ ಲೈನ್ ಈ ಕೆಳಗಿನ ಯಾವ ಪರಿಸರ ವಲಯವನ್ನು ಬೇರ್ಪಡಿಸುತ್ತದೆ ?
ಎ) ಏಷ್ಯಾ & ಆಫ್ರಿಕಾ
ಬಿ) ಏಷ್ಯಾ & ಯೂರೋಪ್
ಸಿ) ಏಷ್ಯಾ & ಆಸ್ಟ್ರೇಲಿಯಾ
ಡಿ) ಆಸ್ಟ್ರೇಲಿಯಾ & ನ್ಯೂಜಿಲೆಂಡ್



ಸರಿಯಾದ ಉತ್ತರ: ಸಿ) ಏಷ್ಯಾ & ಆಸ್ಟ್ರೇಲಿಯಾ 

8. ವಿಕ್ಟೋರಿಯಾ ಸರೋವರವನ್ನು ಈ ಕೆಳಗಿನ ಯಾವ ದೇಶ ಸುತ್ತುವರೆದಿಲ್ಲ ?
ಎ) ಉಗಾಂಡಾ
ಬಿ) ರ್ವಾಂಡಾ (ರವಾಂಡಾ)
ಸಿ) ಕಿನ್ಯಾ
ಸಿ) ತಾಂಜೇನಿಯಾ


ಸರಿಯಾದ ಉತ್ತರ : ಬಿ) ರ್ವಾಂಡಾ (ರವಾಂಡಾ) 

9. ಮಿಥೇನ್ ಅನಿಲವು ಯಾವ ಗ್ರಹದ ನೀಲಿಬಣ್ಣಕ್ಕೆ ಕಾರಣವಾಗಿದೆ?
ಎ) ಶುಕ್ರ
ಬಿ) ಶನಿ
ಸಿ) ಯುರೇನಸ್
ಡಿ) ನೆಪ್ಚೂನ್ 

ಸರಿಯಾದ ಉತ್ತರ : ಡಿ) ನೆಪ್ಚೂನ್ 

10 ಕಾಳಮ್ಮವಾಡಿ ಜಲಾಶಯ ಯಾವ ನದಿಗೆ ಕಟ್ಟಲಾಗಿದೆ ?
ಎ) ಪಂಚಗಂಗಾ
ಬಿ) ಮಹದಾಯಿ
ಸಿ) ದೂದ್ ಗಂಗಾ
ಡಿ) ಗೋದಾವರಿ


ಸರಿಯಾದ ಉತ್ತರ : ಸಿ) ದೂದ್ ಗಂಗಾ 


11. ಭಾರತ ಸಂವಿಧಾನದ 371-G, ವಿಧಿಯಲ್ಲಿರುವ ವಿಶೇಷ ನಿಬಂಧನೆಗಳು ಯಾವ ರಾಜ್ಯಕ್ಕೆ ಸಂಬಂಧಿಸಿದೆ ?
ಎ) ಗೋವಾ
ಬಿ) ಜಾರ್ಖಂಡ್
ಸಿ) ಮಿಜೋರಾಂ
ಡಿ) ನಾಗಾಲ್ಯಾಂಡ್


ಸರಿಯಾದ ಉತ್ತರ : ಸಿ) ಮಿಜೋರಾಂ 

12. ಸಂವಿಧಾನದ ಯಾವ ವಿಧಿಯು ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸಲು ಸ್ವಾತಂತ್ರ್ಯವನ್ನು ನೀಡುತ್ತದೆ ?
ಎ) 25ನೇ ವಿಧಿ
ಬಿ) 26ನೇ ವಿಧಿ
ಸಿ) 27ನೇ ವಿಧಿ
ಡಿ) 28ನೇ ವಿಧಿ


ಸರಿಯಾದ ಉತ್ತರ: ಬಿ) 26ನೇ ವಿಧಿ

13. ಹೊಸ ಲೋಕಸಭೆಯನ್ನು ಆಯ್ಕೆ ಮಾಡಿದ ನಂತರ
ಅಸ್ತಿತ್ವದಲ್ಲಿರುವ ಲೋಕಸಭೆಯ ಕೊನೆಯ ಅಧಿವೇಶನವನ್ನು ಏನೆಂದು ಕರೆಯಲಾಗುತ್ತದೆ ?
ಎ) Under Duck Session
ಬಿ) Outer Duck Session
ಸಿ) Lame Duck Session
ಡಿ) None of above


ಸರಿಯಾದ ಉತ್ತರ : ಸಿ) Lame Duck Session    

14. ಕೆಳಗಿನವುಗಳಲ್ಲಿ ಯಾವ ಹೇಳಿಕೆ ಸರಿಯಾಗಿಲ್ಲ ?
ಎ) ರಾಜ್ಯಸಭೆಯಲ್ಲಿ ಹಣಕಾಸಿನ ಮಸೂದೆಯನ್ನು ಮೊದಲು ಮಂಡಿಸುವಂತಿಲ್ಲ
ಬಿ) ರಾಜ್ಯ ಸಭೆಗೆ ಸಂವಿಧಾನ ತಿದ್ದುಪಡಿಯನ್ನು ತಿರಸ್ಕರಿಸುವ ಅಧಿಕಾರವಿಲ್ಲ
ಸಿ) ರಾಜ್ಯಸಭೆಗೆ ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ಅಂಗೀಕರಿಸುವ ಅಧಿಕಾರವಿಲ್ಲ
ಡಿ) ರಾಜ್ಯಸಭೆಗೆ ಹಣಕಾಸಿನ ಮಸೂದೆಗೆ ಶಿಫಾರಸ್ಸು ಮಾಡುವ ಅಧಿಕಾರ ಇದೆ.


ಸರಿಯಾದ ಉತ್ತರ : ಬಿ) ರಾಜ್ಯ ಸಭೆಗೆ ಸಂವಿಧಾನ ತಿದ್ದುಪಡಿಯನ್ನು ತಿರಸ್ಕರಿಸುವ ಅಧಿಕಾರವಿಲ್ಲ  

15. ತನ್ನ ಹುದ್ದೆಯನ್ನು ತಪ್ಪಾಗಿ ಮತ್ತು ಕಾನೂನು ಬಾಹೀರವಾಗಿ ಹೊಂದಿರುವ ವ್ಯಕ್ತಿಯ ವಿರುದ್ಧ ಹೊರಡಿಸುವ ರಿಟ್ ?
ಎ) ಹೆಬಿಯಸ್ ಕಾರ್ಪಸ್
ಬಿ) ಮ್ಯಾಂಡಮಸ್
ಸಿ) ಸರ್ಷಿಯೋರಾರಿ
ಡಿ) ಕೋ-ವಾರಂಟ್ 


ಸರಿಯಾದ ಉತ್ತರ : ಡಿ) ಕೋ-ವಾರಂಟ್ 

16. ಸಾಮಾನ್ಯವಾಗಿ ಮಾನವನ ರಕ್ತವು ?
ಎ) ಕ್ಷಾರಿಯ
ಬಿ) ಆಮೀಯ
ಸಿ) ತಟಸ್ಥ
ಡಿ) ಮೇಲಿನ ಯಾವುದೂ ಅಲ್ಲ


ಸರಿಯಾದ ಉತ್ತರ : ಎ) ಕ್ಷಾರಿಯ 

17. ಸಿಸ್ಟೈಟಿಸ್ ಎಂಬ ಸೋಂಕು ಯಾವ ಅಂಗಕ್ಕೆ ಸಂಬಂಧಿಸಿದೆ ?
ಎ) ಮೂತ್ರಕೋಶ
ಬಿ) ಲಿವರ್
ಸಿ) ಪ್ಯಾಂಕ್ರಿಯಾಸ್
ಡಿ) ಶ್ವಾಸಕೋಶ


ಸರಿಯಾದ ಉತ್ತರ: ಎ) ಮೂತ್ರಕೋಶ 

18‌. ಪರಮಣುವಿನ ರಾಸಾಯನಿಕ ವರ್ತನೆಯು ಯಾವುದನ್ನು ಅವಲಂಬಿಸಿರುತ್ತದೆ ?
ಎ) ನ್ಯೂಕ್ಲಿಯಸ್‌ನಲ್ಲಿರುವ ಪ್ರೋಟಾನಗಳ ಸಂಖ್ಯೆ
ಬಿ) ಅದರ ದ್ರವ್ಯರಾಶಿಯ ಸಂಖ್ಯೆ
ಸಿ) ನ್ಯೂಕ್ಲಿಯಸ್‌ನ್ನು ಸುತ್ತುತ್ತಿರುವ ಎಲೆಕ್ಟ್ರಾನ್‌ಗಳ ಸಂಖ್ಯೆ
ಡಿ) ನ್ಯೂಕ್ಲಿಯಸ್‌ನಲ್ಲಿರುವ ನ್ಯೂಟ್ರಾನ್‌ಗಳ ಸಂಖ್ಯೆ


ಸರಿಯಾದ ಉತ್ತರ : ಸಿ) ನ್ಯೂಕ್ಲಿಯಸ್‌ನ್ನು ಸುತ್ತುತ್ತಿರುವ ಎಲೆಕ್ಟ್ರಾನ್‌ಗಳ ಸಂಖ್ಯೆ 

19. ಸಮುದ್ರದಲ್ಲಿ ಮುಳುಗುವ ವಸ್ತುಗಳನ್ನು ಕಂಡು ಹಿಡಿಯುವ ಸಾಧನ ?
ಎ) ರೆಡಾರ್
ಬಿ) ಸೋನಾರ್
ಸಿ) ಲೇಸರ್
ಡಿ) ಯಾವುದೂ ಅಲ್ಲ


ಸರಿಯಾದ ಉತ್ತರ: ಬಿ) ಸೋನಾರ್ 

20. ನೈಕ್ರೋಮ್ ಕೆಳಗಿನ ಯಾವ ಮಿಶ್ರಲೋಹವನ್ನು ಹೊಂದಿದೆ?
ಎ) ಕಬ್ಬಿಣ, ನಿಕ್ಕಲ್, ಕಾರ್ಬನ
ಬಿ) ಕಬ್ಬಿಣ ನಿಕ್ಕಲ್, ಕ್ರೋಮಿಯಮ್
ಸಿ) ಕಬ್ಬಿಣ ಮತ್ತು ಕಾರ್ಬನ
ಡಿ) ಅಲ್ಯೂಮಿನಿಯಂ, ಮೆಗ್ನಿಷಿಯಂ


ಸರಿಯಾದ ಉತ್ತರ: ಬಿ) ಕಬ್ಬಿಣ ನಿಕ್ಕಲ್, ಕ್ರೋಮಿಯಮ್ 


21. ಶಾಸನಬದ್ಧ ಲಿಕ್ವಿಡಿನ್ ಅನುಪಾತವನ್ನು ನಿರ್ಧರಿಸುವವರು ಯಾರು ?
ಎ) ಕೇಂದ್ರ ಸರ್ಕಾರ
ಬಿ) ಎಸ್.ಬಿ.ಆಯ್.
ಸಿ) ಆರ್.ಬಿ.ಆಯ್
ಡಿ) ನೀತಿ ಆಯೋಗ


ಸರಿಯಾದ ಉತ್ತರ : ಸಿ) ಆರ್.ಬಿ.ಆಯ್ 

22. ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಬ್ಯಾಂಕ್ ಏನು ಮಾಡಬೇಕು ?
ಎ) ರೆಪೋ ದರದಲ್ಲಿ ಹೆಚ್ಚಳ
ಬಿ) ರೆಪೋ ದರದಲ್ಲಿ ಕಡಿತ
ಸಿ) ಬ್ಯಾಂಕ್ ಬಡ್ಡಿದರದಲ್ಲಿ ಕಡಿತ
ಡಿ) ಮೇಲಿನ ಯಾವುದೂ ಅಲ್ಲ


ಸರಿಯಾದ ಉತ್ತರ: ಎ) ರೆಪೋ ದರದಲ್ಲಿ ಹೆಚ್ಚಳ 

23. ಭಾರತೀಯ ವಿದೇಶಿ ವ್ಯಾಪಾರ ಸಂಸ್ಥೆ (IIFT) ಎಲ್ಲಿದೆ ?
ಎ) ಮುಂಬೈ
ಬಿ) ದೆಹಲಿ
ಸಿ) ಹೈದ್ರಾಬಾದ್
ಡಿ) ಅಹಮದಾಬಾದ್


ಸರಿಯಾದ ಉತ್ತರ: ಬಿ) ದೆಹಲಿ 

24. ಆಗಾಗ ಸುದ್ದಿಯಾಗುವ ಆ್ಯಂಬರ್ ಬಾಕ್ಸ್, ಬ್ಲೂ ಬಾಕ್ಸ್, ಗ್ರೀನ್ ಬಾಕ್ಸ್ ಗಳು ಯಾವುದಕ್ಕೆ ಸಂಬಂಧಿಸಿವೆ?
ಎ) WTO ವ್ಯವಹಾರಗಳು
ಬಿ) SAARC ವ್ಯವಹಾರಗಳು
ಸಿ) UNFCCC ವ್ಯವಹಾರಗಳು
ಡಿ) FTA ಮೇಲೆ ಭಾರತ- EUಗಳ ಸಂದಾನಗಳು


ಸರಿಯಾದ ಉತ್ತರ : ಎ) WTO ವ್ಯವಹಾರಗಳು 

25. ಅರ್ಥ ವಿಜ್ಞಾನಕ್ಕೆ ಮೊದಲು ನೊಬೆಲ್ ಬಹುಮಾನವನ್ನು ನೀಡಲಾದ ವರ್ಷ?
ಎ) 1951
ಬಿ) 1963
ಸಿ) 1967
ಡಿ) 1969 


ಸರಿಯಾದ ಉತ್ತರ: ಡಿ) 1969  

26. ಪಿತೋರಾ ಚಿತ್ರಕಲೆ ಯಾವ ರಾಜ್ಯದ ಜಾನಪದ ಚಿತ್ರಕಲೆ ?
ಎ) ಪಶ್ಚಿಮ ಬಂಗಾಳ
ಬಿ) ಬಿಹಾರ
ಸಿ) ಗುಜರಾತ
ಡಿ) ಮಹಾರಾಷ್ಟ್ರ


ಸರಿಯಾದ ಉತ್ತರ : ಸಿ) ಗುಜರಾತ 

27. ಭಾರತದ ಚಲನಚಿತ್ರ ಹಾಗೂ ದೂರದರ್ಶನ ಸಂಸ್ಥೆ ಇರುವುದು-
ಎ) ಪೂನಾ
ಬಿ) ರಾಜಕೋಟ
ಡಿ) ಪೆರಂಬೂರು
ಸಿ) ಪಿಂಪ್ರಿ


ಸರಿಯಾದ ಉತ್ತರ: ಎ) ಪೂನಾ 

28. ಹಟ್ಟಿ ಚಿನ್ನದ ಗಣಿ ಎಲ್ಲಿದೆ ?
ಎ) ಬೀದರ
ಬಿ) ಗದಗ
ಸಿ) ರಾಯಚೂರು
ಡಿ) ಕೋಲಾರ 


ಸರಿಯಾದ ಉತ್ತರ : ಸಿ) ರಾಯಚೂರು 

29. ಪ್ರಖ್ಯಾತ ಶಾಸ್ತ್ರೀಯ ಸಂಗೀತಗಾರರಾದ ಅಮ್ಮದ್ ಅಲಿ ಖಾನ ನುಡಿಸುವ ವಾದ್ಯ ಯಾವುದು ?
ಎ) ಶಹನಾಯಿ
ಬಿ) ಕೊಳಲು
ಸಿ) ಸರೋದ
ಡಿ) ತಬಲಾ


ಸರಿಯಾದ ಉತ್ತರ : ಸಿ) ಸರೋದ    

30. 1992 ರಲ್ಲಿ ಕರ್ನಾಟಕ ರತ್ನ ಪುರಸ್ಕೃತರಾದ ಮೊದಲ ವ್ಯಕ್ತಿ
ಎ) ಪಂ. ಭೀಮಸೇನ ಜೋಶಿ
ಬ) ವೀರೇಂದ್ರ ಹೆಗ್ಗಡೆ
ಸಿ) ಡಾ. ದೇವಿ ಶೆಟ್ಟಿ
ಡಿ) ಕುವೆಂಪು 


ಸರಿಯಾದ ಉತ್ತರ : ಡಿ) ಕುವೆಂಪು   


31. ಮೈಸೂರಿನಲ್ಲಿ ಹಸ್ತ ಪ್ರತಿಗಳ ಸಂಗ್ರಹಾಲಯ ಓರಿಯಂಟಲ್ ಮ್ಯಾನು ಸ್ಕ್ರಿಪ್ಟ್ ಲೈಬ್ರರಿ ಸ್ಥಾಪಿಸಿದವರು ಯಾರು?
ಎ) ಕೆ. ಶೇಷಾದ್ರಿ ಅಯ್ಯರ್
ಬಿ) ರಂಗಾಚಾರ್ಯ
ಸಿ) ಮಿರ್ಜಾ ಇಸ್ಮಾಯಲ್
ಡಿ) ಪೂರ್ಣಯ್ಯ


ಸರಿಯಾದ ಉತ್ತರ : ಎ) ಕೆ. ಶೇಷಾದ್ರಿ ಅಯ್ಯರ್ 

32. ಆರ್ಯನ್ ಪೇಶ್ವ ಎಂದು ಯಾರನ್ನು ಕರೆಯುತ್ತಾರೆ ?
ಎ) 2ನೇ ಸಾಯಜಿರಾವ್ ಗಾಯಕ್ವಾಡ್
ಬಿ) ರಾಜಮಹೇಂದ್ರ ಪ್ರತಾಪಸಿಂಹ
ಸಿ) ಶ್ಯಾಮಜಿ ಕೃಷ್ಣಶರ್ಮ
ಡಿ) ಮನಬೇಂದ್ರನಾಥ್ ರಾಯ್



ಸರಿಯಾದ ಉತ್ತರ: ಬಿ) ರಾಜಮಹೇಂದ್ರ ಪ್ರತಾಪಸಿಂಹ 

33. ಕೆಳಗಿನ ಯಾವ ವ್ಯಕ್ತಿಗೆ 'ಸಾಚ್ ಬಾದ್ ಷಾ' ಎಂಬ ಬಿರುದು ಇದೆ ?
ಎ) ಗುರು ಗೋವಿಂದ ಸಿಂಗ್
ಬಿ) ಅರ್ಜುನದೇವ
ಸಿ) ಹರಗೋವಿಂದ
ಡಿ) ರಾಮದಾಸ


ಸರಿಯಾದ ಉತ್ತರ : ಸಿ) ಹರಗೋವಿಂದ  

34. ಈ ಕೆಳಗಿನ ಯಾವ ವ್ಯಕ್ತಿಗೆ ಭಾರತದಲ್ಲಿ ದಾರ್-ಉಲ್-ಇಸ್ಲಾಂ ಅಂದರೆ ಇಸ್ಲಾಮಿಕ್ ನಾಡನ್ನು ಸ್ಥಾಪಿಸುವುದೇ ಜೀವಮಾನದ ಆಸೆಯಾಗಿತ್ತು ?
ಎ) ಬಾಬರ್
ಬಿ) ಔರಂಗ್‌ಜೇಬ್
ಸಿ) ಜಹಂಗೀರ್
ಡಿ)ಷಹಜಹಾನ್


ಸರಿಯಾದ ಉತ್ತರ : ಬಿ) ಔರಂಗ್‌ಜೇಬ್ 

35. 2ನೇ ಅಲೆಕ್ಸಾಂಡರ್ ಎಂದು ತನ್ನ ನಾಣ್ಯಗಳ ಮೇಲೆ ಟಂಕಿಸಿದ ಬಹುಮನಿ ಅರಸ ಯಾರು ?
ಎ) 2ನೇ ಮಹಮದ್ ಷಾ
ಬಿ) ಪಿರೋಜಷಾ
ಸಿ) ಅಲ್ಲಾವುದ್ದೀನ ಹಸನಗಂಗ್
ಡಿ) ಮಹಮದ ಗವಾನ್


ಸರಿಯಾದ ಉತ್ತರ : ಸಿ) ಅಲ್ಲಾವುದ್ದೀನ ಹಸನಗಂಗ್ 

36. ರಾಜ್ಯಸಭೆಯು ಹಣಕಾಸು ಮಸೂದೆಗೆ ತನ್ನ ಒಪ್ಪಿಗೆಯನ್ನು ಎಷ್ಟು ದಿನಗಳವರೆಗೆ ತಡೆಹಿಡಿಯಬಹುದು?
ಎ) 14 ದಿನಗಳು
ಬಿ) 15 ದಿನಗಳು
ಸಿ) 30 ದಿನಗಳು
ಡಿ) 6 ತಿಂಗಳು


ಸರಿಯಾದ ಉತ್ತರ : ಎ) 14 ದಿನಗಳು 

37. ಈ ಮುಂದಿನ ಯಾವುದು Ex-Situ ಸಂರಕ್ಷಣೆಯಾಗುತ್ತದೆ.
ಎ) ವನ್ಯಜೀವಿಧಾಮ
ಬಿ) ಸೀಡ್ ಬ್ಯಾಂಕ್
ಸಿ) ಸೇಕ್ರೆಡ್ ಗ್ರುಫ್ಟ್
ಡಿ) ರಾಷ್ಟ್ರೀಯ ಉದ್ಯಾನವನ


ಸರಿಯಾದ ಉತ್ತರ: ಬಿ) ಸೀಡ್ ಬ್ಯಾಂಕ್ 

38. ಡೈನೋಸಾರಗಳು ಈ ಯುಗದಲ್ಲಿದ್ದವು ?
ಎ) ಪೇಲಿಯೊಜೋಯಿಕ್ ಯುಗ
ಬಿ) ಸಿನೋಜೋಯಿಕ್ ಯುಗ
ಸಿ) ಮೀಸೊಜೋಯಿಕ್ ಯುಗ
ಡಿ) ಪ್ರೊಟೆರೊಜೋಯಿಕ್ ಯುಗ


ಸರಿಯಾದ ಉತ್ತರ : ಸಿ) ಮೀಸೊಜೋಯಿಕ್ ಯುಗ 

39. ಭಾರತದಲ್ಲಾದ ಪ್ರಮುಖ ಕೃಷಿ ಕ್ರಾಂತಿಗಳನ್ನು ಹೊಂದಿಸಿ ಬರೆಯಿರಿ
ಎ) ಚಿನ್ನದ ಕ್ರಾಂತಿ      1. ಮೀನಿನ ಉತ್ಪಾದನೆ
ಬಿ) ಬೂದು ಕ್ರಾಂತಿ     2. ತೈಲಬೀಜಗಳ ಉತ್ಪಾದನೆ
ಸಿ) ನೀಲಿ ಕ್ರಾಂತಿ       3. ಸಿಗಡಿ ಉತ್ಪಾದನೆ
ಡಿ) ಹಳದಿ ಕ್ರಾಂತಿ      4. ಆಲುಗಡ್ಡೆ ಉತ್ಪಾದನೆ
ಇ) ಗುಲಾಬಿ ಕ್ರಾಂತಿ   5. ಹಣ್ಣಿನ ಉತ್ಪಾದನೆ
ಎಫ್) ದುಂಡುಕ್ರಾಂತಿ 6. ರಸಗೊಬ್ಬರ ಉತ್ಪಾದನೆ
    ಎ ಬಿ ಸಿ ಡಿ ಇ ಎಫ್
ಎ) 3 4 2 5 1 6
ಬಿ) 5 6 1 2 3 4
ಸಿ) 4 3 2 1 6 5
ಡಿ) 5 6 3 4 2 1


ಸರಿಯಾದ ಉತ್ತರ: ಬಿ) 5 6 1 2 3 4   

40. ಭಾರತದ ಸಂವಿಧಾನದ ಪ್ರಕಾರ ಕೆಳಗಿನವುಗಳಲ್ಲಿ ಯಾವುದು ದೇಶದ ಆಡಳಿತಕ್ಕೆ ಆಧಾರವಾಗಿದೆ ?
ಎ) ಮೂಲಭೂತ ಹಕ್ಕುಗಳು
ಬಿ) ಮೂಲಭೂತ ಕರ್ತವ್ಯಗಳು
ಸಿ) ರಾಜ್ಯನೀತಿಯ ನಿರ್ದೇಶಕ ತತ್ವಗಳು
ಡಿ) ಮೂಲಭೂತ ಹಕ್ಕುಗಳು & ಮೂಲಭೂತ ಕರ್ತವ್ಯಗಳು


ಸರಿಯಾದ ಉತ್ತರ: ಸಿ) ರಾಜ್ಯನೀತಿಯ ನಿರ್ದೇಶಕ ತತ್ವಗಳು  


41. ಕೇಂದ್ರ ಹಾಗೂ ರಾಜ್ಯಗಳ ನಡುವೆ ಉಂಟಾಗುವ ವಿವಾದಗಳನ್ನು ಬಗೆಹರಿಸುವ ಸುಪ್ರಿಂ ಕೋರ್ಟ್‌ನ ಅಧಿಕಾರ ಈ ವ್ಯಾಪ್ತಿಗೆ ಸಂಬಂಧಿಸಿದ್ದು
ಎ) ಸಲಹಾ ಅಧಿಕಾರ ವ್ಯಾಪ್ತಿ
ಬಿ) ಮೂಲ ಅಧಿಕಾರ ವ್ಯಾಪ್ತಿ
ಸಿ) ಅಫೀಲು ಅಧಿಕಾರ ವ್ಯಾಪ್ತಿ
ಡಿ) ಸಂವಿಧಾನಿಕ ಅಧಿಕಾರ ವ್ಯಾಪ್ತಿ


ಸರಿಯಾದ ಉತ್ತರ: ಬಿ) ಮೂಲ ಅಧಿಕಾರ ವ್ಯಾಪ್ತಿ 

42. ಪ್ರತಿ ಎರಡು ವರ್ಷಗಳಿಗೊಮ್ಮೆ ನಿವೃತ್ತರಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು ?
ಎ) 1/4 ಭಾಗ
ಬಿ) 1/2 ಭಾಗ
ಸಿ) 1/3 ಭಾಗ
ಡಿ) 1/6 ಭಾಗ


ಸರಿಯಾದ ಉತ್ತರ: ಸಿ) 1/3 ಭಾಗ

43. ದೆಹಲಿಗೆ ರಾಜ್ಯದ ಸ್ಥಾನಮಾನವನ್ನು ನೀಡಲಾದ ವರ್ಷ ಯಾವುದು ?
ಎ) 1993
ಬಿ) 1994
ಸಿ) 1995
ಡಿ) 1996


ಸರಿಯಾದ ಉತ್ತರ: ಎ) 1993 

44. ಸಂವಿಧಾನದ ಯಾವ ಅನುಚ್ಛೇಧವು ಅಂತಾರಾಷ್ಟ್ರೀಯ ಕೌಲುಗಳು, ಒಪ್ಪಂದಗಳು ಮತ್ತು ಒಡಂಬಡಿಕೆಗಳನ್ನು ಮಾಡುವ ಅಧಿಕಾರ ಸಂಸತ್ತಿಗಿರುವುದನ್ನು ಪ್ರತಿಬಿಂಬಿಸುತ್ತದೆ.
ಎ) ಅನುಚ್ಛೇಧ 372 (1)
ಬಿ) ಅನುಚ್ಛೇಧ 114 (1)
ಸಿ) ಅನುಚ್ಛೇದ 286 (1)
ಡಿ) ಅನುಚ್ಛೇಧ 253 


ಸರಿಯಾದ ಉತ್ತರ : ಡಿ) ಅನುಚ್ಛೇಧ 253 

45. ಸಂಸತ್ ಸದಸ್ಯರ ಅನರ್ಹತೆಯ ವ್ಯಾಜ್ಯವು ಇವರ ಮುಂದೆ ಮಂಡಿಸಲಾಗುತ್ತದೆ ?
ಎ) ಚುನಾವಣಾ ಆಯೋಗ
ಬಿ) ಭಾರತದ ಸರ್ವೋಚ್ಛ ನ್ಯಾಯಾಲಯ
ಸಿ) ಲೋಕಸಭಾ ಸ್ಪೀಕರ್
ಡಿ) ರಾಷ್ಟ್ರಪತಿ


ಸರಿಯಾದ ಉತ್ತರ : ಸಿ) ಲೋಕಸಭಾ ಸ್ಪೀಕರ್  

46. ಕಾಲ್ಚೆಂಡು ಆಕಾರದಲ್ಲಿರುವ ಪ್ರಖ್ಯಾತ ಇಂಗಾಲದ ಅತೀ ಸೂಕ್ಷ ನ್ಯಾನೋ ಕಣ ಯಾವುದು ?
ಎ) ವಜ್ರ
ಬಿ) ಗ್ರಾಫೈಟ್
ಸಿ) ಪುಲರೀನ್
ಡಿ) ಇಂಗಾಲ ನ್ಯಾನೋ ಟ್ಯೂಬ್‌ಗಳು


ಸರಿಯಾದ ಉತ್ತರ: ಸಿ) ಪುಲರೀನ್ 

47. ಕೆಳಗಿನ ಯಾವುದು ಗಾಜನ್ನು ಕತ್ತರಿಸಲು ಬಳಸಲಾಗುತ್ತದೆ?
ಎ) ಸಿಲಿಕಾನ್ ಡೈಆಕ್ಸೆಡ್
ಬಿ) ಸಿಲಿಕಾನ್
ಸಿ) ಸಿಲಿಕಾನ್ ಹೈಡ್ರಾಕ್ಸೆಡ್
ಡಿ) ಸಿಲಿಕಾನ್ ಕಾರ್ಬೈಡ್ 


ಸರಿಯಾದ ಉತ್ತರ: ಡಿ) ಸಿಲಿಕಾನ್ ಕಾರ್ಬೈಡ್ 

48 ಬೆಸುಗೆಗಾರರು ಕನ್ನಡಕ ಅಥವಾ ಮುಖವಾಡವನ್ನೇಕೆ ಧರಿಸುತ್ತಾರೆ ?
ಎ) ಕಣ್ಣುಗಳನ್ನು ಅತಿನೇರಳೆ ಕಿರಣಗಳಿಂದ ರಕ್ಷಿಸಲು
ಬಿ) ಕಣ್ಣುಗಳನ್ನು ಅವಗೆಂಪು ಕಿರಣಗಳಿಂದ ರಕ್ಷಿಸಲು
ಸಿ) ಕಣ್ಣುಗಳನ್ನು ಸೂಕ್ಷ್ಮ ತರಂಗದಿಂದ ರಕ್ಷಿಸಲು
ಡಿ) ಕಣ್ಣುಗಳನ್ನು ಗಾಮಾ ಕಿರಣಗಳಿಂದ ರಕ್ಷಿಸಲು


ಸರಿಯಾದ ಉತ್ತರ : ಎ) ಕಣ್ಣುಗಳನ್ನು ಅತಿನೇರಳೆ ಕಿರಣಗಳಿಂದ ರಕ್ಷಿಸಲು  

49. ಸ್ನಾಯುಗಳ ಆಯಾಸವು ಈ ಕೆಳಗಿನ ಯಾವುದರ ಶೇಖರಣೆಯಿಂದ ಉಂಟಾಗುತ್ತದೆ ?
ಎ) ಪೈಗುವಿಕ್ ಆಮ್ಲ
ಬಿ) ಆಸಿಟಿಕ್ ಆಮ್ಲ
ಸಿ) ಲ್ಯಾಕ್ಟಿಕ್ ಆಮ್ಲ
ಡಿ) ಯೂರಿಕ್ ಆಮ್ಲ



ಸರಿಯಾದ ಉತ್ತರ: ಸಿ) ಲ್ಯಾಕ್ಟಿಕ್ ಆಮ್ಲ 

50. ಸಸ್ಯಗಳಿಗೆ ಆಹಾರವು ಈ ಮೂಲಕ ಸರಬರಾಜಾಗುತ್ತದೆ
ಎ) ಕಾರ್ಟೆಕ್
ಬಿ) ಎಪಿಡರ್ಮಿಸ್
ಸಿ) ಕೈಲಮ್
ಡಿ) ಪ್ಲೇಯಮ್ 


ಸರಿಯಾದ ಉತ್ತರ: ಡಿ) ಪ್ಲೇಯಮ್ 

Edutube Kannada ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ Edutube Kannada ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ


51. ಸರಣಿ ಪೂರ್ಣಗೊಳಿಸಿ 3, 7, 16, 35___
ಎ) 93
ಬಿ) 68
ಸಿ) 74
ಡಿ) 55


ಸರಿಯಾದ ಉತ್ತರ: ಸಿ) 74  

52. 2010ರಲ್ಲಿ ಕ್ರಿಸ್‌ಮಸ್ ದಿನಾಚರಣೆಯನ್ನು ಮಂಗಳವಾರ ಆಚರಿಸಲಾಯಿತು. ಹಾಗಾದರೆ ಅದೇ ತಿಂಗಳಿನ 2ನೇ ತಾರೀಖು ಯಾವ ವಾರ ?
ಎ) ರವಿವಾರ
ಬಿ) ಮಂಗಳವಾರ
ಸಿ) ಗುರುವಾರ
ಡಿ) ಶನಿವಾರ


ಸರಿಯಾದ ಉತ್ತರ: ಎ) ರವಿವಾರ 

53. ಪೂರ್ವಕ್ಕೆ ಮುಖ ಮಾಡಿ ಕುಳಿತಿರುವ ಒಂದು ಮಗು ಚೆಂಡು ಹಿಡಿಯುವ ಪ್ರಯತ್ನದಲ್ಲಿ ಒಮ್ಮೆ ಬಲಕ್ಕೆ, ನಂತರ ಬಲಕ್ಕೆ ಮತ್ತೊಮ್ಮೆ ಎಡಕ್ಕೆ ಮತ್ತೆ ಎಡಕ್ಕೆ ಕೊನೆಯಲ್ಲಿ ಬಲಕ್ಕೆ ತಿರುಗಿ ಚಂಡು ಹಿಡಿಯುವಲ್ಲಿ ಯಶಸ್ವಿಯಾಯಿತು. ಮಗು ಈಗ ಯಾವ ದಿಕ್ಕಿನ ಕಡೆ ಮುಖ ಮಾಡಿದೆ ?
ಎ) ದಕ್ಷಿಣ
ಬಿ) ಉತ್ತರ
ಸಿ) ಪೂರ್ವ
ಡಿ) ಪಶ್ಚಿಮ


ಸರಿಯಾದ ಉತ್ತರ: ಎ) ದಕ್ಷಿಣ   

54. ಒಂದು ಸಾಲಿನಲ್ಲಿ 56 ಜನ ವಿದ್ಯಾರ್ಥಿಗಳಿದ್ದಾರೆ. ರಾಜು ಆ ಸಾಲಿನ ಕೊನೆಯಿಂದ 23ನೇ ಸ್ಥಾನದಲ್ಲಿದ್ದಾನೆ. ಹಾಗಾದರೆ ಮೇಲಿನಿಂದ ಆತನ ಸ್ಥಾನವೆಷ್ಟು ?
ಎ) 23
ಬಿ) 44
ಸಿ) 33
ಡಿ) 34 



ಸರಿಯಾದ ಉತ್ತರ: ಡಿ) 34 

55. ಅಮರ ಒಂದು ಕೆಲಸವನ್ನು 20 ದಿನಗಳಲ್ಲಿ, ರಾಜು ಅದೇ ಕೆಲಸವನ್ನು 30 ದಿನಗಳಲ್ಲಿ ಹಾಗೂ ನವೀನ ಅದೇ ಕೆಲಸವನ್ನು 60 ದಿನಗಳಲ್ಲಿ ಮಾಡಬಲ್ಲನು. ಹಾಗಾದರೆ ಅಮರ, ರಾಜು ಮತ್ತು ನವೀನ ಒಟ್ಟಿಗೆ ಸೇರಿ ಎಷ್ಟು ದಿನಗಳಲ್ಲಿ ಅದೇ ಕೆಲಸವನ್ನು ಮಾಡಬಲ್ಲರು ?
ಎ) 20 ದಿನ
ಬಿ) 25 ದಿನ
ಸಿ) 10 ದಿನ
ಡಿ) 15 ದಿನ


ಸರಿಯಾದ ಉತ್ತರ : ಎ) ಇದು ಹಡಗುಗಳ ಮೇಲೆ ನಿಗಾ ಇಡುವುದಾಗಿದೆ   

56. ಒಂದು ತರಗತಿಯಲ್ಲಿರುವ 12 ವಿದ್ಯಾರ್ಥಿಗಳ ಸರಾಸರಿ ವಯಸ್ಸು 13 ವರ್ಷ ಆ ವಿದ್ಯಾರ್ಥಿಗಳೊಂದಿಗೆ ಒಬ್ಬ ಉಪನ್ಯಾಸಕರು ಬಂದು ಸೇರಿದರೆ ಸರಾಸರಿಯಲ್ಲಿ 1 ವರ್ಷ ಹೆಚ್ಚಾಗುತ್ತದೆ. ಹಾಗಾದರೆ ಬಂದು ಸೇರಿದ ಉಪನ್ಯಾಸಕರ ವಯಸ್ಸು ಎಷ್ಟು ?
ಎ) 52
ಬಿ) 84
ಸಿ) 26
ಡಿ) 32


ಸರಿಯಾದ ಉತ್ತರ:ಸಿ) 26 

57. 400 ಮೀಟರ್ ಉದ್ದದ ಒಂದು ರೈಲು ಪ್ರತಿ ಗಂಟೆಗೆ 90 ಕಿ.ಮೀ. ವೇಗದಂತೆ ಕ್ರಮಿಸುತ್ತದೆ. ಹಾಗಾದರೆ ನಿಂತಿರುವ ಒಬ್ಬ ವ್ಯಕ್ತಿಯನ್ನು ದಾಟಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ. ?
ಎ) 25 ಸೆಕೆಂಡ್
ಬಿ) 16 ಸೆಕೆಂಡ್
ಸಿ) 40 ಸೆಕೆಂಡ್
ಡಿ) 30 ಸೆಕೆಂಡ್


ಸರಿಯಾದ ಉತ್ತರ: ಬಿ) 16 ಸೆಕೆಂಡ್ 

58. 6 ಗಂಟೆ 50 ನಿಮಿಷವಾಗಿರುವ ಒಂದು ಗಡಿಯಾರವನ್ನು ಕನ್ನಡಿಯ ಮುಂದೆ ಹಿಡಿದಾಗ ಕನ್ನಡಿಯಲ್ಲಿ ಸಮಯ ಎಷ್ಟಾದಂತೆ ಕಂಡುಬರುತ್ತದೆ ?
ಎ) 5 ಗಂಟೆ 10 ನಿಮಿಷ
ಬಿ) 12 ಗಂಟೆ 50 ನಿಮಿಷ
ಸಿ) 1 ಗಂಟೆ 10 ನಿಮಿಷ
ಡಿ) 10 ಗಂಟೆ 5 ನಿಮಿಷ


ಸರಿಯಾದ ಉತ್ತರ: ಎ) 5 ಗಂಟೆ 10 ನಿಮಿಷ   

59. DELHI ಎಂಬ ಪದದಲ್ಲಿರುವ ಎಲ್ಲಾ ಅಕ್ಷರಗಳ ಕ್ರಮ ಯೋಜನೆ ಎಷ್ಟು ?
ಎ) 80
ಬಿ) 60
ಸಿ) 48
ಡಿ) 120 


ಸರಿಯಾದ ಉತ್ತರ: ಡಿ) 120 

60. ಭಾರತದಲ್ಲಿ ಸಿಬ್ಬರು ಖಡ್ಗವನ್ನು ಕೊಂಡೊಯ್ಯಲು ಅನುಮತಿಸಲಾಗಿದೆ. ಸಂವಿಧಾನದ ಯಾವ ಮೂಲಭೂತ ಹಕ್ಕುಗಳ ಅನ್ವಯ ಈ ಅನುಮತಿ ನೀಡಲಾಗಿದೆ ?
ಎ) ಸ್ವಾತಂತ್ರದ ಹಕ್ಕು
ಬಿ) ಧಾರ್ಮಿಕ ಸ್ವಾತಂತ್ರದ ಹಕ್ಕು
ಸಿ) ಜೀವನ ಹಕ್ಕು
ಡಿ) ಇವು ಯಾವುವು ಅಲ್ಲ


ಸರಿಯಾದ ಉತ್ತರ : ಬಿ) ಧಾರ್ಮಿಕ ಸ್ವಾತಂತ್ರದ ಹಕ್ಕು 


61. ಬಾಂಬೆ ಪ್ರೆಸಿಡೆನ್ಸಿಯ ಅಸೋಸಿಯೇಶನ್ ಸ್ಥಾಪಿಸಿದವರು ಯಾರು ?
ಎ) ದಾದಾಬಾಯಿ ನವರೋಜಿ
ಬಿ) ಸುರೇಂದ್ರನಾಥ ಬ್ಯಾನರ್ಜಿ
ಸಿ) ಆನಂದ ಮೋಹನ ಬೋಸ್
ಡಿ) ಪಿರೋಜ್ ಷಾ ಮೆಹ್ವಾ 


ಸರಿಯಾದ ಉತ್ತರ : ಡಿ) ಪಿರೋಜ್ ಷಾ ಮೆಹ್ವಾ 

62. 1938ರಲ್ಲಿ ಮೈಸೂರು ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದಾಗ ಅದರ ಮೊದಲ ಅಧ್ಯಕ್ಷರು ಯಾರಾಗಿದ್ದರು ?
ಎ) ಟಿ. ಸಿದ್ಧಲಿಂಗಯ್ಯ
ಬಿ) ಸಿದ್ಧಪ್ಪ ಕಂಬಳಿ
ಸಿ) ಹನುಮಂತರಾವ್ ದೇಶಪಾಂಡೆ
ಡಿ) ಗೋವಿಂದರಾವ್ ಯಾಳಗಿ


ಸರಿಯಾದ ಉತ್ತರ: ಎ) ಟಿ. ಸಿದ್ಧಲಿಂಗಯ್ಯ 

63. ಕೆಳಗಿನ ಯಾವ ವ್ಯಕ್ತಿಯನ್ನು ಉತ್ತರ ಭಾರತದ ಕಂದಾಯ ವ್ಯವಸ್ಥೆಯ ಜನಕ' ಎನ್ನುವರು?
ಎ) ಹೋಲ್ಡ್ ಮೆಕೆಂಜಿ
ಬಿ) ಮಾರ್ಟಿನ್ ಬರ್ಡ್ಸ್
ಸಿ) ಬರ್ಕ್ನ್ ಹೆಡ್
ಡಿ) ಅಲೆಕ್ಸಾಂಡರ್ ರಿಡ್

ಸರಿಯಾದ ಉತ್ತರ : ಬಿ) ಮಾರ್ಟಿನ್ ಬರ್ಡ್ಸ್  

64. ಸಾಂವಿಧಾನಿಕ ತತ್ವವಾದ 'ಮೂಲ ಸಂರಚನೆ' (Basic Structure) ಯಾರ ಕೊಡುಗೆ ?
1) ಕಾರ್ಯಾಂಗ
2) ಸಂವಿಧಾನ ರಚನಾ ಸಭೆ
3) ಸಂಸತ್ತು
4) ನ್ಯಾಯಾಂಗ 


ಸರಿಯಾದ ಉತ್ತರ: 4) ನ್ಯಾಯಾಂಗ 

65. ಕೆಳಗಿನ ಮೂಲಭೂತ ಹಕ್ಕುಗಳಲ್ಲಿ ಯಾವುದು ಅಸ್ಪೃಶ್ಯತೆಯ ವಿರುದ್ಧ ರಕ್ಷಣೆಯನ್ನು ಒಳಗೊಂಡಿದೆ ?
ಎ) ಶೋಷಣೆಯ ವಿರುದ್ಧ ಹಕ್ಕು
ಬಿ) ಸ್ವಾತಂತ್ರ್ಯದ ಹಕ್ಕು
ಸಿ) ಸಾಂವಿಧಾನಿಕ ಪರಿಹಾರಗಳ ಹಕ್ಕು
ಡಿ) ಸಮಾನತೆಯ ಹಕ್ಕು 


ಸರಿಯಾದ ಉತ್ತರ : ಡಿ) ಸಮಾನತೆಯ ಹಕ್ಕು  

66. ಗರಜಟ್ ಬೆಟ್ಟಗಳು ಯಾವ ರಾಜ್ಯದಲ್ಲಿ ಕಂಡುಬರುತ್ತವೆ ?
ಎ) ಛತ್ತಿಸ್‌ಗಡ್
ಬಿ) ಒಡಿಶಾ
ಸಿ) ಮೇಘಾಲಯ
ಡಿ) ಮಧ್ಯ ಪ್ರದೇಶ


ಸರಿಯಾದ ಉತ್ತರ : ಬಿ) ಒಡಿಶಾ 

67. ಭಾರತದಲ್ಲಿ ಈ ಕೆಳಗಿನ ಯಾವ ಮಣ್ಣು ಅತಿ ಹೆಚ್ಚು ಕಂಡುಬರುತ್ತದೆ ?
ಎ) ಕಪ್ಪುಮಣ್ಣು
ಬಿ) ಕೆಂಪು ಮಣ್ಣು
ಸಿ) ಲ್ಯಾಟಕಿಟ್ ಮಣ್ಣು
ಡಿ) ಮೆಕ್ಕಲು ಮಣ್ಣು 


ಸರಿಯಾದ ಉತ್ತರ: ಡಿ) ಮೆಕ್ಕಲು ಮಣ್ಣು   

68. ಆಲಿಯಾಬೆಟ್ ಇದು ಯಾವ ನದಿಯಲ್ಲಿ ಕಂಡುಬರುವ ಅತಿ ದೊಡ್ಡ ದ್ವೀಪ ?
ಎ) ನರ್ಮದಾ ನದಿ
ಬಿ) ತಪತಿ ನದಿ
ಸಿ) ಗೋದಾವರಿ ನದಿ
ಡಿ) ಕೃಷ್ಣಾ ನದಿ


ಸರಿಯಾದ ಉತ್ತರ : ಎ) ನರ್ಮದಾ ನದಿ 

69. ರೈಲ್ವೆ ಸ್ಟ್ರಿಂಗ್ ಕಾರ್ಖಾನೆ ಯಾವ ನಗರದಲ್ಲಿದೆ ?
ಎ) ಕಪರ್ತಾಲ್
ಬಿ) ಪೆರಂಬೂರ
ಸಿ) ಗ್ವಾಲಿಯರ್
ಡಿ) ಚಿತ್ತರಂಜನ್


ಸರಿಯಾದ ಉತ್ತರ: ಸಿ) ಗ್ವಾಲಿಯರ್ 

70. ಜಯಕವಾಡಿ (ಪೈಥಾನ್) ಜಲವಿದ್ಯುತ್ ಯೋಜನೆ ಯಾವ ದೇಶದ ಸಹಾಯದಿಂದ ಪೂರ್ಣಗೊಂಡಿದೆ ?
ಎ) ಜಪಾನ್
ಬಿ) ಜರ್ಮನಿ
ಸಿ) ರಷ್ಯಾ
ಡಿ) ಫ್ರಾನ್ಸ್


ಸರಿಯಾದ ಉತ್ತರ: ಎ) ಜಪಾನ್ 


71. ಭಾರತದಲ್ಲಿ ಹಲವು ಕೈಗಾರಿಕೆಗಳು ರೋಗಗ್ರಸ್ತವಾಗಲು ಮುಖ್ಯ ಕಾರಣವೇನು ?
ಎ) ಕಾರ್ಮಿಕರ ಸಮಸ್ಯೆ
ಬಿ) ಅಸಮರ್ಪಕ ಆಡಳಿತ
ಸಿ) ಸಾರಿಗೆ ವ್ಯವಸ್ಥೆಯ ಸಮಸ್ಯೆ
ಡಿ) ಕಚ್ಚಾವಸ್ತುಗಳ ಕೊರತೆ


ಸರಿಯಾದ ಉತ್ತರ: ಬಿ) ಅಸಮರ್ಪಕ ಆಡಳಿತ 

72. ಇವುಗಳಲ್ಲಿ ಎರಡನೇ ವಲಯ ಯಾವುದು ?
ಎ) ದೂರಸಂಪರ್ಕ
ಬಿ) ವಿದ್ಯುತ್
ಸಿ) ವ್ಯಾಪಾರ
ಡಿ) ಸರಕು ಸಾಗಣೆ


ಸರಿಯಾದ ಉತ್ತರ: ಬಿ) ವಿದ್ಯುತ್  

73. ರೂಪಾಯಿಯನ್ನು ಮೊದಲ ಬಾರಿಗೆ ಅಪಮೌಲ್ಯಗೊಳಿಸಿದಾಗ ಭಾರತದ ಹಣಕಾಸು ಸಚಿವರಾಗಿದ್ದವರು ಯಾರು ?
ಎ) ಸಚೇಂದ್ರ ಚೌಧರಿ
ಬಿ) ಸಿ. ಡಿ. ದೇಶಮುಖ
ಸಿ) ಟಿ.ಟಿ. ಕೃಷ್ಣಮಾಚಾರಿ
ಡಿ) ಜಾನ್ ಮಥಾಯಿ 


ಸರಿಯಾದ ಉತ್ತರ: ಡಿ) ಜಾನ್ ಮಥಾಯಿ 

74. ಭಾರತೀಯ ರೈಲ್ವೆ ವಲಯಗಳನ್ನು ಹಾಗೂ ಅವುಗಳ ಮುಖ್ಯ ಕಾರ್ಯಾಲಯವಿರುವ ಸ್ಥಳಗಳನ್ನು ಹೊಂದಿಸಿ.
ಎ) ಉತ್ತರ ಪೂರ್ವ                1. ಬಿಲಾಸಪುರ
ಬಿ) ಪೂರ್ವ ಕೇಂದ್ರ                2. ಅಲಹಾಬಾದ
ಸಿ) ಉತ್ತರ ಕೇಂದ್ರ                3. ಗೋರಖಪುರ
ಡಿ) ದಕ್ಷಿಣ ಪೂರ್ವ ಕೇಂದ್ರ       4. ಹಾಜಿಪುರ
ಆಯ್ಕೆಗಳು
     ಎ ಬಿ ಸಿ ಡಿ
ಎ) 4 3 2 1
ಬಿ) 2 3 1 4
ಸಿ) 3 4 1 2
ಡಿ) 3 4 2 1


ಸರಿಯಾದ ಉತ್ತರ: ಡಿ) 3 4 2 1 

75. ಈ ಕೆಳಗಿನ ಭಾರತದ ಯಾವ ರಾಜ್ಯವು ಪೆಟ್ರೋಲಿಯಂ (ಕಚ್ಚಾ) ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ ?
ಎ) ರಾಜಸ್ಥಾನ್ 
ಬಿ) ಅಸ್ಸಾಂ
ಸಿ) ಗುಜರಾತ್
ಡಿ) ಆಂಧ್ರ ಪ್ರದೇಶ


ಸರಿಯಾದ ಉತ್ತರ: ಎ) ರಾಜಸ್ಥಾನ್ 

76. ಬಯಲು ಪ್ರದೇಶಕ್ಕಿಂತ ಮರಳುಗಾಡಿನಲ್ಲಿ ರಾತ್ರಿ ಹೆಚ್ಚು ತಂಪಾಗಿರುವುದಕ್ಕೆ ಕಾರಣ ?
ಎ) ಭೂಮಿಗಿಂತ ಮರಳು ಉಷ್ಣಾಂಶವನ್ನು ಬೇಗನೇ ವಿಕಿರಣಗೊಳಿಸುವುದರಿಂದ
ಬಿ) ಭೂಮಿಗಿಂತ ಮರಳು ಉಷ್ಣಾಂಶವನ್ನು ಬೇಗನೇ ಹೀರುವುದರಿಂದ
ಸಿ) ಭೂಮಿಗಿಂತ ಮರಳು ಉಷ್ಣಾಂಶವನ್ನು ಬೇಗನೇ ವಿಕಿರಣಗೊಳಿಸುವುದಿಲ್ಲ
ಡಿ) ಮೇಲಿನ ಯಾವುದೂ ಅಲ್ಲ


ಸರಿಯಾದ ಉತ್ತರ: ಎ) ಭೂಮಿಗಿಂತ ಮರಳು ಉಷ್ಣಾಂಶವನ್ನು ಬೇಗನೇ ವಿಕಿರಣಗೊಳಿಸುವುದರಿಂದ 

77. ಪಿಚಾವರಂ ಮತ್ತು ಮುತ್ತಪೇಟ ಮ್ಯಾಂಗೋ ಅರಣ್ಯಗಳು ಕಂಡು ಬರುವ ರಾಜ್ಯ ?
ಎ) ಆಂಧ್ರಪ್ರದೇಶ
ಬಿ) ತಮಿಳುನಾಡು
ಸಿ) ಕೇರಳ
ಡಿ) ಓಡಿಶಾ


ಸರಿಯಾದ ಉತ್ತರ: ಬಿ) ತಮಿಳುನಾಡು 

78. ರೇಡಾರ್ ಮತ್ತು ರೇಡಾರ ಗನ್‌ಗಳು ಈ ಕೆಳಗಿನ ಯಾವ ತತ್ವದ ಮೇಲೆ ಕೆಲಸ ನಿರ್ವಹಿಸುತ್ತವೆ ?
ಎ) ಆರ್ಕಿಮಿಡಿಸನ ತತ್ವ
ಬಿ) ನ್ಯೂಟನ್ ತತ್ವ
ಸಿ) ಡಾಪ್ಲಾರ್ ಪರಿಣಾಮ ತತ್ವ
ಡಿ) ಕೆಪ್ಲರ್ ತತ್ವ


ಸರಿಯಾದ ಉತ್ತರ: ಸಿ) ಡಾಪ್ಲಾರ್ ಪರಿಣಾಮ ತತ್ವ 

79. ಕನ್ನಡಿಯ ಹಿಂಭಾಗಕ್ಕೆ ಈ ಲೋಹದ ತೆಳು ಲೇಪನ ಮಾಡಿರುತ್ತಾರೆ ?
ಎ) ಕೆಂಪು ಆನ್ಲೈಡ್
ಬಿ) ಸಿಲ್ವರ ನೈಟ್ರಿಲಸ್
ಸಿ) ಪಾದರಸ
ಡಿ) ಸಿಲ್ವರ್ 


ಸರಿಯಾದ ಉತ್ತರ : ಡಿ) ಸಿಲ್ವರ್ 

80. ದಂತ ವೈದ್ಯರು ಈ ಕೆಳಗಿನ ಯಾವ ರೀತಿಯ ಮಸೂರ ಬಳಸುತ್ತಾರೆ ?
ಎ) ಪೀನ ಮಸೂರ
ಬಿ) ನಿಮ್ನ ಮಸೂರ
ಸಿ) ಪೀನ ಮಸೂರ
ಡಿ) ನಿಮ್ನ ದರ್ಪಣ

ಸರಿಯಾದ ಉತ್ತರ: ಬಿ) ನಿಮ್ನ ಮಸೂರ  


81. ಭಾರತದ ಮೊದಲ ಪ್ರಿಂಟೆಕ್ ಕ್ಲಸ್ಟರ್ ಪಾರ್ಕ್ ನ್ನು ಕರ್ನಾಟಕದ ಯಾವ ಜಿಲ್ಲೆಯಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ ?
ಎ) ಬೆಳಗಾವಿ
ಬಿ) ರಾಮನಗರ
ಸಿ) ತಮಕೂರು
ಡಿ) ದಾವಣಗೆರೆ


ಸರಿಯಾದ ಉತ್ತರ : ಬಿ) ರಾಮನಗರ 

82. ದೇಶದ ಮೊದಲ “ಹೈಪರ್ ಲೂಪ್ ಯೋಜನೆ” ಯಾವ ಎರಡು ನಗರಗಳ ನಡುವೆ ನಿರ್ಮಿಸಲು ಯೋಜಿಸಲಾಗಿದೆ ?
ಎ) ದೆಹಲಿ ಟು ಮೀರತ್
ಬಿ) ಮುಂಬೈ ಟು ಹೌರಾ
ಸಿ) ಕಲ್ಕತ್ತಾ ಟು ದೇವಗಡ
ಡಿ) ಮುಂಬೈ ಟು ಪುಣೆ 


ಸರಿಯಾದ ಉತ್ತರ: ಡಿ) ಮುಂಬೈ ಟು ಪುಣೆ 

83. ಇತ್ತೀಚೆಗೆ ಭೂಕಂಪದಿಂದ ತತ್ತರಿಸಿದ “ಸುಲಾವೆಸಿ ದ್ವೀಪ” ಯಾವ ದೇಶದಲ್ಲಿದೆ ?
ಎ) ಜಪಾನ
ಬಿ) ಮಡಗಾಸ್ಕರ
ಸಿ) ಇಂಡೊನೆಷ್ಯಾ
ಡಿ) ರಷ್ಯಾ


ಸರಿಯಾದ ಉತ್ತರ: ಸಿ) ಇಂಡೊನೆಷ್ಯಾ 

84. ದೋಣಿ ಆಂಬುಲೆನ್ಸ್ ನ್ನು ಒದಗಿಸುವ ಮೂಲಕ ಆರೋಗ್ಯ ಸೇವೆಯನ್ನು ಒದಗಿಸಲು ಕ್ರಮಕೈಗೊಂಡಿರುವ ರಾಜ್ಯ ಯಾವುದು ?
ಎ) ಒಡಿಶಾ
ಬಿ) ಗುಜರಾತ
ಸಿ) ತಮಿಳುನಾಡು
ಡಿ) ಹರಿಯಾಣ


ಸರಿಯಾದ ಉತ್ತರ: ಎ) ಒಡಿಶಾ 

85. ಇತ್ತೀಚೆಗೆ ಸುದ್ದಿಯಲ್ಲಿದ್ದ ನ್ಯೂಕ್ಲಿಯರ್ ವಿಜ್ಞಾನಿ ಮೊಹಸೆನ್ ಪಬ್ರಿಝದೇಹ ಹತ್ಯೆಗೊಳಗಾದರು ಇವರು ಯಾವ ದೇಶಕ್ಕೆ ಸೇರಿದವರು?
ಎ) ಇಸ್ರೇಲ್
ಬಿ) ಯುಎಇ
ಸಿ) ಇರಾಕ್
ಡಿ) ಇರಾನ್ 


ಸರಿಯಾದ ಉತ್ತರ : ಡಿ) ಇರಾನ್  

86. ಯಾವ ಎರಡು ದೇಶಗಳ ನಡುವೆ ALUAN (Air Launched Unmanned Aerial Vehicle) ಹೆಸರಿನ
ಯೋಜನೆಯ ಅಭಿವೃದ್ಧಿಗೆ ಒಪ್ಪಂದ ಏರ್ಪಟ್ಟಿದೆ ?
ಎ) ಭಾರತ-ರಷ್ಯಾ
ಬಿ) ಭಾರತ-ಅಮೇರಿಕಾ
ಸಿ) ಭಾರತ -ಜಪಾನ್
ಡಿ) ಭಾರತ-ಬಾಂಗ್ಲಾದೇಶ


ಸರಿಯಾದ ಉತ್ತರ: ಬಿ) ಭಾರತ-ಅಮೇರಿಕಾ 

87. 2021ರ ರಾಮನ್ ಮ್ಯಗ್ನೆಸ್ ಪ್ರಶಸ್ತಿ ಪಡೆದ ಬಾಂಗ್ಲಾ ದೇಶದ ಲಸಿಕಾ ವಿಜ್ಞಾನಿ ಯಾರು ?
ಎ) ಫಿರ್ದೋಷಿ ನಾದ್ರಿ
ಬಿ) ಧೂರ್ಜೆ ಅಂಗ್ಟಕ್‌
ಸಿ) ಸಂಜಯ್ ಧಾಬೋಲ್
ಡಿ) ಬಿಸ್ವಜಿಸ್ ಚಟರ್ಜಿ


ಸರಿಯಾದ ಉತ್ತರ: ಎ) ಫಿರ್ದೋಷಿ ನಾದ್ರಿ 

88. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದವರು ಇತ್ತೀಚಿಗೆ ತೇಲುವ ATM ನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ. ಹಾಗಾದರೆ ಅದನ್ನು ಸ್ಥಾಪಿಸಲು ನಿರ್ಧರಿಸುವ ಸರೋವರ ಯಾವುದು ?
ಎ) ಕೊಲ್ಲೆರು ಸರೋವರ
ಬಿ) ಲೋನಾರ ಸರೋವರ
ಸಿ) ದಾಲ್ ಸರೋವರ
ಡಿ) ನಾಳ ಸರೋವರ


ಸರಿಯಾದ ಉತ್ತರ: ಸಿ) ದಾಲ್ ಸರೋವರ 

89. ರಾಷ್ಟ್ರೀಯ ಜಲ ಸಮ್ಮೇಳನದ ಆತಿಥ್ಯ ವಹಿಸಿದ ಭಾರತದ ನಗರ ಯಾವುದು ?
ಎ) ಮುಂಬೈ
ಬಿ) ಸೂರತೆ
ಸಿ) ವಾರಣಾಸಿ
ಡಿ) ಭೂಪಾಲ್ 


ಸರಿಯಾದ ಉತ್ತರ: ಡಿ) ಭೂಪಾಲ್ 

90. ಯಾವ ವರ್ಷದಲ್ಲಿ ಚೀನಾ ತನ್ನ ಮಹತ್ವಾಕಾಂಕ್ಷೆಯ ಒಂದು ಬೆಲ್ಸ್ ಮತ್ತು ಒಂದು ರಸ್ತೆ ಉಪಕ್ರಮವನ್ನು ಆರಂಭಿಸಿತು ?
ಎ) 2013
ಬಿ) 2015
ಸಿ) 2018
ಡಿ) 2020


ಸರಿಯಾದ ಉತ್ತರ : ಎ) 2013 


91 ಮೆಕ್‌ಮೇಕ್, ಐರಿಸ್ & ಸೌಮಿಯಾ ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುತ್ತಿವೆ. ಏನಿವು ?
ಎ) ಅತಿ ದೊಡ್ಡ ಕಪ್ಪು ಕುಳಿಗಳು
ಬಿ) ಕುಬ್ಜ ಗ್ರಹಗಳು
ಸಿ) ಕ್ಷುದ್ರ ಗ್ರಹಗಳು
ಡಿ) ಚಂದ್ರನ ಕುಳಿಗಳು


ಸರಿಯಾದ ಉತ್ತರ: ಬಿ) ಕುಬ್ಜ ಗ್ರಹಗಳು 

92. AUKUS ಭದ್ರತಾ ಮೈತ್ರಿ ಯಾವ ದೇಶಗಳ ಮಧ್ಯೆಯಾಗಿದೆ?
ಎ) ಅಜರ್‌ಬೈಜಾನ್, ಯುನೈಟೆಡ್ ಕಿಂಗ್‌ಡಮ್, ಯು.ಎಸ್.ಎ
ಬಿ) ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‌ಡಮ್, ಯು.ಎಸ್.ಎ
ಸಿ) ಆಸ್ಟ್ರೇಲಿಯಾ, ಕಜಕಸ್ತಾನ್, ಯು.ಎಸ್.ಎ
ಡಿ) ಅರ್ಮೆನಿಯಾ, ಕಜಕಸ್ತಾನ್, ಜಪಾನ್


ಸರಿಯಾದ ಉತ್ತರ: ಬಿ) ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‌ಡಮ್, ಯು.ಎಸ್.ಎ

93 ನ್ಯೂಕ್ಲಿಯರ್ ನಾನ್ ಪ್ರೊಲಿಪರೇಶನ್ (ಪರಮಾಣು ಶಸ್ತ್ರಾಸ್ತ್ರಗಳ ತಡೆ ಒಪ್ಪಂದಕ್ಕೆ ಸಹಿ ಹಾಕದೇ ಇರುವ ದೇಶಗಳು
1) ಭಾರತ
2) ಪಾಕಿಸ್ತಾನ
3) ಇಸ್ರೇಲ್
4) ದಕ್ಷಿಣ ಸುಡಾನ್
ಎ) 1 & 2
ಬಿ) 2 & 4
ಸಿ) 1, 2 & 3
ಡಿ) 1,2,3 & 4


ಸರಿಯಾದ ಉತ್ತರ: ಡಿ) 1,2,3 & 4  

94 ಇತ್ತೀಚೆಗೆ ಭಾರತ ಸರ್ಕಾರವು ಸ್ಥಾಪಿಸಿದ ಬ್ಯಾಡ್ ಬ್ಯಾಂಕ್‌ಗಳು ಯಾವುವು ?
ಎ) NARCL
ಬಿ) IDRCL
ಸಿ) ಎ & ಬಿ
ಡಿ) ಯಾವುದೂ ಅಲ್ಲ



ಸರಿಯಾದ ಉತ್ತರ: ಸಿ) ಎ & ಬಿ

95 RATS ಪ್ರಾದೇಶಿಕ ಭಯೋತ್ಪಾದನಾ ವಿರೋಧಿ ಸಂಸ್ಥೆ ರಚನೆಯಾಗಿದ್ದು, ಯಾವುದರ ಅಂಗವಾಗಿದೆ?
ಎ) CSTD
ಬಿ) SCO
ಸಿ) ASEAN
ಡಿ) SAARC


ಸರಿಯಾದ ಉತ್ತರ : ಸಿ) ಬ್ರಿಸ್ಟನ್ 

96. ಇತ್ತೀಚೆಗೆ ಸುದ್ದಿಯಲ್ಲಿರುವ ಕರ್ಲಾಪಟ್ ವನ್ಯಜೀವಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ ?
ಎ) ಕರ್ನಾಟಕ
ಬಿ) ಪಶ್ಚಿಮ ಬಂಗಾಳ
ಸಿ) ಒಡಿಶಾ
ಡಿ) ಅಸ್ಸಾಂ


ಸರಿಯಾದ ಉತ್ತರ: ಸಿ) ಒಡಿಶಾ 

97. ಕೆಳಗಿನವುಗಳಲ್ಲಿ ಯಾವುದು ಸರಿ ಹೊಂದಾಣಿಕೆಯಾಗಿದೆ
ಭಾರತದೊಂದಿಗೆ ವ್ಯಾಯಾಮ      ದೇಶ
1. ಸಮುದ್ರಶಕ್ತಿ (ನೌಕಾ) ಇಂಡೋನೇಷಿಯಾ
2. ಪ್ರಬಲ್ ದೋಸ್ತಿಕ್ (ಮಿಲಿಟರಿ) ಕಜಕಸ್ತಾನ್
3. ಖಂಜರ್ (ಮಿಲಿಟರಿ) ತುರ್ಕಮೆನಿಸ್ತಾನ
4. KAZIND (ಮಿಲಿಟರಿ) ಕಜಕಿಸ್ತಾನ್
     ಆಯ್ಕೆಗಳು
ಎ) 1 ಮತ್ತು 4
ಬಿ) 2, 3 ಮತ್ತು 4
ಸಿ) 1 ಮತ್ತು 3
ಡಿ) 1, 2, 3 ಮತ್ತು 4


ಸರಿಯಾದ ಉತ್ತರ: ಡಿ) 1, 2, 3 ಮತ್ತು 4

98, ಇತ್ತೀಚೆಗೆ ಸುದ್ದಿಯಲ್ಲಿರುವ ಫಿಯೊ ಫಿನೋಲ್ಲು ದ್ವೀಪವು ಯಾವ ದೇಶದಲ್ಲಿದೆ ?
ಎ) ಮಾರಿಷಸ್
ಬಿ) ಶ್ರೀಲಂಕಾ
ಸಿ) ಮಾಲ್ಡೀವ್ಸ್
ಡಿ) ಮೆಡಗಾಸ್ಕರ್


ಸರಿಯಾದ ಉತ್ತರ : ಸಿ) ಮಾಲ್ಡೀವ್ಸ್ 

99. ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ ?
          ಪೋರ್ಟಲ್                     ಗುರಿ
1. ಸಂತುಷ್ಟ                 ಕಾರ್ಮಿಕ ಕಾನೂನುಗಳ ಜಾರಿ
2. ಇ-ದಾಖಿಲ್             ಗ್ರಾಹಕರ ಕುಂದುಕೊರತೆ ಪರಿಹಾರ
3. ಇ-ಗೋಪಾಲ          ಸಮಗ್ರ ತಳಿ ಸುಧಾರಣೆ
4. ಉದ್ಯಮ್                MSME ನೋಂದಣಿಗಾಗಿ
ಆಯ್ಕೆಗಳು
ಎ) 1 ಮತ್ತು 4
ಬಿ) 2, 3 ಮತ್ತು 4
ಸಿ) 1 ಮತ್ತು 3
ಡಿ) 1, 2, 3 ಮತ್ತು 4


ಸರಿಯಾದ ಉತ್ತರ : ಡಿ) 1, 2, 3 ಮತ್ತು 4

100.ಇತ್ತೀಚೆಗೆ ಗಲ್ಸ್ ಆಫ್ ಅಡೆನ್‌ನಲ್ಲಿ, ಭಾರತ ಮತ್ತು EU ನೌಕಾ ಪಡೆಗಳ ಮಧ್ಯ EU-NAVFOR ಜಂಟಿ ನೌಕಾ ಸಮರಾಭ್ಯಾಸ ನಡೆದಿದೆ. ಇದನ್ನು ಏನೆಂದು ಕರೆಯಲಾಗಿದೆ ?
ಎ) ಆಪರೇಷನ್ ಅಟಲಾಂಟಾ
ಬಿ) ಆಪರೇಷನ್ ಸರ್ಚ್ಲೈಟ್
ಸಿ) ಆಪರೇಷನ್ ಅಲೈಡ್ ಪ್ರೊಟೆಕ್ಟರ್
ಡಿ) ಆಪರೇಷನ್ ಅಕಿಲ್


ಸರಿಯಾದ ಉತ್ತರ: ಎ) ಆಪರೇಷನ್ ಅಟಲಾಂಟಾ  

Edutube Kannada ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ Edutube Kannada ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ

ಮಾಹಿತಿ ಸೌಜನ್ಯ : Param Academy.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area